ಅದ್ಧೂರಿಯಾಗಿ ಜರುಗಿದ ಧಾರವಾಡ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾವೇಶ
ಧಾರವಾಡ, 06 : ಇತ್ತೀಚಿಗೆ ದಿನಾಂಕ 01-06-2025 ರಂದು ಪೇಡಾ ನಗರಿ ಧಾರವಾಡದಲ್ಲಿ ದಿಽಽ ಗವರ್ನರ್, ರಾ್ಯಂಗ್ಲರ್, ಡಾ.ಡಿ.ಸಿ.ಪಾವಟೆ ವೇದಿಕೆಯ ಮೂಲಕ ಅಕ್ಕನ ಬಳಗ, ಧಾರವಾಡದಲ್ಲಿ ಕುಲಗುರು ಶ್ರೀ ಶಿವದಾಸಿಮಯ್ಯನವರ ಜಯಂತ್ಯೋತ್ಸವ, 101 ಕುಂಭ ಮೆರವಣಿಗೆ, ಸಮಾಜದ ಹಿರಿಯ ನಾಗರೀಕರಿಗೆ ಸನ್ಮಾನ, ಎಸ್,ಎಸ್,ಎಲ್,ಸಿ / ಪಿ.ಯು.ಸಿಯಲ್ಲಿ ಶೇ 90ಅ ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರಿಗೆ ಸಾಧಕ ಪ್ರಶಸ್ತಿ ಸನ್ಮಾನ ಹಾಗೂ ದಾನಿಗಳಿಗೆ, ಮಹಾದಾನಿಗಳಿಗೆ ಪ್ರೀತಿಯ ಸನ್ಮಾನ ಕಾರ್ಯಕ್ರಮ ಜನಸಾಗರದ ಮಧ್ಯದಲ್ಲಿ ಜರುಗಿತು. ಅಂದು ಬೆಳಿಗ್ಗೆ 8.00 ಘಂಟೆಗೆ ಶ್ರೀ ಉಳವಿ ಬಸವೇಶ್ವರ ದೇವಸ್ಥಾನದಿಂದ ಅಕ್ಕನಬಳಗದವರೆಗೆ ಪರಮಪೂಜ್ಯ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಮುರುಘಾಮಠ, ಧಾರವಾಡ ಇವರ ಅಮೃತ ಹಸ್ತದ ಮೂಲಕ 101 ಕುಂಭಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸತ್ಯ ಶುದ್ಧ ಕಾಯಕದ ಮೂಲಕ ಶಿವನಿಂದ ಪರಮ ನಿಸ್ವಾರ್ಥ ವರ ಸ್ವೀಕರಿಸಿದ ಶಿವಶಿಂಪಿ ಸಮಾಜದ ಕುಲಗುರು ಶ್ರೀ ಶಿವದಾಸಿಮಯ್ಯನವರು 12ನೇ ಶತಮಾನದ ಶರಣರ ಪಂಕ್ತಿಯಲ್ಲಿ ಅಗ್ರಗಣ್ಯರು. ಇಂತಹ ಶರಣರ ಜಯಂತ್ಯೋತ್ಸವವನ್ನು 101 ಕುಂಭಗಳ ಮೆರವಣಿಗೆಯ ಮೂಲಕ ಭಕ್ತಿ ಭಾವದಿಂದ ಮಾಡುತ್ತಿರುವುದು ಅರ್ಥಪೂರ್ಣವಾದುದು ಎಂದು ತಿಳಿಸಿ ಕುಂಭದ ಮಹತ್ವ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಸಲ್ಲಿಸಿದರು. ಶ್ರೀಮತಿ ಕಸ್ತೂರಿ ಈರಣ್ಣ ಮುದಕವಿ, ಶಾಂತಾ ಶಿವಶಂಕರ ಕಾಲದೀಪ, ಗೀತಾ ಶಂಕರ ಸಣಕಲ್ಲ, ಸರಸ್ವತಿ ಅಲ್ಲಮಪ್ರಭು ಕುಬಸದ, ಜಯಶೀಲಾ ನಂದಿಕೇಶ್ವರ ಯಾದವಾಡ, ಪ್ರೇಮಾ ಮದ್ದೀನ ಹಾಗೂ ಶ್ರೀ ಆರ್.ಬಿ ಶಿವಾನಂದಪ್ಪ, ಸಂಜೀವಕುಮಾರ ಹಡಗಲಿ, ಸಂತೋಷ ಚಿದಾನಂದ ಗಂಗಣ್ಣವರ, ಅಜೀತ ಖೋದಾನಪೂರ, ಕುಮಾರೇಶ ಪಾವಟೆ, ಡಾಽಽ ಮಹಾಂತೇಶ ಕುಬಸದ, ರಾಜಶೇಖರ ಬಳೂಟಗಿ, ಇವರ ನೇತೃತ್ವದಲ್ಲಿ ಸಕಲ ವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆ ಯಶಸ್ವಿಯಾಗಿ ಜರುಗಿತು. ಮಹಾ ದಾಸೋಹಿಗಳಾದ ಶ್ರೀಮತಿ ಸುಮಿತ್ರಾ ಶಿವಾನಂದ ಕುಬಸದ ಇವರ ಹಿರಿಯಾಸೆಯ ಮೇರೆಗೆ ಸುಪುತ್ರನಾದ ಶ್ರೀಶೈಲ ಶಿವಾನಂದ ಕುಬಸದ, ಅಟೋ ಇಂಜೀನೀಯರ್ಸ, ಹೈದ್ರಾಬಾದ ಇವರ ಉಪಹಾರ ಹಾಗೂ ಮಹಾಪ್ರಸಾದ ಸೇವೆಯೂ ಕೂಡಾ ಸಮಾಜದ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ ಬಸವ ಪುರಾಣವನ್ನು ಲೀಲಾಜಾಲವಾಗಿ ನಾಡಿನ ಮೂಲೆಗೂ ಪರಿಚಯಿಸಿದ ಪರಮಪೂಜ್ಯ ಮ.ನಿ.ಪ್ರ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು, ಮೂರುಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ ಶ್ರೀಗಳು ಈ ಕಾರ್ಯಕ್ರಮದ ಕುರಿತು ಶಿವಶಿಂಪಿ ಸಮಾಜ ಬಾಂದವರಲ್ಲಿ ಇರುವ ಭಯ, ಭಕ್ತಿ, ಶ್ರದ್ಧೆ, ಶಿಸ್ತು ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಸಂಘಟನೆಯನ್ನು ಹೇಗೆ ಮಾಡುವುದು ಎಂಬುದನ್ನು ಶಿವಶಿಂಪಿಗರನ್ನು ನೋಡಿ ಎಲ್ಲರೂ ಕಲಿಯಬೇಕು ಹಾಗೂ ಆಮಂತ್ರಣ ಪತ್ರಿಕೆಯ ವಿನ್ಯಾಸ ಕೂಡಾ ಮೆಚ್ಚುವಂತಹುದು ಎಂದರು. ಸಮಾಜವು ಬಡವರನ್ನು ಎತ್ತಿ ಹಿಡಿಯಬೇಕು ಹಾಗೂ ಶ್ರೀಮಂತರು ತಮ್ಮ ಧನಸಹಾಯದ ಮೂಲಕ ಸಮಾಜವನ್ನು ಎತ್ತಿ ಹಿಡಿಯಬೇಕು, ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘ,ನಿಯಮಿತ.ಹುಬ್ಬಳ್ಳಿ ಹಾಗೂ ಶಿಕ್ಷಣ ಸಂಸ್ಥೆಗಳು ನಾಡಿನ ಎಲ್ಲ ಕಡೆಗೂ ಸ್ಥಾಪಿತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯ, ಈ ದಿಶೆಯಲ್ಲಿ ಸಮಾಜ ಬಾಂಧವರ ದೃಷ್ಟಿ ಇರಬೇಕು. ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳಿಗೆ ಹೆಸರಾದವರು ಶಿವಶಿಂಪಿಗರು, ಸತ್ಯ, ಶುದ್ಧ ಕಾಯಕದ ಮೂಲಕ ಶಿವನಿಂದ ಒಳ್ಳೆಯ ದೃಷ್ಟಿಯನ್ನು ವರವಾಗಿ ಪಡೆದವರು ಶ್ರೀ ಶಿವದಾಸಿಮಯ್ಯನವರು ಎಂದು ಆಶಿರ್ವಚನ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾನ್ಯಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಇವರು ಧಾರವಾಡ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾವೇಶದ ಜನರನ್ನು ನೋಡಿ ತಾವು ಉತ್ತಮವಾದ ಸಮಾಜದ ಸಂಘಟನೆ ಮಾಡಿದ್ದು, ಸಂಘಟನೆಯು ಪ್ರತಿ ಸಮಾಜದಲ್ಲಿ ಇರಲೇಬೇಕು. ಇದರಿಂದ ಸಮಾಜದ ಕೆಳವರ್ಗದ ಜನರನ್ನು ಮೇಲೆತ್ತಲು ಸಾಧ್ಯ, ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಬಾಂಧವರಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಸಂಬಂಧಗಳು ಬೆಸೆಯುತ್ತವೆ. ಸತ್ಯ ಶುದ್ಧ ಕಾಯಕದ ಮೂಲಕ ಹೆಸರಾದ ತಮ್ಮೊಂದಿಗೆ ಸದಾ ಬೆಂಬಲವಾಗಿ ಇರುತ್ತೇನೆ. ಸಮುದಾಯ ಭವನದ ನಿವೇಶನದ ಅನ್ವೇಷಣೆಯನ್ನು ನಾನು ಮಾಡುತ್ತೇನೆ. ಜಾಗೆ ದೊರೆತ ಬಳಿಕ ಕಟ್ಟಡ ನಿರ್ಮಾಣಕ್ಕೆ 10ಲಕ್ಷ ರೂ. ಧನ ಸಹಾಯ ನೀಡುತ್ತೇನೆಂದು ಭರವಸೆ ನೀಡಿದರು. ಮಹಾಕವಿ ರನ್ನನ ನಾಡಾದ ಮುಧೋಳದ ಖ್ಯಾತ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಸಾಹಿತಿಗಳು “ಸಮಾಜ ಸಂಘಟನೆಯಲ್ಲಿ ಸಮಾಜ ಬಾಂಧವರ ಪಾತ್ರ” ಈ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಶಿವಶಿಂಪಿ ಸಮಾಜವು ಒಂದು ಚಿಕ್ಕ ಸಮುದಾಯವಾಗಿದ್ದು ಉತ್ತಮ ಸಂಸ್ಕಾರವನ್ನು ಹೊಂದಿದ ಚೊಕ್ಕ ಸಮಾಜ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾನೇನು ಮಾಡಬೇಕು ಎಂಬುದನ್ನು ಅರಿಯಬೇಕು. ಉತ್ತಮ ಶಿಕ್ಷಣ, ಉದ್ಯೋಗಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕು ಹಾಗೂ ಪರಸ್ಪರರು ಪ್ರೀತಿ, ವಿಶ್ವಾಸದಿಂದ ಬಿದ್ದವರನ್ನು ಮೆಲೆತ್ತುವ ಕಾರ್ಯ ಮಾಡಬೇಕು. ಮಗು ಅತ್ತಾಗ ತಾನೆ ತಾಯಿ ಹಾಲು ಕುಡಿಸುತ್ತಾಳೆ, ಹಾಗೆಯೇ ನಮ್ಮ ಸಮಾಜದ ಬಾಂಧವರು ರಾಜಕೀಯ ರಂಗದಲ್ಲಿ ಮುಂಬರಬೇಕು. ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾಽಽ ಪ್ರಭಾಕರ ಶಿವಾನಂದ ಶಿವಶಿಂಪಿ, ಅಧ್ಯಕ್ಷರು ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘ, ನಿಯಮಿತ, ಹುಬ್ಬಳ್ಳಿ ಇವರು 1972ರಲ್ಲಿ ಧಾರವಾಡದಲ್ಲಿ ಪ್ರಥಮವಾಗಿ ಶಿವಶಿಂಪಿ ಸಮಾಜ ಉದಯವಾಗಿದ್ದು ಹೆಮ್ಮೆ ಪಡುವ ವಿಷಯ. 1973ರಲ್ಲಿ ಅಖಿಲ ಭಾರತ ಶಿವಶಿಂಪಿ ಸಮಾಜ ಜನ್ಮವನ್ನು ಹುಬ್ಬಳ್ಳಿಯಲ್ಲಿ ತಾಳಿತು. ಇಷ್ಟೆಲ್ಲಾ ಬಹಳ ವರ್ಷಗಳ ಹಿಂದಿನ ಸಮಾಜವಾಗಿದ್ದರೂ ಕೂಡಾ ರಾಜ್ಯಮಟ್ಟದಲ್ಲಿ ಸಂಘಟನೆಯಾಗದಿರುವುದು ದುರಾದೃಷ್ಟಕರ ವಿಷಯ. 1999ರಲ್ಲಿ ಉದಯಗೊಂಡ ಇನ್ನಿತರ ಸಮಾಜಗಳು ತಮ್ಮದೇ ಆದ ರಾಜ್ಯ ಸಂಘಟನೆ ಹೊಂದಿ, ಸಮಾಜದ ಅಭಿವೃದ್ಧಿಯಲ್ಲಿ ತೊಡಗಿರುವುದನ್ನು ಕಂಡಾಗ ನಾವೆಲ್ಲ ಒಟ್ಟಾಗಿ ಸಮಾಜದ ಕೆಲಸ ದೇವರ ಕೆಲಸ ಎಂದರಿತು ಕಾರ್ಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಈ ಕುರಿತು ತನು, ಮನ, ಧನದೊಂದಿಗೆ ಸಮಾಜ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ. ಜೀವನದಲ್ಲಿ ಹುಟ್ಟು ಸಾವಿನ ಮಧ್ಯದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಇತಿಹಾಸ ಸೃಷ್ಟಿಸುವ ಪ್ರವೃತ್ತಿ ನಮ್ಮದಾಗಬೇಕು ಎಂದರು. ರಾಜ್ಯದಲ್ಲಿಯೇ ರಾಜ್ಯಮಟ್ಟದ ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘ .ನಿ., ಹುಬ್ಬಳ್ಳಿ ಎಂಬ ಪ್ರಥಮ ಸಂಸ್ಥೆ ಸ್ಥಾಪಿತವಾಗಿರುವುದು ನಾವೆಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದೆ. ಕೆಲವೇ ತಿಂಗಳುಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇದರ ಶಾಖೆಗಳನ್ನು ಪ್ರಾರಂಭಿಸಿಯೇ ಬಿಡೋಣ ಎಂದು ಆಶಾವಾದದ ಸಕಾರಾತ್ಮಕ ನುಡಿಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶೇ 90ಕ್ಕಿಂತಲೂ ಹೆಚ್ಚಿಗೆ ಅಂಕ ಪಡೆದ ಎಸ್.ಎಸ್.ಎಲ್.ಸಿ / ಪಿ.ಯು.ಸಿ ಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ನಗದು ಪ್ರೋತ್ಸಾಹ ಧನ ನೀಡಲಾಯಿತು. ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಗೈದ ಸಮಾಜದ ಸದಸ್ಯರಿಗೆ ಸಾಧಕರ ಸನ್ಮಾನ ಮಾಡಿ ಅಭಿನಂದಿಸಲಾಯಿತು. 80ವರ್ಷ ವಯೋಮಾನದ ಸಮಾಜದ ಹಿರಿಯ ನಾಗರೀಕರಿಗೆ ಪ್ರೀತಿಯಿಂದ ಸನ್ಮಾನಿಸಿ ಶತಾಯುಷಿಗಳಾಗಲು ಶುಭ ಹಾರೈಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಾಯ ನೀಡಿದ ಎಲ್ಲ ಮಹಾದಾನಿಗಳಿಗೆ ಸನ್ಮಾನಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಲಿಂಗಪ್ಪ ಎಸ್. ಖೋದಾನಪೂರ ಇವರು ಕಾರ್ಯಕ್ರಮದ ಯಶಸ್ಸಿಗಾಗಿ ತನು-ಮನ-ಧನ ಸಹಾಯ ಸಹಕಾರ ನೀಡಿದ ಸರ್ವರಿಗೂ ಅಭಿನಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಡಿ. ಸಣಕಲ್ ಇವರು ಶಾಸಕರಾದ ಮಾನ್ಯಶ್ರೀ ಅರವಿಂದ ಬೆಲ್ಲದ ಇವರಿಗೆ ಮನವಿ ಸಮರ್ಿಸಿದರು. ಕಾರ್ಯಾಧ್ಯಕ್ಷರಾದ ಡಾಽಽ ಮಹಾಂತೇಶ ಕುಬಸದ ಇವರು ಸಮಾಜ ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯ ಸಂಚಾಲಕರು ಉಪಾಧ್ಯಕ್ಷರಾದ ರೇವಣಸಿದ್ದಪ್ಪ ಮ. ಕಲ್ಯಾಣಶೆಟ್ಟಿ ಉಪಸ್ಥಿತಿ ವಹಿಸಿದ್ದರು. ಮಹಾಪೋಷಕರಾದ ಷಣ್ಮುಖಪ್ಪ ಎಸ್. ನಾಗಠಾಣ, ಈರಣ್ಣ ಮುದಕವಿ, ಗುರ್ಪ ಎಂ.ಪಾವಟೆ, ಕಸ್ತೂರಿ ಮುದಕವಿ ಇವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಮೂಲೆಯ ಜಿಲ್ಲೆಗಳಿಂದ ಆಗಮಿಸಿದ ಅಧ್ಯಕ್ಷರು ್ಘ ವಿಶೇಷ ಆಮಂತ್ರಿತರಾದ ಬಸವರಾಜ ಎಸ್. ಲಕ್ಕುಂಡಿ-ಧಾರವಾಡ, ನಂದಿಕೇಶ್ವರ ಯಾದವಾಡ-ಧಾರವಾಡ, ಸಂಗಪ್ಪ ಕೆ.ಗೌಡರ-ಬೆಂಗಳೂರು, ಭಾವಿಕಟ್ಟಿ-ಡಾವಣಗೇರಿ, ರಾಚಪ್ಪ ನಾರಾಯಣಪೂರ-ಶಿವಮೊಗ್ಗ, ಶಿವಶಂಕರ ಸಿಂದಗಿ-ವಿಜಯಪುರ, ಶರಣಪ್ಪ ಚಟ್ಟೇರ-ಹೊಸಪೇಟೆ, ಮಲ್ಲಿಕಾರ್ಜುನ ಕೋಲಾರ-ಬಾಗಲಕೋಟೆ, ಶಿವಮೂರ್ತೆಪ್ಪ-ಡಾವಣಗೇರೆ, ಗಿರಿಮಲ್ಲಪ್ಪ ಆಸಂಗಿ-ಬೆಳಗಾವಿ, ಡಾಽಽಎಸ್.ಎಸ್.ನಾರಾಯಣಪೂರ-ಗದಗ, ನಾಗೇಶ ವಿ.ಅಥಣಿ-ಮುಂಬೈ, ವಿರೇಶಕುಮಾರ ಶಿ. ಬೆಟಗೇರಿ-ಕೊಪ್ಪಳ, ಹುಚ್ಚೇಶ ಸಿಂದಗಿ-ಗುಳೇದಗುಡ್ಡ, ರಾಚಪ್ಪ ನಾಗಠಾಣ-ಶಲವಡಿ ಇವರೆಲ್ಲರೂ ವಿಶೇಷ ಉಪಸ್ಥಿತಿ ವಹಿಸಿ ಶೋಭೆ ತಂದರು. ಕಾರ್ಯಕಾರಿ ಮಂಡಳಿ ಸದಸ್ಯರಾದ ಈರಣ್ಣ ಹುನಗುಂದ-ಖಜಾಂಚಿ, ಶಂಕರ ಎನ್. ಕಾಲದೀಪ, ಪ್ರಥಮನಾಥ ಪಾವಟೆ, ರವೀಂದ್ರ ಜಿ. ಹುಂಡೇಕಾರ, ನಾಗರಾಜ ನಾಯಕ, ಸರಸ್ವತಿ ಅ. ಕುಬಸದ, ಜಯಶೀಲಾ ಯಾದವಾಡ, ಗುರುರಾಜ ಕಂಠಿಗಾವಿ, ಮಂಜುನಾಥ ಚಟ್ಟೇಣ್ಣವರ, ಈಶ್ವರ ಜವಳಿ, ರಾಜು ರಾಚಪ್ಪ ನಾಗಠಾಣ, ಕರಬಸಪ್ಪ ನಾಗಠಾಣ, ಶಿವಾನಂದ ಬಾಳಿಕಾಯ, ಗಂಗಾಧರ ನಾಗಠಾಣ, ವೀರಣ್ಣ ಶಿವಶಿಂಪಿಗೇರ, ಸಂತೋಷ ಬಾಳಿಕಾಯಿ, ಲೋಚನಪ್ಪ ಸಂಶಿ, ಚಂದ್ರಶೇಖರ ಶಿವಸಿಂಪರ ಮತ್ತಿತರರು ಉಪಸ್ಥಿತರಿದ್ದರು. ವಿಜಯಕುಮಾರ ಅಳಗುಂಡಗಿ ಪ್ರಾರ್ಥಿಸಿದರು, ಸಿದ್ದಲಿಂಗಪ್ಪ ಬ. ಶಿವಶಿಂಪಿ, ಶಿಕ್ಷಕರು, ಚನ್ನವೀರ್ಪ ಶಿ. ಸಂಶಿ ಕಾರ್ಯಕ್ರಮ ನಿರೂಪಣೆ ಮಾಡಿದರು ಕೊನೆಗೆ ಪ್ರವೀಣ ಈರ್ಪ ಕಡಿಬಾಗಿಲ ವಂದಿಸಿದರು.