ಪಿಎಂಶ್ರೀ ಕೇಂದ್ರ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಣೆ
ಬೆಳಗಾವಿ 05: ವಿಶ್ವ ಪರಿಸರ ದಿನದ ಅಂಗವಾಗಿ ಪಿಎಂಶ್ರೀ ಕೇಂದ್ರ ವಿದ್ಯಾಲಯ ಕ್ರಮಾಂಕ 2, ಬೆಳಗಾವಿ ಕ್ಯಾಂಟ್ನಲ್ಲಿ ದಿ. 5ರಂದು ತಾಯಿಯ ಹೆಸರಿನಲ್ಲಿ ಒಂದು ಮರ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉತ್ಸಾಹ, ಮತ್ತು ಪರಿಸರ ಪ್ರಜ್ಞೆಯೊಂದಿಗೆ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಶಾಲೆಯ ಸಮುದಾಯವು ತಾಯಿತನಕ್ಕೆ ನಮನ ಸಲ್ಲಿಸುತ್ತಾ “ತಾಯಿಯ ಹೆಸರಿನಲ್ಲಿ ಒಂದು ಮರ” ಎಂಬ ಭಾವನೆಯನ್ನು ಜಾಗೃತಗೊಳಿಸಿತು. ಈ ಕಾರ್ಯಕ್ರಮದ ಉದ್ದೇಶ ತಾಯಿಯ ಪಾಲನೆ ಮತ್ತು ಸಂರಕ್ಷಣೆ ಗುಣಗಳನ್ನು ಗೌರವಿಸಲು ಅವರ ಹೆಸರಿನಲ್ಲಿ ಹಾಗೂ ಭೂಮಿಯನ್ನು ಹಸಿರುಗೊಳಿಸುವ ಸಲುವಾಗಿ ಮರ ನೆಡುವುದಾಗಿತ್ತು. ತಾಯಿ ಹೇಗೆ ಜೀವ ನೀಡುತ್ತಾಳೆ, ಕಾಪಾಡುತ್ತಾಳೆ ಮತ್ತು ಭವಿಷ್ಯವನ್ನು ರೂಪಿಸುತ್ತಾಳೆ ಹಾಗೆಯೇ ಮರಗಳು ಸಹ ಜೀವದಾನಿಗಳು. ಕಾರ್ಯಕ್ರಮದಲ್ಲಿ 50 ಗಿಡಗಳನ್ನು ನೆಡಲಾಯಿತು. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಯಂದಿರೂ ಉತ್ಸಾಹದಿಂದ ಭಾಗವಹಿಸಿದರು. ಪ್ರತಿಯೊಂದು ಗಿಡವೂ ಒಬ್ಬೊಬ್ಬ ತಾಯಿಯ ಹೆಸರಿನಲ್ಲಿ ಅರ್ಿಸಲಾಯಿತು. ಇದರಿಂದಾಗಿ ಈ ಕಾರ್ಯಕ್ರಮವು ಭಾವನಾತ್ಮಕವಾಗಿ ಅತೀವ ವ್ಯಕ್ತಿಗತ ಮತ್ತು ಸ್ಮರಣೀಯ ಆಯಿತು. ಶಾಲೆಯ ಪ್ರಾಚಾರ್ಯ ಮಹೇಂದ್ರ ಕಾಲ್ರಾ ಅವರು ಈ ಕಾರ್ಯಕ್ರಮವನ್ನು ಶ್ಲಾಘಿಸಿ ಮಾತನಾಡಿ ಯಾವಾಗ ಭಾವನೆಗಳು ಪ್ರಕೃತಿಯೊಂದಿಗೆ ಜೋಡಿಸುತ್ತವೆಯೊ, ಆಗ ಪ್ರತಿ ಕ್ರಿಯೆಯೂ ಒಂದು ಚಳವಳಿಯಾಗುತ್ತದೆ. ಅವರು ಎಲ್ಲರಿಗೂ ಆ ಗಿಡಗಳನ್ನು ಪೋಷಿಸಿ, ವಟವೃಕ್ಷಗಳಾಗಿ ಬೆಳೆಸುವ ಪ್ರತಿಜ್ಞೆ ಮಾಡಿಸಿದರು. ಈ ಕಾರ್ಯಕ್ರಮವು ತಾಯಿಯ ಪ್ರತಿಯೊಬ್ಬರ ಮೇಲಿನ ಕೃತಜ್ಞತೆಯನ್ನು ಮಾತ್ರವಲ್ಲದೆ ಭೂಮಾತೆಯ ಮೇಲಿನ ನಮ್ಮ ಕರ್ತವ್ಯವನ್ನೂ ಅರಿವಿಗೆ ತಂದಿತು.