ಹಾವೇರಿ : ಹೊಸಮಠದಬಸವ ಕೇಂದ್ರದಲ್ಲಿ ಜರುಗುತ್ತಿರುವ ಲಿಂ. ಜಗದ್ಗುರು ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಶರಣ ಸಂಸೃತಿ ಉತ್ಸವ-2019ರ ಪ್ರಯಕ್ತ ಬಸವ ಭವನದಲ್ಲಿ ಜನಮನ ಪೌಂಡೇಶನ್ ಹಾಗೂ ಕನರ್ಾಟಕ ಅಚೀವರ್ಸ ಬುಕ್ಆಪ್ ರೆಕಾರ್ಡನ ಸಹಯೋಗದೊಂದಿಗೆ ಚಿತ್ರಕಲೆ ಹವ್ಯಾಸಿ ಛಾಯಾಚಿತ್ರಕಾರರು, ಕರಕುಶಲ ವಸ್ತುಗಳ ಕಲಾ ಪ್ರದರ್ಶನ, ಅಂಚೆಚೀಟಿ, ದೇಶಿಯ ಮತ್ತು ವಿದೇಶಿಯ ನೋಟು, ನಾಣ್ಯಗಳ ಸಂಗ್ರಹಕಾರರ ಕಲಾ ಪ್ರದರ್ಶನವನ್ನು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಉದ್ಘಾಟಿಸಿದರು.
ಶ್ರೀಗಳು ಮಾತನಾಡಿ, ಹೊಸಮಠ ವಿವಿಧ ಕಲಾ ಪ್ರಕಾರದ ಕರಕುಶಲ ವಸ್ತುಗಳ ಕಲಾ ಪ್ರದರ್ಶನಕ್ಕೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಭಾರಿಯ ಈ ಕಲಾ ಪ್ರದರ್ಶನ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದೆಎಂದರು.
ಸವಿದಿವ್ಯಕಾವ್ಯಕವಿ ಪ್ರಕಾಶ ನಾಗಪ್ಪ ಆರೀಕಟ್ಟಿ ಇವರು ನಾಣ್ಯ ಸಂಗ್ರಹಗಳನ್ನು ಪ್ರಾಚೀನ ಕಾಲದಿಂದ ಹಿಡಿದು ವಿವಿಧ ರಾಜರುಗಳ ಕಾಲದ ಹಾಗೂ ಸ್ವಾತಂತ್ರ್ಯದ ನಂತರದ ಭಾರತ ಸಕರ್ಾರ ಜಾರಿಗೊಳಿಸಿದ ವಿವಿಧ ನಾಣ್ಯಗಳನ್ನು ಸಂಗ್ರಹಣೆ ಮಾಡಿ ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇದರಿಂದ ಪ್ರಾಚೀನ ಕಾಲದ ರಾಜ ಮಹಾರಾಜ ಕಾಲದ ಸಾಮಾಜಿಕ ಹಾಗೂ ಆಥರ್ಿಕ ಮತ್ತು ಧಾಮರ್ಿಕ ಸ್ಥಿತಿಗತಿಗಳು ಹೇಗೆ ಇದ್ದವುಎಂಬುದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ ಎಂದರು.
ಜನಮನ ಪೌಂಡೇಶನ್ ಹಾಗೂ ಕನರ್ಾಟಕ ಅಚೀವರ್ಸ ಬುಕ್ಆಪ್ರೆಕಾರ್ಡನ ಸಂಸ್ಥಾಪಕಿಯರಾದ ಡಾ. ಅಂಬಿಕಾ ಹಂಚಾಟೆ ಮಾತನಾಡಿ, ನಮ್ಮ ಸುತ್ತಮುತ್ತಲಿರುವ ಪ್ರತಿಭೆಗಳಿಗೆ ಅವರ ಪ್ರತಿಭೆಗಳನ್ನು ಅನಾವರಣಗೊಳಸಲಿಕ್ಕಾಗಿ ಕಲಕುಶಲ ಸಾಮಗ್ರಿಗಳ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ದಾವಣಗೆರೆಯ ರಾಕೇಶ ವಣರ್ೆಕರ ಇವರು ಓಂ ಮತ್ತು ಶಿವ ಪದಗಳನ್ನು ಬಳಸಿ ತುಮಕೂರಿನ ಸಿದ್ದಗಂಗಾ ಶ್ರೀಗಳ ಭಾವಚಿತ್ರ, ಪಿಸ್ ಎಂಬ ಪದದಲ್ಲಿ ಬುದ್ಧನ ಚಿತ್ರವನ್ನು, ನಮೋ ಎಂಬ ಪದ ಬಳಸಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಬಿಡಿಸಿರುವ ಇವರು 3 ಭಾರಿ ಲಿಮ್ಕಾ ದಾಖಲೆಯನ್ನು ಮಾಡಿದ್ದು, ಗಿನ್ನಿಸ್ದಾಖಲೆ ಮಾಡಲು ಮುಂದಾಗಿರುವ ಪ್ರತಿಭೆಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ ಎಂದರು. ಹವ್ಯಾಸಿ ಸರಿದಾನ್ಯ ಚಿತ್ರಕಲಾವಿದ ಗಣೇಶ ರಾಯ್ಕರ ಇವರು ಭತ್ತದಲ್ಲಿ ಶಿವಲಿಂಗ ಶ್ರೀಗಳ ಭಾವಚಿತ್ರ, ಸ್ವಾಮಿ ವಿವೇಕಾನಂದರ ಭಾವಚಿತ್ರ, ರಾಗಿಯನ್ನು ಬಳಸಿ ಬಿಡಿಸಿದ ವಿಘ್ನ ವಿನಾಶಕ ಗಣೇಶನ ಭಾವಚಿತ್ರಗಳು, ಹಾಗೂ ವಿವಿಧ ನಿರುಪಯುಕ್ತವಾದ ವಸ್ತುಗಳನ್ನು, ಪೇಪರ್ಗಳನ್ನು ಬಳಸಿ ಸಿದ್ಧಪಡಿಸಲಾದ ಗೃಹೋಪಯೋಗಿ ವಸ್ತುಗಳು, ನಿರುಪಯುಕ್ತವಾದದಾರದ ರೀಲುಗಳನ್ನು ಬಳಸಿ ಸಿದ್ಧಪಡಿಸಲಾದ ಪೋಟೋಪ್ರೇಮ್, ಮರಳಿನಲ್ಲಿ ಬಿಡಸಲಾದ ಚಿತ್ರಗಳು ನೋಡುಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ, ಡಾ ಬಸವರಾಜ ವೀರಾಪೂರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ದಯಾನಂದಯಡ್ರಾಮಿ, ಡಾ. ಮೃಂತ್ಯುಂಜಯತುರ ಕಾಣಿರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾಜರ್ುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪಕಡೆ ಕೊಪ್ಪ ಸೇರಿದಂತೆ ಇತರರು ಹಾಜರಿದ್ದರು.