ಜ್ಞಾನ ದಾಹ ನೀಗಿಸಲು ಕಲಿಕಾಸಕ್ತಿ ಬೇಕು: ಕೋಟ್ಯಾಳ
ಆಲಮಟ್ಟಿ 03: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಹಲವಾರು ಮಹತ್ವಾಕಾಂಕ್ಷೆ ಹೊತ್ತಿರುವ ಹಲ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಹೊಸ ಶೈಕ್ಷಣಿಕ ವರ್ಷದ ಆರಂಭ ದಿನದಂದೇ ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲು ಸೂಕ್ತ ಸಿದ್ದತೆಯೊಂದಿಗೆ ಕ್ರಮಕೈಗೊಂಡಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.ಕಾರಣ ಮಕ್ಕಳು ಪಠ್ಯ ಪುಸ್ತಕದ ಸದುಪಯೋಗ ಪಡಿಸಿಕೊಂಡು ಜ್ಞಾನ ದಾಹ ನೀಗಿಸಿಕೊಳ್ಳಲು ಕಲಿಕಾಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.
ಸ್ಥಳೀಯ ಎಸ್.ವ್ಹಿ.ವ್ಹಿ ಸಂಸ್ಥೆಯ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸರಕಾರ ಕೊಡಮಾಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಕಳೆದು ಪುನಃ ಶಾಲೆಗೆ ಹರ್ಷಚಿತ್ತರಾಗಿ ಮುಂಗಾರು ಈ ಇಳೆಯ ಸಿಂಚನದಲ್ಲಿ ಆಗಮಿಸುತ್ತಿರುವಾಗಲೇ ಪಠ್ಯ ಪುಸ್ತಕ ಭಂಢಾರ ಕೈಸೇರುತ್ತಿರುವುದು ಓಚಿತ್ಯವಾಗಿದೆ. ಶಾಲಾ ಪ್ರಾರಂಭ ದಿನದಿಂದಲೇ ಓದಾಸಕ್ತಿ ನೈಪುಣ್ಯತೆ ಮಕ್ಕಳು ಹೊಂದಬೇಕು. ಶೈಕ್ಷಣಿಕ ಪ್ರಗತಿಗೆ ತಪ್ಪದೇ ಶಾಲೆಗೆ ಬಂದು ಅದ್ಯಯನ ಪ್ರಕ್ರಿಯೆಯಲ್ಲಿ ತೋಡಗಬೇಕು. ಪೈಪೋಟಿಯುತ ಯುಗವಿದು. ಶಿಕ್ಷಣಕ್ಕೆ ಅನಾಸಕ್ತಿ ಭಾವ ತಾಳಿದರೆ ಭವಿಷ್ಯತ್ತಿನ ದಿನಮಾನದಲ್ಲಿ ಸಮಸ್ಯೆಗಳ ತೋಳಲಾಟದಲ್ಲಿ ಸಿಲುಕಬೇಕಾದೀತು ಎಂದು ಯುವಜನಾಂಗಕ್ಕೆ ಎಚ್ಚರಿಸಿದರು. ಗ್ರಾಮೀಣ ಭಾಗದ ಶಾಲಾ ಮಕ್ಕಳು ಶೈಕ್ಷಣಿಕ ಸುರಕ್ಷತೆ ಕಾಪಾಡಿಕೊಳ್ಳಬೇಕು.ಗುಣಮಟ್ಟದ ಕಲಿಕಾ ಕಹಳೆಯಲ್ಲಿ ಮಿಂದೇಳಬೇಕು. ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಜ್ಞಾನ ವಾಹಿನಿಯ ಕೌಶಲ್ಯ ಪ್ರದರ್ಶಿಸಬೇಕು. ಹೊಸದಿಸೆ, ಹೊಸ ಅಧ್ಯಾಯದೊಂದಿಗೆ ನವ ಜ್ಞಾನ ಸಂವತ್ಸರದಲ್ಲಿ ಶಿಕ್ಷಣದ ಬೆಳಕು ಕಂಡುಕೊಳ್ಳಬೇಕು ಎಂದರು.
ಆಲಮಟ್ಟಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತ ಕಲಿಕಾ ವಾತಾವರಣವನ್ನು ಸಂಸ್ಥೆಯ ಮುಖ್ಯಸ್ಥರು ಕಲ್ಪಿಲಿದ್ದಾರೆ. ಆ ದಿಸೆಯಲ್ಲಿ ಲಿಂಗೈಕ್ಯ ತೋಂಟದ ಡಾ, ಸಿದ್ದಲಿಂಗ ಪೂಜ್ಯರ ಕೊಡುಗೆ ಅನುಪಮವಾಗಿದೆ. ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳವರ ಹಾಗೂ ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ, ಶಿವಾನಂದ ಪಟ್ಟಣಶೆಟ್ಟರ ಗುರುಗಳ ದೂರದೃಷ್ಟಿ ಶೈಕ್ಷಣಿಕ ಕಳಕಳಿ ಎಂದೂ ಮರೆಯಲಾಗದಂಥದ್ದು ಎಂದು ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ನುಡಿದರು. ಎಂ.ಎಚ್.ಎಂ.ಪ.ಪೂ.ಕಾಲೇಜ್ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಮಾತನಾಡಿ, ಮಕ್ಕಳು ಕಲಿಕಾ ವಿಧಾನದಲ್ಲಿ ತನ್ಮಯರಾಗಬೇಕು.ಕಲಿಕಾನುಭದಿಂದ ಉನ್ನತಿ ಕಾಣಬೇಕು.ಓದು,ಬರಹದ ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸಿಕೊಂಡು ಶೈಕ್ಷಣಿಕ ಬಲ ಹೆಚ್ಚಿಸಿಕೊಳ್ಳಬೇಕು ಎಂದರು.
ಮಕ್ಕಳು ಪಾಠ, ಪ್ರವಚನ ಗಮನವಿಟ್ಟು ಕೇಳಬೇಕು.ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆ ಹಗಲಿರುಳು ಶ್ರಮಿಸುತ್ತಿದೆಲ್ಲದೇ ಮಕ್ಕಳ ಶೈಕ್ಷಣಿಕ ಬೆಂಬಲಕ್ಕೆ ನಿಂತಿದೆ. ಆ ನಿಟ್ಟಿನಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಪೋಷಕರ ಹಾಗೂ ಗುರುಗಳ ಪ್ರೀತಿಗೆ ಪಾತ್ರರಾಗಬೇಕು ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ, ಜಿ.ಆರ್.ಜಾಧವ, ಎಂ.ಬಿ. ದಶವಂತ, ಶ್ರೀಧರ ಚಿಮ್ಮಲಗಿ, ಸಿದ್ದು ಪಟ್ಟಣಶೆಟ್ಟರ ಸೇರಿದಂತೆ ಪಾಲಕರು ಇದ್ದರು.ಪೋಟೋ : ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸರಕಾರ ಕೊಡಮಾಡಿದ ಉಚಿತ ಪಠ್ಯ ಪುಸ್ತಕಗಳನ್ನು ಶಾಲೆಯ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಹಾಗೂ ಎಂ.ಎಚ್.ಎಂ.ಪ.ಪೂ.ಕಾಲೇಜ್ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ನೇತೃತ್ವದಲ್ಲಿ ವಿತರಿಸಲಾಯಿತು.