ಹುಬ್ಬಳ್ಳಿ 17: ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘ ಸಂಘದ ಆಶ್ರಯದಲ್ಲಿ ಛಾಯಾಗ್ರಹಣ ಹಾಗೂ ವಿಡಿಯೋ ಛಾಯಾಗ್ರಹಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕರು ಹಾಗೂ ವಿಡಿಯೋ ಗ್ರಾಹಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ . ಇದೇ ತಿಂಗಳು 27 ಜೂನ್ 2025 ಶುಕ್ರವಾರ ದಿನದಂದು ಬೆಂಗಳೂರು ಅರಮನೆಯ ಮೈದಾನದಲ್ಲಿ ಅಂತರಾಷ್ಟ್ರೀಯ ಫೋಟೋ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಹಿರಿಯ ಛಾಯಾಗ್ರಹಕರು ಹಾಗೂ ವಿಡಿಯೋ ಛಾಯಾಗ್ರಾಹಕರನ್ನ ಆಯ್ಕೆ ಮಾಡಿ ಅವರಿಗೆ" ಕರ್ನಾಟಕ ಛಾಯಾ ರತ್ನ ಪ್ರಶಸ್ತಿ" ಪ್ರದಾನ ಮಾಡಲಿದ್ದೇವೆ.
ಈ ಸ್ಮರಣೀಯ ಕಾರ್ಯಕ್ರಮ ಮಧ್ಯಾಹ್ನ 11:00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ರಾಜಕೀಯ ನಾಯಕರು ಹಿರಿಯ ಪತ್ರಕರ್ತರು ಸೇರಿದಂತೆ ಪ್ರಮುಖರು ಆಗಮಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಮಾಧ್ಯಮ ಮತ್ತು ಛಾಯಾಗ್ರಹಣ ಕ್ಷೇತ್ರದ 5 ಹಿರಿಯರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಮಾಧ್ಯಮ ಕ್ಷೇತ್ರದಿಂದ ಹುಬ್ಬಳ್ಳಿಯ ಹೊಸ ದಿಗಂತ ಪತ್ರಿಕೆಯ ಛಾಯಾಗ್ರಹಕ ಮಂಜುನಾಥ ಗಣಪತಸಾ ಜರತರಾಘರ್. ಪ್ರಜಾವಾಣಿಯ ಛಾಯಾಗ್ರಾಹಕ ಗುರು ಹಬೀಬ. ಟಿವಿ9 ವಾರ್ತೆಯ ವಿಡಿಯೋ ಛಾಯಾಗ್ರಹಶಿವಾಜಿ ಲಾತೂರಕರ. ಛಾಯಾಗ್ರಹಣ ಕ್ಷೇತ್ರದಿಂದ: ವಜಿರ್ ಅಹಮ್ಮದ್. ವಜಿರ್ ವಿಡಿಯೋಗ್ರಾಫಿ. ತಬಿಬಲ್ಯಾಂಡ್ಪ್ರವೀಣ್ ಹಣಗಿ. ಹಣಗಿ ಸ್ಟುಡಿಯೋ ಕೇಶವಾಪುರ ಪ್ರಶಸ್ತಿ ನೀಡಲು ತೀರ್ಮಾನಸಿದ್ದೇವೆ ಎಂದು ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ತಿಳಿಸಿದ್ದಾರೆ.