ಕೊಪ್ಪಳ 10: ನಗರದ ನಿವಾಸಿಗಳಿಗೆ ಅಗತ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಜವಾಬ್ದಾರಿ ನಗರಸಭೆ ಮೇಲಿದೆ ಜನರ ಬೇಕು ಗಳ ಈಡೇರಿಕೆ ನಮ್ಮ ಕರ್ತವ್ಯ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ಮಂಗಳವಾರ ನಗರದ 7ನೇ ವಾರ್ಡಿಗೆ ಭೇಟಿ ಮಾಡಿ ಚರಂಡಿ ರಸ್ತೆಗಳು ಕುಡಿಯ ನೀರಿನ ವ್ಯವಸ್ಥೆ ವಿದ್ಯುತ್ ದ್ವೀಪಗಳನ್ನು ಶೌಚಾಲಯಗಳು ವೀಕ್ಷಣೆ ಮಾಡಿ ವಾರ್ಡಿನ ಸದಸ್ಯರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಕೇಳಿ ಕೂಡಲೇ ಚರಂಡಿಗಳು ಮತ್ತು ರಸ್ತೆಗಳು, ಕುಡಿಯ ನೀರಿನ ವ್ಯವಸ್ಥೆ ವಿದ್ಯುತ್ ದೀಪಗಳು ಸರಿಪಡಿಸಬೇಕೆಂದು ಸ್ಥಳದಲ್ಲಿ ಉಪಸ್ಥಿತ ಅಧಿಕಾರಿಗಳಿಗೆ ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಿದರು ನಗರದಲ್ಲಿ ವಾಚಿಸುವ ಜನರ ಬೇಕು ಬೇಡಿಕೆಗಳ ಈಡೇರಿಕೆ ನಮ್ಮ ನಗರಸಭೆಯ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಅದನ್ನು ನಾವು ನಿಭಾಯಿಸಬೇಕಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರಾದ ಅಜೀಮ್ ಅತ್ತಾರ್ ನಗರ ಸಭೆ ಕಿರಿಯ ಅಭಿಯಂತರರಾದ ಸೋಮಲಿಂಗಪ್ಪ ಕುಡಿಯ ನೀರಿನ ಮೇಲ್ವಿಚಾರಕರಾದ ವಸಂತ್ ಸ್ವಚ್ಛತಾ ವಿಭಾಗದ ಮೈಲಾರ್ಪ ಕಾರಟಗಿ ಆಶ್ರಯ ಸಮಿತಿಯ ನಾಮ ನಿರ್ದೇಶನ ಸದಸ್ಯರಾದ ಪರಶುರಾಮ್ ಕೆರಳ್ಳಿ ಮಾಜಿ ಸಿಂಡಿಕೇಟ್ ಸದಸ್ಯರಾದ ಮೊಹಮ್ಮದ್ ಜಾಹಿರಲಿ ಮತ್ತು ಓಣಿಯ ಸಾರ್ವಜನಿಕರು ಅಲ್ಲದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು