ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಯ ಮೂಲಕ ತಹಶೀಲ್ದಾರ್ಗೆ ಮನವಿ
ಕುಕನೂರು 10: ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಕುಕನೂರು ಪಟ್ಟಣದ ರಾಘವಾನಂದ ಮಠದಿಂದ ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರ್ಪ ವೃತ್ತದ ವರೆಗೆ ಪ್ರತಿಭಟನೆಯ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸರು ಸೇನೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ ಮಾತನಾಡಿ ಕುಕನೂರು ಪಟ್ಟಣದ ಎಪಿಎಂಸಿ ಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಹಾಗೂ ಮುಂದೆ ಬರುವ ಹೆಸರು, ಮೆಕ್ಕೆಜೋಳ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೊಂದಣಿ ಪ್ರಕ್ರಿಯೆಯನ್ನು ಬೆಳೆ ಬರುವ ಮುನ್ನವೇ ಮಾಡಬೇಕು. ಪ್ರತಿ ಸೆರೆಯು ಬೆಳೆ ಬಂದ ಮೇಲೆ ಬೆಂಬಲ ಬೆಲೆ ಘೋಷಣೆ ಮಾಡುತ್ತೀರಿ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಈಗಿನಿಂದಲೇ ಬೆಂಬಲ ಬೆಲೆ ಕುರಿತು ತಯಾರಿ ಮಾಡಿಕೊಳ್ಳಬೇಕು.
ಈಗ ಸುಮಾರು 40 ವರ್ಷಗಳಿಂದ ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ. ಮತ್ತು ಪಟ್ಟಣದ ಕಸ ವಿಲೇವಾರಿ ಘಟಕ ಕಳಪೆ ಮಟ್ಟದಿಂದ ನಡೆಯುತ್ತಿದ್ದು ಸಾಕಷ್ಟು ಬಾರಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದರು ಸಹಿತ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಇನ್ನು ಮುಂದಾದರು ಪಟ್ಟಣದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ಮಾಡದಿದ್ದರೆ ಮತ್ತು ಕಳಪೆ ಮಟ್ಟದ ಕಸ ವಿಲೇವಾರಿ ಘಟಕದ ಕಾಮಗಾರಿಯ ಬಗ್ಗೆ ಆರ್ಥಿಕ ಸಲಹೆಗಾರರು, ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮತ್ತು ಜಿಲ್ಲಾಧಿಕಾರಿಗಳು, ಕೃಷಿ ಮಂತ್ರಿಗಳು ಗಮನಹರಿಸಿ ಬೇಗನೇ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಎಚ್ ಪ್ರಾಣೇಶ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕುಕನೂರು ತಾಲೂಕ ಮಹಿಳಾ ಘಟಕದ ಅಧ್ಯಕ್ಷರಾದಗಂಗಮ್ಮ ಹೂಡೆದ ಮಾತನಾಡಿ ಮುಂದೆ ಬರುವ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಎಪಿಎಂಸಿ ಯಲ್ಲಿ ಟೆಂಡರ್ ಪ್ರಕ್ರಿಯೆ ಆವರಣದಲ್ಲಿ ರೈತರಿಗೆ ರೈತ ಭವನವನ್ನು ನಿರ್ಮಿಸಿಕೊಡಬೇಕು ಮತ್ತು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು . ಬೇಡಿಕೆಗಳನ್ನು ಈಡೇರಿಸದೆ ಇದ್ದ ಪಕ್ಷದಲ್ಲಿ ಕುಕುನೂರು ಯಲಬುರ್ಗಾ ಬಂದ ಕರೆ ಕೊಟ್ಟು ಅನಿರ್ದಿಷ್ಟಾವಧಿ ಧರಣಿ ಮತ್ತು ಹೋರಾಟ ಮಾಡಲಾಗುವುದು ಅಧಿಕಾರಿಗಳು ಗಮನವಿಟ್ಟು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.ನಗರ ಘಟಕ ಅಧ್ಯಕ್ಷ ಶಿವು ಬಂಗಿ ರೈತರ ವಿವಿಧ ಬೇಡಿಕೆಗಳ ಬಗ್ಗೆ ಮಾತನಾಡಿದರು.ಎಚ್ ಪ್ರಾಣೇಶ್ ತಹಶೀಲ್ದಾರರು ಮಾತನಾಡಿ ರೈತರ ಬೇಡಿಕೆಗಳನ್ನು ಆದಷ್ಟು ಬೇಗ ಮೇಲಾಧಿಕಾರಿಗಳಿಗೆ ಕಳಿಸಿ ಬಗೆಹರಿಸಲು ತಿಳಿಸುತ್ತೇನೆ ಎಂದು ಮನವಿಯನ್ನು ಸ್ವೀಕರಿಸಿದರು.ಬಸವರಾಜ ಸಬರದ ಗೌರವ ಅಧ್ಯಕ್ಷರು, ಹನುಮಪ್ಪ ಮರಡಿ ಉಪಾಧ್ಯಕ್ಷರು, ಬಸಪ್ಪ ಲಾಲ್ ಗುಂಡೂರ ಹಿರಿಯ ಸಲಹೆಗಾರರು, ವೀರಯ್ಯ ತೋಂಟದಾರ್ಯ ಮಠ,ಈರ್ಪ ಈ ಬೇರಿ, ಮಹಮ್ಮದ್ ರಫಿ ಸವಣೂರು, ಉಮೇಶ್ ಬಿದವಟ್ಟಿ, ಶಿವಪ್ಪ ಯತ್ನಟ್ಟಿ, ಕೆಂಚಪ್ಪ, ಈರ್ಪ ಗುಳಗಣ್ಣನವರ್, ಮಹದೇವಪ್ಪ ಕುರಿ, ವೀರ್ಪ ಕೂಡ್ಲೂರು, ಬಸಪ್ಪ ಮಂಡಲಗೇರಿ, ಮಲ್ಲಪ್ಪ ಮೂಲಿಮನಿ, ಎಚ್ ಎಮ್ ಮರಡಿ, ಮಲ್ಲಪ್ಪ ಯತ್ನಟ್ಟಿ, ಶರಣಪ್ಪ ಚೆಂಡೂರ, ರಾಮಣ್ಣ ಬಳ್ಳಾರಿ, ಬಸಪ್ಪ ಬಂಗಿ, ಯಲ್ಲಪ್ಪ ಕಲಾಲ್, ಬಸವರಾಜ್ ಸಬರದ, ಚಂದ್ರಶೇಖರ ವಸ್ತ್ರದ, ಶರಣಪ್ಪ ಯತ್ನಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ರೈತರು ಇತರರು ಇದ್ದರು.