ಪೂರ್ಣಿಮಾ ಕಟಿಗ್ಗಾರ ಹಾಗೂ ವಿನಯಕುಮಾರ ಆಲೂರ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ
ಗದಗ 07: ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ 2025-26ನೇ ಸಾಲಿನ ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ಗದಗ ತಾಲ್ಲೂಕಿನ ಕದಾಂಪುರನ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಹಾಗೂ ಪಾಪನಾಶಿಯ ಆಯುಷ್, ಆರೋಗ್ಯ ಮಂದಿರದ ಯೋಗಪಟು ಪೂರ್ಣಿಮ ಕಟಿಗ್ಗಾರ ಹಾಗೂ ಅಂತೂತ ಬೆಂತೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿನಯಕುಮಾರ ಆಲೂರು ಎಂಬ ವಿದ್ಯಾರ್ಥಿಗಳು ಭಾಗವಹಿಸಿ ಇದೆ ಜೂ.15 ರಿಂದ 18ರ ವರಿಗೆ ಕನ್ಯಾಕುಮಾರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗದಗ ಜಿಲ್ಲೆಗೆ ಮತ್ತು ಪಾಪನಾಶಿ, ಕದಾಂಪುರ ಹಾಗೂ ಅಂತೂರ- ಬೆಂತುರ ಗ್ರಾಮಕ್ಕೆ ಕೀರ್ತಿ ತಂದಿರುವ ಸಾಧಕರಿಗೆ ಊರಿನ ಹಿರಿಯರು, ಜಿಲ್ಲಾ ಆಯುಷ್ ಅಧಿಕಾರಿ ಜಯಪಾಲ ಸಾಮುದ್ರೆಕರ, ವೈದ್ಯಾಧಿಕಾರಿಗಳಾದ ಡಾ. ಅಶೋಕ ಮತ್ತಿಗಟ್ಟಿ, ಯೋಗಶಿಕ್ಷಕಿ ಸುಧಾ ಪಾಟೀಲ, ಚೇತನ್ ಚುಂಚಾ ಸೇರಿದಂತೆ ಮುಂತಾದವರು ಅಭಿನಂಧಿಸಿದ್ದಾರೆ.