ರೇಲ್ವೆಗಳನ್ನು ಸಿಂಧನೂರು ನಗರದವರೆಗೂ ವಿಸ್ತರಣೆ

Extension of railways up to Sindhnur city

ರೇಲ್ವೆಗಳನ್ನು ಸಿಂಧನೂರು ನಗರದವರೆಗೂ ವಿಸ್ತರಣೆ

ಕೊಪ್ಪಳ  25: ಕಲ್ಯಾಣ ಕರ್ನಾಟಕದ ಗಂಗಾವತಿ,ಮಾನ್ವಿ ಮತ್ತು ಸಿಂಧನೂರು ಭಾಗದ ಜನತೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ರೇಲ್ವೆ ಸೌಲಭ್ಯವನ್ನು ಹೊಂದುತ್ತಿದೆ.ಆದರೆ ಬ್ರೀಟಿಷರ ಕಾಲದಿಂದಲೂ ರೇಲ್ವೆ ಸೌಲಭ್ಯ ಪಡೆಯುತ್ತಿರುವವರು ಪದೇ ಪದೇ ವಿವಿಧ ಸೌಲಭ್ಯ ಕೇಳುತ್ತಿರುವುದು ವಿಷಾದಕರ ಎಂದಿರುವ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಟ್ಟದಲ್ಲಿ ರೇಲ್ವೆ ಸೌಲಭ್ಯ ಒದಗಿಸಬೇಕೆಂದು ರೇಲ್ವೆ ಇಲಾಖೆಯ ಸಚಿವಾಲಯಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.ಗಂಗಾವತಿ,ಸಿಂಧನೂರು,ಮಸ್ಕಿ ಭಾಗದ ಜನರು  ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬಟ್ಟೆ ಖರೀದಿಸಲು ದಾವಣಗೆರೆ ನಗರಕ್ಕೆ ಹೋಗಿ ಬರುತ್ತಾರೆ.ಈ ಬಾಗದಿಂದ ಸಂಚರಿಸಲು ರಸ್ತೆ ಮಾರ್ಗವೂ ಸಹ ಸರಿ ಇಲ್ಲ.ಅದಕ್ಕಾಗಿ ಕೆಲವು ರೇಲ್ವೆಗಳನ್ನು ಸಿಂಧನೂರು ನಗರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲು ಅವರು ಕೋರಿದ್ದಾರೆ.ಹೊಸಪೇಟೆಯಿಂದ ದಾವಣಗೆರೆ ಮಧ್ಯೆ ಸಂಚರಿಸುವ ರೇಲ್ವೆ ಸಂಖ್ಯೆ 07396 ಮತ್ತು 07395 ಈ ರೇಲ್ವೆಗಳನ್ನು  ಸಿಂಧನೂರು ನಗರದವರೆಗೂ ಅಥವಾ ಹರಿಹರ-ಹೊಸಪೇಟೆ ರೇಲ್ವೆ ಸಂಖ್ಯೆ 56530 ಮತ್ತು 56529 ನ್ನು ಸಿಂಧನೂರು ನಗರದವರೆಗೂ ವಿಸ್ತರಿಸಬೇಕುಬೆಂಗಳೂರು- ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06243 ಮತ್ತು 06244 ಅಥವಾ ಯಶವಂತಪುರ- ಹೊಸಪೇಟೆ ರೇಲ್ವೆ ಸಂಖ್ಯೆ 56519 ಮತ್ತು 56520 ಈ ರೇಲ್ವೆಗಳನ್ನು ಸಿಂಧನೂರು ನಗರದವರೆಗೂ ವಿಸ್ತರಿಸಲು ಮನವಿ ಮಾಡಿದ್ದಾರೆ.ರೇಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ,ರಾಜ್ಯ ಸಚಿವ ವಿ.ಸೋಮಣ್ಣ , ಹುಬ್ಬಳ್ಳಿಯ ರೇಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಮತ್ತು ಡಿವಿಜಿನಲ್ ಮ್ಯಾನೇಜರ್ ಅವರಿಗೂ ಸಹ ಪತ್ರಗಳನ್ನು ಬರೆಯಲಾಗಿದೆ ಎಂದು ಹೇರೂರ ತಿಳಿಸಿದ್ದಾರೆ.