ಬಡ ವಿದ್ಯಾರ್ಥಿ ಲಕ್ಷ್ಮೀಗೆ ಚಿನ್ನದ ಪದಕ

Gold medal for poor student Lakshmi

ಶಿಗ್ಗಾ?? 12 : ಪಟ್ಟಣದ ಮಾರುತಿ ನಗರದ ದುರಮುರಗೇರ ಬಡ ಕುಟುಂಬದ ಬಾಲಕಿ ಕು. ಲಕ್ಷ್ಮೀಭಾಗಪ್ಪ ಗುಜಲೂರ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದು ಶಿಗ್ಗಾವಿಯ ಕೀರ್ತಿ ಹೆಚ್ಚಿಸಿದ್ದಾಳೆ.

ಬಡತನದಲ್ಲಿ ಹುಟ್ಟಿದ ಲಕ್ಷ್ಮಿ ಗುಜಲೂರಳ ತಂದೆ ನಾಗಪ್ಪ ಗುಜಲೂರ ಬೊಂಬಾಯಿ ಮಿಠಾಯಿ ಮಾರುತ್ತಾರೆ. ತಾಯಿ ಸಹ ಅದೆ ವೃತ್ತಿಯಲ್ಲಿ ಪತಿಗೆ ಸಹಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದರಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಹರಸಾಹಸ ಪಟ್ಟು ಕೂಲಿ-ನಾಲಿ ಮಾಡಿ ಪದವಿವರೆಗೂ ಓದಿಸುತ್ತಿದ್ದಾರೆ. ಬಾಲಕಿಯು ವಿದ್ಯಾಭ್ಯಾಸಕ್ಕೆ ಸಮಾಜ ಸೇವಕ ವರುಣ್ ಗೌಡ ಪಾಟೀಲ ಅವರು ಬಟ್ಟೆ ಮತ್ತು ಪುಸ್ತಕ ಸೇರಿದಂತೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. 

ಜನಿಸಿದ ತಂದೆ ಬೊಂಬಾಯಿ ಮಿಠಾಯಿ ಮಾರಿ ಮಗಳನ್ನು ಚಿನ್ನದ ಪದಕ ಗೆಲ್ಲುವತನಕ ಶ್ರಮ ವಹಿಸಿದ ಕುಟುಂಬಕ್ಕೆ ಈಗ ಸಂತೋಷ ಎಲ್ಲೆ ಮೀರಿದ್ದು ಈ ಡುರುಮುರಗೇರೆ ಕುಟುಂಬದಲ್ಲಿ ಯಾರೂ ಸಹಿತ ಹೆಚ್ಚು ಓದು-ಬರಹ ಕಲಿತವರಿಲ್ಲ. ಅಲೆಮಾರಿ ಕುಟುಂಬದ ಈ ಕುಟುಂಬಗಳಿಗೆ ದುಡಿಮೆ ಬಿಟ್ಟರೆ ಬೇರೆನೋ ಗೊತ್ತಿಲ್ಲದ ಕುಟುಂಬಸ್ಥರು ಈಕೆಯ ಶಿಕ್ಷಣಕ್ಕೆ ಅಡ್ಡಿ ಮಾಡಿಲ್ಲ. ಮಗಳನ್ನು ಚೆನ್ನಾಗಿ ಓದಿಸಿದ್ದಾರೆ. ಜೊತೆಗೆ ಬಾಲಕಿಗೆ ಕೃಷಿ ಇಲಾಖೆಯ ಮಹೋನ್ನತ ಹುದ್ದೆ ಅಲಂಕರಿಸುವ ಆಸೆ ಇದೆ ಎಂದು ತಿಳಿದು ಬಂದಿದೆ.