ಶಾಲಾ ಪ್ರಾರಂಭೋತ್ಸವಕ್ಕೆ ದಾಖಲಾತಿ ಆಂದೋಲನಕ್ಕೆ ಚಾಲನೆ
ಬೀಳಗಿ 31: ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸರ್ಕಾರಿ ನೌಕರರ ಮತ್ತು ಜನಪ್ರತಿನಿಧಿಗಳ ಕುಟುಂಬದ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದುವಂತೆ ಸರ್ಕಾರ ಕಾನೂನು ಜಾರಿಗೆ ತರಬೇಕು. ಈ ಕಾನೂನು ಜಾರಿಗೆ ತಂದರೆ ಮಾತ್ರ ಮುಂಬರುವ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು ಉಳಿಯಲಿವೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ.ಸಾವಕಾರ ಅಭಿಪ್ರಾಯ ಪಟ್ಟರು.
ತಾಲೂಕಿನ ಅರಕೇರಿ ಗ್ರಾಮದಲ್ಲಿ 2025-26ನೇ ಸಾಲಿನ ದಾಖಲಾತಿ ಆಂದೋಲನ, ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಗುವಿಗೆ ಅಕ್ಷರ ಅಭ್ಯಾಸ ಹೇಳಿ ಕೊಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾವಂತರು, ಬುದ್ಧಿವಂತರಿಗೆ ಕೊರತೆಯಿಲ್ಲ. ಆದರೆ ಪ್ರಜ್ಞಾವಂತರ ಕೊರತೆ ಇದೆ. ಶಿಕ್ಷಕರು ವಿದ್ಯೆ ಮತ್ತು ಬುದ್ದಿ ಜೊತೆಗೆ ಪ್ರಜ್ಞಾವಂತರನ್ನಾಗಿ ಮಾಡಬೇಕೆಂದು ಹೇಳಿದರು.
ಆರ್. ಬಿ. ನಬಿವಾಲೆ, ಕುಂದರಗಿ ಸಿಆರ್ಿ ಮಹೇಶ ಎಂ.ಎಂ.ಸಾವಕಾರ ಮುಖ್ಯೋಪಾಧ್ಯಾಯ ಬಿ.ಎಸ್. ಭೂಷಣ್ಣವರ, ಕೆಜಿಎಸ್ ಪ್ರಭಾರ ಮುಖ್ಯಗುರು ಬಿ.ಎಂ.ಮನಗೂಳಿ, ಡಿಪಿಇಪಿ ಎಲ್ಪಿಎಸ್ ಮುಖ್ಯಗುರುಮಾತೆ ವಾಲೀಕಾರ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಧಾ ಹನಮರ, ನಾಗಪ್ಪ ಢವಳೇಶ್ವರ, ಹನಮಂತ ಹಣಮರ ಹಾಗೂ ಎಚ್ಪಿಎಸ್, ಕೆಜಿಎಸ್, ಡಿಪಿಇಪಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೇಣುಕಾಕಾಜೂರ ಪ್ರಾರ್ಥಿಸಿದರು. ಎಸ್. ಎಸ್. ಹಿರೇಮಠ ನಿರೂಪಿಸಿದರು. ಬಿ. ಎಸ್. ಬೆಳಗಂಟಿ ಸ್ವಾಗತಿಸಿದರು. ಐ. ಎಚ್. ಬಳಿಗಾರ ವಂದಿಸಿದರು.