ಗದಗ 17: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡಿನ ಜನಸ್ನೇಹಿ, ಜನಸ್ಪಂದನೆಯ ಹಾಗೂ ಸರಳ ಸಜ್ಜನಿಕೆಯ ಹರಿಕಾರರು ನಗರಸಭೆಯ ಸದಸ್ಯರು ಹಾಗೂ ವಿರೋಧ ಪಕ್ಷದ ಉಪ ನಾಯಕರಾದ ಜನಾಬ ಬರಕತ ಅಲಿ ಮುಲ್ಲಾ ರವರಿಗೆ ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆಯ 23 ನೇ ವಾರ್ಡಿನ ವಿವಿಧ ಬಡಾವಣೆಗಳ ಹಲವಾರು ಭಾಗಗಳಲ್ಲಿನ ನಗರ ನಿವಾಸಿಗಳ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ದೈನಂದಿನ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ದುರಸ್ಥಿ, ಗಟಾರ ಮತ್ತು ಚರಂಡಿಗಳ ದುರಸ್ಥಿ ಮತ್ತು ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಹೊಸದಾಗಿ ಸಿ ಸಿ ರಸ್ತೆಗಳ ಅಭಿವೃದ್ಧಿ, ಫೇವರ್ಸ್ ಅಳವಡಿಕೆ,ಮತ್ತು ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ, ಆರೋಗ್ಯ ಶಿಬಿರ, ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳ ನೆರವಿನೊಂದಿಗೆ ಮಕ್ಕಳ ಆರೈಕೆ, ಮತ್ತು ಗದಗ ಜಿಲ್ಲೆಯ ಜನಪ್ರಿಯ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ.ಡಾ!! ಎಚ್.ಕೆ.ಪಾಟೀಲ, ಸಾಹೇಬರ ಮಾರ್ಗದರ್ಶನದಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡ ಹಾಗೂ ಗದಗ ಜಿಲ್ಲಾ ಮತ್ತು ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಹಕಾರದೊಂದಿಗೆ ವಾರ್ಡಿನ ನಾಗರಿಕರಿಗೆ ವಿವಿಧ , ಆರ್ಥಿಕ, ಸೈಕ್ಷಣಿಕ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮಸ್ತ ನಾಗರಿಕರಿಗೆ ಸುರಳಿತವಾಗಿ ದೊರಕುವಂತಾಗಲು ನೆರವುದಾಯಕರಾಗಿರುತ್ತಾರೆ.
ಆ ಪ್ರಯುಕ್ತ ಜನಪ್ರಿಯ ಸನ್ಮಾನ್ಯ ಜನಾಬ ಬರಕತ ಅಲಿ ಮುಲ್ಲಾ ರವರ ಈ ಒಂದು ಸಾಮಾಜಿಕ ಕಳಕಳಿಯನ್ನು ಗುರುತಿಸಿ ನಗರದ ಸ್ವ ಸಹಾಯ ಸಂಸ್ಥೆಯಾದ ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಇದೇ ದಿನಾಂಕ 14 ರಂದು ಬಡಾವಣೆಯ ಸಮಸ್ತ ನಾಗರಿಕರು ಮತ್ತು ಸೌಜನ್ಯತಾ ಸಮಿತಿಯ ಸರ್ವ ಸದಸ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ಆಶೀಫ್ ಮುಲ್ಲಾ ನಾಗಪ್ಪ ಗುಗ್ಗರಿ, ರಾಮಣ್ಣ ಗುಜಮಾಗಡಿ, ಮಂಜುನಾಥ ಕೋಮಾರಕೊಪ್ಪ, ಲೀಲಾಬಾಯಿ ಶಾಖಾಪೂರ ಸೀತಾಲಕ್ಷ್ಮಿ ಅಷ್ಟಪುತ್ರೆ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, , ಪ್ರಮೀಳಾ ಮಳ್ಳೂರ, ರೇಣವ್ವ ಪೋತ್ನಾಳ್, ಕಸ್ತೂರಿ ಬೋವಿ ಶಿವವ್ವ ಬೋವಿ, ರಾಮಣ್ಣ ಪೋತ್ನಾಳ, ಅಮೀರ್ ಭಾವಿಕಟ್ಟಿ ಬಾಬು ಎಲಿಗಾರ, ರಾಜು ಗೌಡರ, ಆನಂದ ಎಲಿಗಾರ, ರಾಚಪ್ಪ ಕೋರಿ, ರಾಜು ಜಕ್ಕನಗೌಡರ, ಬಾಬು ಗುಳಗುಂದಿ, ಕೃಷ್ಣಾಜಿ ತುಕ್ಕಪ್ಪನವರ ಮಂಜುನಾಥ ನಲವಡಿ, ಬಸಣ್ಣ ಹತ್ತಿಶೆಟ್ಟರ, ಜಗದೀಶ ಗೌಡರ, ಮಾಬೂಸಾಬ ಅಡರಕಟ್ಟಿ, ಅಲ್ತಾಫ್ ಈಟಿ, ಮಹ್ಮದ್ ಶಾಹಿದ್ ಮುಲ್ಲಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.