ಶಿಗ್ಗಾವಿ 01: ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರ ಮನೆಗಳಿಗೆ ಭೇಟಿ ಮಾಡಿ ಅವರ ಕಷ್ಟ ಸುಖ ಆಲಿಸುತ್ತಿದ್ದೇನೆ ಅಲ್ಲದೇ ನನ್ನ ಕಡೆಯಿಂದ ಏನು ಸಹಾಯ ಮಾಡಬೇಕೊ ಅದನ್ನು ಮಾಡುತ್ತಿದ್ದೇನೆ. ಪ್ರಚಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿ ಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಮಂಗಾರು ಉತ್ತಮ ಆರಂಭ ಕಂಡಿದ್ದು, ಡಿಎಪಿ 2946 ಟನ್ ಬೇಡಿಕೆ ಇದೆ. ಈಗ 746 ಟನ್ ಮಾತ್ರ ಬಂದಿದೆ. ನಮ್ಮ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೊಯಾಬಿನ್ ಬೆಳೆ ಚನ್ನಾಗಿ ಬೆಳೆಯುತ್ತಿದೆ. ಕೆಡಿಎಫ್ 500 ಟನ್ ಬೇಡಿಕೆ ಇದೆ. ಬಂದಿರುವುದು 164 ಟನ್ ಮಾತ್ರ. 340 ಟನ್ ಕೊರತೆ ಇದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಸೋಯಾಬಿನ್ ಗೆ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ತಾಲೂಕಿನಲ್ಲಿ ಕೊರತೆಯಾಗಿರುವ ಡಿಎಪಿ ರಸಗೊಬ್ಬರ ಹಾಗೂ ಸೊಯಾಬಿನ್ ಬಿತ್ತನೆ ಬೀಜಗಳನ್ನು ರೈತರಿಗೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಜನೌಷಧಿ ಕೇಂದ್ರ ರದ್ದು ಮಾಡುವ ಆದೇಶವನ್ನು ಪಾಪಸ್ ಪಡೆಯುವಂತೆ ಸಿಎಂ ಹಾಗೂ ಆರೋಗ್ಯ ಸಚಿವರಿಗೆ ನಮ್ಮ ತಂದೆಯವರು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳು ಜನರ ಅನುಕೂಲಕ್ಕೆ ಇರುವ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎನ್ನುವ ವಿಶ್ವಾಸ ಇದೆ. ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣನವರ, ಭಾಜಪಾ ತಾಲೂಕ ಅದ್ಯಕ್ಷ ವಿಶ್ವನಾಥ ಹರವಿ, ಪುರಸಭೆ ಮಾಜಿ ಅದ್ಯಕ್ಷ ಶಿವಪ್ರಸಾದ ಸೂರಗಿಮಠ, ಜಿ.ಪಂ ಮಾಜಿ ಸದಸ್ಯ ಶಶಿಧರ ಹೊಣ್ಣಣ್ಣನವರ, ಪುರಸಭೆ ಸದಸ್ಯರಾದ ದಯಾನಂದ ಅಕ್ಕಿ, ಪರಶುರಾಮ ಸೋನ್ನದ, ಮಂಜುನಾಥ ಬ್ಯಾಹಟ್ಟಿ, ಮುಖಂಡರಾದ ಸೋಮಶೇಖರ ಗೌರಿಮಠ, ಅನಿಲ ಸಾತಣ್ಣನವರ, ಸಚೀನ ಮಡಿವಾಳರ, ಸಂತೋಷ ದೊಡ್ಡಮನಿ ಸೇರಿಸಂತೆ ಅನೇಕರು ಇದ್ದರು.