ಪ್ರಧಾನಮಂತ್ರಿ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ರೇಷ್ಮಾ ಭಾನು ಚಾಲನೆ

Reshma Bhanu drives for Pradhanmantri Poshan Abhiyan program

ಪ್ರಧಾನಮಂತ್ರಿ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ರೇಷ್ಮಾ ಭಾನು ಚಾಲನೆ 

ರಾಣೇಬೆನ್ನೂರು 5: ಕೊಪ್ಪಳ ಜಿಲ್ಲೆಯ ನಗರಾಭಿವೃದ್ಧಿಯೋಜನಾಧಿಕಾರಿ, ರಾಣೇಬೆನ್ನೂರು ತಾಲ್ಲೂಕಿನ ನೋಡಲ್ ಅಧಿಕಾರಿಯಾದ ರೇಷ್ಮಾಭಾನು ಹಾನಗಲ್ ಅವರು ಅನೀರೀಕ್ಷಿತವಾಗಿ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ನಂ 17 ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳಿಗೆ ಬಾಳೆಹಣ್ಣು ವಿತರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಯಲ್ಲಿ ಬಿಸಿಯೂಟದ ಜೊತೆಗೆಕೊಡುವ ಹಾಲು,ರಾಗಿ ಮಾಲ್ಟ್‌, ಮೊಟ್ಟೆ, ಬಾಳೆಹಣ್ಣು ಮತ್ತು ಪೌಷ್ಟಿಕ ಆಹಾರಗಳನ್ನು ಸೇವಿಸಿ  ಆರೋಗ್ಯವಂತರಾಗಿ, ಗುಣಾತ್ಮಕ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.  

ಶಿಕ್ಷಕರು ಪಾಲಕರು ಮತ್ತು ಸಮಾಜ ಒಂದಾಗಿ ಒಗ್ಗಟ್ಟಾಗಿ ಸಂಕಲ್ಪಿತ ಉದ್ದೇಶವನ್ನು ಮಕ್ಕಳ ಪರಿಪೂರ್ಣ ಶಿಕ್ಷಣದ ಕಡೆ ಗಮನಹರಿಸಿದಾಗ ಮಾತ್ರ ಪ್ರತಿಯೊಬ್ಬರು, ಪ್ರತಿಭಾವಂತ ವಿದ್ಯಾರ್ಥಿಗಳಾಗಲು ಸಾಧ್ಯವಾಗುವುದು ಎಂದರು.ತಾಲೂಕ ತಹಶೀಲ್ದಾರ ಆರ್‌. ಹೆಚ್‌.  ಭಾಗವಾನ, ತಾಲೂಕ ದೈಹಿಕ ಶಿಕ್ಷಣ ಅಧೀಕ್ಷಕ ಪ್ರಭಾಕರ್ ಚಂದಿ, ಸರ್ಕಾರಿ ಪ್ರೌಢಶಾಲೆ  ಮುಖ್ಯೋಪಾಧ್ಯ ರಮೇಶ ಕಾಳಿ, ಎಸ್‌.ಡಿ. ಎಂ.ಸಿ. ಅಧ್ಯಕ್ಷ ಆನಂದ ಚಿನ್ನಿಕಟ್ಟಿ,  ಶಾಲಾ ಮುಖ್ಯೋಪಾಧ್ಯಾಯ, ಬಿ. ಪಿ.ಶಿಡೇನೂರ, ಪಾಲಕ ನಾಗರಾಜ ಕೋಳೂರ , ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿ   ಉಪಸ್ಥಿತರಿದ್ದರು.