ಹೂವಿನಹಡಗಲಿಯಲ್ಲಿ ತಿರಂಗಯಾತ್ರೆ

Tiranga Yatra on a flower boat

ಹೂವಿನಹಡಗಲಿಯಲ್ಲಿ ತಿರಂಗಯಾತ್ರೆ

ಹೂವಿನಹಡಗಲಿ 05: ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. 

ಬಿಜೆಪಿ ಮಂಡಲ, ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳನ್ನು ಒಳಗೊಂಡ ’ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು’ ಸಂಘಟನೆ ಅಡಿಯಲ್ಲಿ ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿ ತು. 250 ಮೀಟರ್ ಉದ್ದದ ತಿರಂಗ ಮೆರವಣಿಗೆ ನಡೆಯಿತು. ರಾಜಕೀಯ ಮುಖಂಡರು, ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಸಾಗಿದರು. 

ಸೇವಾಲಾಲ್ ಭವನದಿಂದ ಆರಂಭವಾದ ತಿರಂಗ ಯಾತ್ರೆ ಕಿತ್ತೂರು ಚನ್ನಮ್ಮ ವೃತ್ತ, ಡಾ. ಎಪಿಜಿ ಅಬ್ದುಲ್‌ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಸೈನಿಕರನ್ನು ಬೆಂಬಲಿಸಿ ಹೂವಿನಹಡಗಲಿಯಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತುಕಲಾಂ ವೃತ್ತ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ವೃತ್ತ, ಓಂ ಸರ್ಕಲ್, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಮೂಲಕ ಮುಖ್ಯ ಬೀದಿಯಲ್ಲಿ ಸಾಗಿ ತೇರು ಹನುಮಪ್ಪ ದೇವಸ್ಥಾನ ಬಳಿ ಸಂಪನ್ನಗೊಂಡಿತು. 

ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸಂಜೀವರೆಡ್ಡಿ,ನಿವೃತ್ತ ಸೈನಿಕ ಅಶೋಕ, ಪುನೀತ್ ದೊಡ್ಡಮನಿ, ಕೆ.ಪುತ್ರೇಶ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಮಾಲ್ ಬೀ, ಮುಖಂಡರಾದ ಬೀರಬ್ಬಿ ಬಸವರಾಜ, ಮಲ್ಲಿಕಾರ್ಜುನ ಪೂಜಾರ್, ಈಟಿ ಲಿಂಗರಾಜ, ಹಣ್ಣಿ ಶಶಿಧರ, ಕೋಡಿಹಳ್ಳಿ ಕೊಟ್ರೇಶ, ಡಾ. ಲಕ್ಷ್ಮಣನಾಯ್ಕ, ಸಿರಾಜ್ ಇದ್ದರು.