ಘಟಿಕೋತ್ಸವ ಪ್ರಮಾಣ ಪತ್ರ ಶುಲ್ಕವನ್ನು ಕಡಿಮೆಗೊಳಿಸಲು ಅಭಾವಿಪ ಆಗ್ರಹ

Abhayap demands reduction in convocation certificate fee

ಘಟಿಕೋತ್ಸವ ಪ್ರಮಾಣ ಪತ್ರ ಶುಲ್ಕವನ್ನು ಕಡಿಮೆಗೊಳಿಸಲು ಅಭಾವಿಪ ಆಗ್ರಹ 

ಬಳ್ಳಾರಿ 06: ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯನ್ನು ತರಲು ವಿಶ್ವ ವಿದ್ಯಾಲಯಗಳ ಪಾತ್ರವು ಮಹತ್ವದ್ದಾಗಿದೆ. ಇವತ್ತು ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯ ಸುಧಾರಣೆಯ ನೆಪದಲ್ಲಿ ಶುಲ್ಕದ ಹೊರೆಯನ್ನು ಹಾಕುತ್ತಿರುವುದು ಖಂಡನೀಯ. ಘಟಿಕೋತ್ಸವ ಪ್ರಮಾಣ ಪತ್ರದ ಶುಲ್ಕವು ಬೇರೆ ವಿಶ್ವ ವಿದ್ಯಾಲಯಗಳಿಗೆ ಹೋಲಿಸಿದರೆ ಎರಡು ಪಟ್ಟು ಬಳ್ಳಾರಿ ವಿಶ್ವವಿದ್ಯಾಲಯ ಶುಲ್ಕವಿದೆ. ಬಡಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಕತ್ತರಿ ಹಾಕಿದಂತಾಗುತ್ತದೆ. 

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದಿಂದ ವಿಶ್ವ ವಿದ್ಯಾಲಯ ನಡೆಸಲು ಹಾಗೂ ಸುಧಾರಿಸುವಯೋಚನೆಯುಅವೈಜ್ಞಾನಿಕವಾಗಿದೆ.ಕೂಡಲೇ ಘಟಿಕೋತ್ಸವದ ಪ್ರಮಾಣ ಪತ್ರದ ಶುಲ್ಕವನ್ನುರೂ. 3025ನ್ನು ಕೂಡಲೇ ಕಡಿಮೆಗೊಳಿಸಬೇಕೆಂದು ಅ.ಭಾ.ವಿ.ಪ ಆಗ್ರಹಿಸುತ್ತದೆ. ಜೊತೆಗೆ ಪದವಿ ಪ್ರಮಾಣ ಪತ್ರದ ವಿತರಣೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧಕ್ರಮ ಕೈಗೊಳ್ಳಬೇಕು ಹಾಗೂ ಇದನ್ನುಉನ್ನತತನಿಖೆಗೆ ನೀಡಬೇಕು ಎಂದು ಅ.ಭಾ.ವಿ.ಪ ಆಗ್ರಹಿಸಿ ಕುಲಪತಿಗಳು, ವಿ.ಕೃ.ವಿಶ್ವವಿದ್ಯಾಲಯ, ಬಳ್ಳಾರಿರವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿರಾಜ್ಯಕಾರ್ಯಕಾರಣಿ ಸದಸ್ಯರಾದಅರವಿಂದ್, ನಗರ ಕಾರ್ಯದರ್ಶಿಯಾದ ನವೀನ್ ಹೂಗಾರ್, ನಗರ ಸಂಘಟನಾ ಕಾರ್ಯದರ್ಶಿಯಾದ ಟಿ.ಭರತ್ ಹಂಪಾಪಟ್ಟಣ, ಕಾರ್ಯಕರ್ತರಾದದರ್ಶನ್, ಮಾರುತಿ, ಸಾಗರ್, ದಿಲಿಪ್, ಮಾರುತಿ, ಸಂತೋಷ್, ಪಂಕಜ್, ರೂಪಾಲಿಕ, ಸುರೇಖಾ ಹಾಗೂ ಮತ್ತಿತರಕಾರ್ಯಕರ್ತರು ಉಪಸ್ಥಿತರಿದ್ದರು.