ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರ​‍್ಪವರು ಅವಿರೋಧವಾಗಿ ಆಯ್ಕೆ

Chandrapavar was elected unopposed as the new president of Gram Panchayat

ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರ​‍್ಪವರು ಅವಿರೋಧವಾಗಿ ಆಯ್ಕೆ 

ರಾಣಿಬೆನ್ನೂರ 12:  ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರ​‍್ಪ ರಾಮಪ್ಪ ಹಾಲಿವಾಣದ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಾ.ಪಂ ಇಓ ಪರಮೇಶ ಘೋಷಿಸಿದರು. 

   ವಿಜಯಲಕ್ಷ್ಮಿ ಸಾರದ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರ​‍್ಪ ರಾಮಪ್ಪ ಹಾಲಿವಾಣದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೂಧವಾಗಿ ಆಯ್ಕೆಯಾದರು. 

  ಗ್ರಾ.ಪಂ ಮಾಜಿ ಅಧ್ಯಕ್ಷೆ ಲಲಿತವ್ವ ಬಡಿಗೇರ, ವರ್ತಕ ಸಂಘದ ಅಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ,  ಜಿ.ಬಿ.ಮಾಸಣಗಿ, ವಿಠ್ಠಲಾಚಾರ ಬಡಿಗೇರ, ಕುಮಾರ್ ಶಂಕ್ರಿಕೊಪ್ಪದ, ಮುರಡಪ್ಪ ಚೌಡಪ್ಪಳವರ, ಬೀರ​‍್ಪ ಕೊಳ್ಳೇರ, ಬಸಪ್ಪ ಬೆನ್ನೂರ, ಬಸವರಾಜ ಚಕ್ರಸಾಲಿ, ಶಿವಕುಮಾರ ಮುದ್ದಪ್ಪಳವರ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.