ಮಾರುತಿ ದೇವರ ಓಕಳಿ: ಬಸವೇಶ್ವರ ರಥೋತ್ಸವಕ್ಕೆ ತೆರೆ
ಗುರ್ಲಾಪೂರ 05: ಪ್ರತಿವರ್ಷದಂತೆ ಈ ವರ್ಷವು ಗ್ರಾಮದ ಮಾರುತಿದೇವರ ಓಕಳಿ ಹಾಗೂ ಬಸವೇಶ್ವರ ರಥೋತ್ಸವವು ದಿ. 29 ರಿಂದ 4ವರೆಗೆ ಅದ್ದೂರಿಯಾಗಿ ಜರುಗಿತು. ಗುರುವಾರ ದಿ.29ರಂದು ಗ್ರಾಮದ ಮಾರುತಿ ದೇವರ ಮುಂದೆ ಇರುವ ಓಕಳಿ ಹೊಂಡಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಓಕಳಿ ಹೊಂಡ ತೆಗೆದು ಸಣ್ಣ ಓಕಳಿ ಆಟ ಆಡಿದರು. ಶುಕ್ರವಾರದಂದು ಗ್ರಾಮದ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಮಾಡಿ ಉಡಿ ತುಂಬಿ ಮಂಗಳಾರತಿ ಮಾಡಿ ಸಂಜೆ ಗ್ರಾಮದಲ್ಲಿ ಓಕಳಿ ಆಟವಾಡಿದರು. ಶನಿವಾರದಂದು ಗ್ರಾಮದ ಮಾರುತಿ ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಬಸವೇಶ್ವರ ರಥದಲ್ಲಿ ಗೌಡರ ಮನೆಯಿಂದ ಕಳಸಕ್ಕೆ ಪೂಜೆ ಮಾಡಿ ಬಸವೇಶ್ವರ ರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ಕೂಡಿಸಿದ ನಂತರ ಯುವಕರು ಸೇರಿ ಕಡೆ ಓಕಳಿ ಆಡಿದ ನಂತರ ಮಾರುತಿ ದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಕ್ಷಿಣೆ ಮಾಡಿ ಬಸವೇಶ್ವರರ ಗದ್ದುಗೆಯವರೆಗೆ ಹೋಗಿ ಮಹಾಮಂಗಳಾರತಿ ಮಾಡಿ ಪಲಕ್ಕಿ ಉತ್ಸವ ಮರಳಿ ಮಾರುತಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ರಾತ್ರಿ 10ಗಂಟೆಗೆ ಹಳ್ಳಿಯಿಂದ ದಿಲ್ಲಿವರೆಗೆ ಸಾಮಾಜಿಕ ನಾಟಕ ನಡೆಯಿತು. ಸೋಮವಾರ ದಿ.2 ರಂದು ಬಸವೇಶ್ವರರ ಗದ್ದುಗೆಗೆ ಮಹಾ ಅಭಿಷೇಕ ಮಾಡಿ ಬಸವೇಶ್ವರನಿಗೆ ವಿಶೇಷವಾಗಿ ಪೂಜೆ ಸಲಿಸಿದರು. ಸಂಜೆ 5 ಗಂಟೆಗೆ ಮಲ್ಲಿಕಾರ್ಜುನ ದೇವರ ನಂದಿ ಕೋಲ ಹಾಗೂ ಮಾರುತಿ ದೇವರ ಪಲ್ಲಕ್ಕಿ ಉತ್ಸವವು ಪ್ರಾರಂಭವಾಯಿತು. ಬಸವೇಶ್ವರ ದೇವಸ್ಥಾನದಿಂದ ರಥೋತ್ಸವಕ್ಕೆ ಬಸವೇಶ್ವರ ಪಲ್ಲಕ್ಕಿ ಹಾಗೂ ನಂದಿಕೋಲಕ್ಕೆ ಮಾರುತಿದೇವರಿಗೆ ಮುತೈದೆಯರು ಆರತಿ ಮಾಡಿ ಸಕಲ ವಾದ್ಯವ್ರಂದಗಳೊಂದಿಗೆ ಬಸವೇಶ್ವರ ರಥೋತ್ಸಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥೋತ್ಸವಕ್ಕೆ ಬೆಂಡು ಬೆತಾಸು ಬಾಳೆ ಹಣ್ಣು ಉತ್ತತಿ ಹಾರಿಸಿ ತಮ್ಮ ಭಕ್ತಿ ಅರ್ಿಸಿದರು. ಬಸವೇಶ್ವರ ರಥೋತ್ಸವವು ಗ್ರಾಮದ ಪ್ರಮುಖ ರಸ್ತೆಯುದ್ದಕ್ಕೂ ಸಾಗುತ್ತಾ ಮಾರುತಿ ದೇವಸ್ಥಾನದವರೆಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಸಿ ಮಹಾ ಮಂಗಳಾರತಿ ಮಾಡಿ ಪ್ರಸಾದ ವಿತರಿಸಿದರು. ಸುಮಂಗಲಿಯರ ಆರತಿ ಸಕಲ ವಾದ್ಯ ಮೇಳ ಕುದರಿಕುಣಿತ ಹಾಗೂ ರೂಪಕಗಳು ಸೇರಿದ ಜನರ ಗಮನ ಸೆಳೆದವು. ರಾತ್ರಿ 10ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಿತು. ಬುಧವಾರ ಸಂಜೆ 5 ಗಂಟೆಗೆ ಬಸವೇಶ್ವರ ರಥದಲ್ಲಿರುವ ಕಳಸಕ್ಕೆ ಪೂಜೆ ಮಾಡಿ ಬಸವೇಶ್ವರ ಮೂರ್ತಿ ಹಾಗೂ ಕಳಸವನ್ನು ಕೆಳಗೆ ಇಳಿಸಿ ಗೌಡರ ಮನೆಗೆ ತಂದು ಮಹಾಮಂಗಳಾರತಿ ಮಾಡಿ ಭಕ್ತರು ಗ್ರಾಮ ದೇವರ ಜಾತ್ರೆಗೆ ಸಾಕ್ಷಿಯಾದರು.