ತರಗತಿಗೆ ದಾಖಲಾಗುವ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ

Distribution of certificates to children enrolled in classes

ಕಂಪ್ಲಿ.01 ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕಲಿಕೆ ಟಾಟಾ ಟ್ರಸ್ಟ್‌್ಸ ಸಹಯೋಗದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅಡಿಯಲ್ಲಿ ಮೇ ತಿಂಗಳ “ಅಂಗನವಾಡಿಯತ್ತ ಸಮುದಾಯ” ಮಕ್ಕಳ ಪಾಲಕ-ಪೋಷಕರ ಸಭೆ ಗಾಧಿಗನೂರು 4ನೇ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಅಂಗನವಾಡಿಯತ್ತ ಸಮುದಾಯ” ಮಕ್ಕಳ ಪಾಲಕ-ಪೋಷಕರ ಸಭೆಯ ಅಧ್ಯಕ್ಷತೆಯನ್ನುಗ್ರಾಮ ಪಂ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಒದಗಿಸಲು ಮುಂದಾಗಬೇಕು ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೋಡಬೇಕು ಎಂದರು. 

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮದ ಕಲಿಕೆ-ಟಾಟಾ ಟ್ರಸ್ಟ್‌್ಸ ಸಂಸ್ಥೆ ಕಾರ್ಯಕ್ರಮ ಅಧಿಕಾರಿಗಾದ ಶ್ರೀ ಕೊಟ್ರೇಶ ಮಾತನಾಡಿ. ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಸರ್ಕಾರದ ಸೌಲಭ್ಯವನ್ನು ಪಡೆಯಿರಿ ಎಂದರು ಗ್ರಾಮ ಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ,ಮಾತನಾಡಿ ತಾಯಂದಿರು ಮಕ್ಕಳಿಗೆ ಸಂಸ್ಕತಿ ಜೊತೆಗೆ ಸಂಸ್ಕಾರ ಕಲಿಸಿ ತಾಯಿ ಮೂದಲು ಗುರು ಮಕ್ಕಳನ್ನು ಶಿಕ್ಷಣ ಕೂಡಿಸಿ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಬೆಳೆಯುತ್ತಾರೆ ಎಂದರು. 

  ಉಚಿತವಾದ ಶಾಲಾಪೂರ್ವ ಶಿಕ್ಷಣ ಪೂರ್ಣಗೊಳಿಸಿ 2025-26ನೇ ಸಾಲಿಗೆ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡುವ ಮೂಲಕ ಬೀಳ್ಕೊಡಲಾಯಿತು ಗ್ರಾಮ ಪಂ ಉಪಾಧ್ಯಕ್ಷರಾದ ಜಾನಕಮ್ಮ, ಸದಸ್ಯರಾದ ಮಲ್ಲಮ್ಮ ಕೆ,  ಮಲ್ಲಮ್ಮ ಮ್ಯಾಜಿಕ್ ಬಜ್ ಸಂಸ್ಥೆ ಹುಲಿರಾಜ ಕಲಿಕೆ ಸಾಮಾಗ್ರಿಗಳನ್ನು  ವಿತರಿಸಿದರು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ನಿವೃತಿಯಾದ  ಕಾರಣ ಅಂಗನವಾಡಿ ವತಿಯಿಂದ ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಸುರೇಖಾ ಅನೇಕ ಪಾಲಕರು ಮತ್ತು ಮಕ್ಕಳಿದ್ದರು.