RCB ವಿಜಯೋತ್ಸವ ಕಾರ್ಯಕ್ರಮ ರದ್ದು

RCB Victory Day event cancelled

ವಿಜಯಪುರ 05: ಜೂನ್ 8 ರಂದು ಎಂ.ಬಿ.ಪಿ ಮತ್ತು ಎಸ್‌.ಬಿ.ಪಿ ಅಭಿಮಾನಿಗಳಿಂದ ನಗರದಲ್ಲಿ ಆಯೋಜಿಸಲಾಗಿದ್ದ ಆರಿ​‍್ಸ.ಬಿ ವಿಜಯೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಆಕಾಶ ಪಿ. ಕಲಬುರ್ಗಿ ಮತ್ತು ಶ್ರೀಶೈಲ ರೆಡ್ಡಿ ತಿಳಿಸಿದ್ದಾರೆ. 

ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಐಪಿಎಲ್‌- 2025 ಗೆಲ್ಲುವ ಮೂಲಕ 18 ವರ್ಷಗಳ ನಮ್ಮ ಕನಸನ್ಮು ನನಸು ಮಾಡಿತ್ತು.  ಆದರೆ, ಬುಧವಾರ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಅವಘಡದಲ್ಲಿ ಆರಿ​‍್ಸ.ಬಿ ತಂಡದ 11 ಜನ ಅಪ್ಪಟ ಅಭಿಮಾನಿಗಳು ಸಾವೀಗೀಡಾಗಿದ್ದಾರೆ.  ಇದರಿಂದ ನಾವಷ್ಟೇ ಅಲ್ಲ, ಇಡೀ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಆಘಾತಗೊಂಡಿದ್ದಾರೆ.  ಈ ಘಟನೆ ಆರಿ​‍್ಸ.ಬಿ ತಂಡದ ಗೆಲುವಿನ ಸಂತಸಕ್ಕಿಂತ ಹೆಚ್ಚು ನೋವು ತಂದಿದೆ.  ಸೂತಕದ ಈ ಸಮಯದಲ್ಲಿ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ.   

ಈ ಹಿನ್ನೆಲೆಯಲ್ಲಿ ಜೂನ್ 8 ರಂದು ನಗರದಲ್ಲಿ ಆಯೋಜಿಸಲಾಗಿದ್ದ ಆರಿ​‍್ಸ.ಬಿ ಸಂಭ್ರಮಾಚರಣೆಯನ್ನು ರದ್ದು ಪಡಿಸಲಾಗಿದೆ ಎಂದು ಆಕಾಶ ಪಿ. ಕಲಬುರ್ಗಿ ಮತ್ತು ಶ್ರೀಶೈಲ ರೆಡ್ಡಿ ತಿಳಿಸಿದ್ದಾರೆ.