ಸಂವಿಧಾನದ ಎಲ್ಲಾ ಆಶಯಗಳನ್ನು ಈಡೇರಿಸಿಕೊಳ್ಳಿ: ಉಷಾದೇವಿ ಹಿರೇಮಠ

Fulfill all wishes of the Constitution: Ushadevi Hiremath

ಸಂವಿಧಾನದ ಎಲ್ಲಾ ಆಶಯಗಳನ್ನು ಈಡೇರಿಸಿಕೊಳ್ಳಿ: ಉಷಾದೇವಿ ಹಿರೇಮಠ 

    ಕೊಪ್ಪಳ 26:ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಕೊಪ್ಪಳದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು . ಧ್ವಜಾರೋಹಣ ನೆರವೇರಿಸಿ ಮಾತನಾಡಿದ  ಉಷಾದೇವಿ ಹಿರೇಮಠ ಪ್ರಾಂಶುಪಾಲರು ಭಾರತಕ್ಕೆ  ಇಂದು ಅತ್ಯಂತ ಮಹತ್ವವಾದ ದಿನ ಏಕೆಂದರೆ ಭಾರತವು ಜಾತ್ಯತೀತ ದೇಶ ಇಲ್ಲಿ ವಾಸಿಸುವ ಪ್ರತಿಯೊಬ್ಬ ಜನರಿಗೂ ಎಲ್ಲ ರೀತಿಯ ಹಕ್ಕುಗಳನ್ನು  ನೀಡಿದ ದಿನವಾಗಿದೆ. ಭಾರತ ರತ್ನ  ಡಾ. ಬಿ.ಆರ್‌. ಅಂಬೇಡ್ಕರ್ ರವರು ನಮಗೆ ಸಂವಿಧಾವನ್ನು ನೀಡಿದ ದಿನವನ್ನು ನಾವು 26 ಜನವರಿಯಂದು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಿದ್ದೇವೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಎಲ್ಲರೂ ಈಡೆರಿಸಿಕೊಳ್ಳಬೇಕು ಎಂದು ಹೇಳಿದರು.  

ನಂತರ ಉಪ ಪ್ರಾಚಾರ್ಯರಾದ ಬಸವರಾಜ ಎಸ್‌.ಎಂ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಪ್ರತಿಯೊಬ್ಬ ನಾಗರಿಕನಿಗೂ ಬೇಕಾದ ಮೂಲಭೂತ ಹಕ್ಕುಗಳನ್ನು ಎಲ್ಲರೂ ಅಗತ್ಯಕ್ಕೆ ತಕ್ಕ ಹಾಗೆ ಅನುಭವಿಸುವ ಸ್ವಾತಂತ್ರ್ಯವನ್ನು ಹೊಂದಿದ್ದು ಎಲ್ಲಾ ವಲಯಗಳಲ್ಲಿಯೂ ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸುವಂತಾಗಿದೆ. ಅಂದರೆ ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ವಲಯಗಳಲ್ಲಿ ಹಕ್ಕುಗಳನ್ನು ಹೊಂದಿದ್ದೇವೆ ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಗೂ   ಮೂಲಭೂತ ಕರ್ತವ್ಯಗಳನ್ನು ಸಹ ಸಂವಿಧಾನದಿಂದ ನೀಡಲಾಗಿದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು. 

 ನಂತರ ಕಾರ್ಯಕ್ರಮದ ಕುರಿತು ಹಿರಿಯ ವಕೀಲರು ಮತ್ತು ಉಪನ್ಯಾಸಕರಾದ ಯು. ಎಸ್‌. ಸೊಪ್ಪಿಮಠ ಮಾತನಾಡಿ ಈ ದಿನ ನಮ್ಮೆಲ್ಲರಿಗೂ ಶುಭ ದಿನನವಾಗಿದ್ದು. ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಹಕ್ಕುಗಳನ್ನು ನೀಡಿದ ದಿನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರದ ಉಮಾ ಕಾಂತ್, ಕುಮಾರಿ ರೇಖಾ ನೀಲಪ್ಪನವರ್, ದೈಹಿಕ ಉಪನ್ಯಾಸಕ ಬಸವರಾಜ ಅಳ್ಳಳ್ಳಿ, ಗ್ರಂಥಪಾಲಕ ರವಿ ಬಡಿಗೇರ್, ಪೂರ್ಣಿಮಾ ಪಾಟೀಲ್, ಕುಮಾರಿ ರುತು,  ಮಾರುತಿ, ಅಶೋಕ್ ವಕುಂದ್, ಗಂಗಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.