ಗದಗ 09:- ಉನ್ನತ ಹುದ್ದೆಗಳಾದ ಕೆ ಎ ಎಸ್, ಐ ಎ ಎಸ್, ಯು ಪಿ ಎಸ್ ಸಿ ಹಾಗೂ ಸಿ ಎಸ್, ಏನ್ ಇ ಇ ಟಿ, ಸಿ ಇ ಟಿ, ಪರೀಕ್ಷೆಗಳನ್ನು ಉದ್ಯೋಗಾಕಾಂಕ್ಷೀಗಳು ತಮ್ಮ ತಮ್ಮ ಸೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರದಲ್ಲಿ ಉನ್ನತ ಹುದ್ದೆಯ ಕನಸನ್ನು ಹೊತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಪ್ರಯತ್ನದಲ್ಲಿ ತಲ್ಲಿನರಾಗಿರುತ್ತಾರೆ.
ಆದರೆ ಈ ಒಂದು ಮಹತ್ವದ ಸೈಕ್ಷಣಿಕ ಘಟ್ಟವಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಗತ್ಯವಿರುವ ಪೂರ್ವ ತಯಾರಿಯೇ ಒಂದು ಸವಾಲಿನ ಪ್ರಶ್ನೆಯಾಗಿರುತ್ತದೆ. ಕಾರಣ ಈ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯುವುದು ಅತ್ಯಂತ ಕ್ಲಿಷ್ಟಕರವಾಗಿ, ದುಬಾರಿ ವ್ಯೆಚ್ಚದಾಯಕವಾಗಿದೆ. ಅದಲ್ಲದೇ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಬೆಂಗಳೂರು, ಚನೈ, ಪುಣೆ, ಧಾರವಾಡ, ಮತ್ತು ಹೈದರಾಬಾದ್ ನಂತಹ ದೂರದ ಸ್ಥಳಗಳಲ್ಲಿರುತ್ತವೆ.
ಇದರಿಂದಾಗಿ ಗದಗ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ದುಬಾರಿ ವ್ಯೆಚ್ಚ, ಹಾಗೂ ದೂರದ ಊರಿನಲ್ಲಿ ತಿಂಗಳುಗಟ್ಟಲೆ ವಸತಿಯುತವಾಗಿ ತರಬೇತಿ ಪಡೆಯುವುದು ಕಷ್ಟಧಾಯಕವಾಗಿರುತ್ತದೆ. ಅದರಲ್ಲೂ ಪ್ರಮುಖವಾಗಿ ಮಹಿಳಾ ವಿದ್ಯಾರ್ಥಿಗಳಿಗಂತೂ ಅಸಾಧ್ಯವಾಗಿ ಪರಿಣಮಿಸಿ ವಿಶೇಷ ನೈಪುಣ್ಯತೆಯನ್ನು ಹೊಂದಿದ್ದರೂ ಸದವಕಾಶದ ಕೊರತೆಯಿಂದ ಎಲೆಮರೆ ಕಾಯಿಯಂತೆ ಮರೀಚಿಕೆಯಾಗಿರುವರು.
ಗದಗ ಜಿಲ್ಲೆಯ ಅಭಿವೃದ್ಧಿಯ ಹರಿಕಾರರು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರು ಇತ್ತೀಚಿಗಷ್ಟೇ ಗದಗ ನಗರದಲ್ಲಿ ಯುವ ಜನಸಮೂದಾಯವನ್ನು ಸ್ವ ಉದ್ಯೋಗವನ್ನು ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಲು ಕೌಶಲ್ಯಾಭಿವೃದ್ಧಿಯನ್ನು ಅನುಷ್ಠಾನಗೊಳಿಸಲು ವೃತ್ತಿ ಕೌಶಲ್ಯತಾ ತರಬೇತಿ ಕೇಂದ್ರವನ್ನು ಅನುಷ್ಠಾನಗೊಳಿಸಲು ಪ್ರತಿಷ್ಠಿತ ನೆಟ್ಟೂರ್ ತಾಂತ್ರಿಕ ತರಬೇತಿ ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಗದಗ ಶಹರದಲ್ಲಿ ಜಿ - ಏನ್ ಟಿ ಟಿ ಎಫ್ ಎಂಬ ಯುವ ಸಮುದಾಯಕ್ಕೆ ತಾಂತ್ರಿಕ ತರಬೇತಿ ನೀಡಲು ವಿಶೇಷ ಸಂಸ್ಥೆಯನ್ನು ಗದಗ ಜಿಲ್ಲೆಗೆ ಕೊಡುಗೆಯಾಗಿ ನೀಡುವ ಮೂಲಕ ವೃತ್ತಿ ಕೌಶಲ್ಯತೆಯೊಂದಿಗೆ ಸ್ವಾವಲಂಬಿಗಳನ್ನಾಗಿ ಮಾಡಲು ನೆರವುದಾಯಕರಾಗಿರುವರು.
ಅದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ಶೈಕ್ಷಣಿಕ ವೃತ್ತಿ ಜೀವನದಲ್ಲಿ ಮಹತ್ವಪೂರ್ಣ ಕಾರ್ಯಘಟ್ಟವಾಗಿದೆ. ಇದರಿಂದ ಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ನೀಡುತ್ತವೆ ಮತ್ತು ಅವರ ಶೈಕ್ಷಣಿಕ ಪಥವನ್ನು ರೂಪಿಸುತ್ತವೆ. ಅನೇಕ ದೇಶಗಳಲ್ಲಿ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಪ್ರವೇಶವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಯಶಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ, ಇದು ಶೈಕ್ಷಣಿಕ ಯೋಗ್ಯತೆ ಮತ್ತು ಉನ್ನತ ಅಧ್ಯಯನಗಳಿಗೆ ಸಿದ್ಧತೆಯ ಪ್ರಮಾಣೀಕೃತ ಅಳತೆಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷೆಗಳು ಅಭ್ಯರ್ಥಿಗಳ ಜ್ಞಾನವನ್ನು ಮಾತ್ರವಲ್ಲದೆ ಅವರ ವಿಶ್ಲೇಷಣಾತ್ಮಕ ಕೌಶಲ್ಯಗಳು, ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳು ಮತ್ತು ಸ್ವತಂತ್ರ ಕಲಿಕೆಯ ಸಾಮರ್ಥ್ಯವನ್ನು ಸಹ ನಿರ್ಣಯಿಸುತ್ತವೆ.
ಆದುದರಿಂದ ಗದಗ ಜಿಲ್ಲೆಗೆ ಜಿ - ಏನ್ ಟಿ ಟಿ ಎಫ್ ವಿಶೇಷ ಕೊಡುಗೆಯಾಗಿ ನೀಡಿದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಉನ್ನತ ಹುದ್ದೆಯನ್ನು ಅಲಂಕರಿಸುವಂತಾಗಲು ಗದಗ ಶಹರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಕೇಂದ್ರವನ್ನು ಅನುಷ್ಠಾನಗೊಳಿಸಲು ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರು ಮುಂದಾಗಬೇಕೆಂದು ಕಾಂಗ್ರೇಸ್ ಮುಖಂಡರಾದ ಸುಧೀರ್ ಸಾವಕಾರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.