ಕಾರವಾರ 29: ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಬುಧುವಾರ ಸಂಜೆಯಿಂದ ಗುರುವಾರ ಸಂಜೆತನಕ ಮಳೆ ಸುರಿಯಿತು. ಭಟ್ಕಳದಲ್ಲಿ ಅತೀ ಹೆಚ್ಚು 114.2 ಮಿಲಿ ಮೀಟರ್ ಮಳೆಯಾಗಿದೆ. ಹೊನ್ನಾವರದ ನಗರಬಸ್ತಿಕೇರಿಯಲ್ಲಿ ,ಖಾರ್ವಾದಲ್ಲಿ 103 ಮಿಲಿ ಮೀಟರ್ ಮಳೆ ಸುರಿದಿದೆ.ಅಲ್ಲಲ್ಲಿ ಬಿಟ್ಟು ಬಿಟ್ಟು ಸೇರಿದರೆ, ಕಾರವಾರದಲ್ಲಿ ಸತತ ಹನ್ನೆರಡು ತಾಸು ಮಳೆ ಬಿತ್ತು. ಪರಿಣಾಮ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿತ್ತು.
ಸೀಬರ್ಡ ಅರ್ಗಾ ಗೇಟ್ ಬಳಿ ರಸ್ತೆಯಲ್ಲಿ ಕೆಲ ಸಮಯ ನೀರು ನಿಂತಿತ್ತು. ಕೆ ಎಚ್ ಬಿ ಕಾಲೊನಿಯ ಜ್ಞಾನ ಮಂದಿರ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆಯ ಗ್ರೌಂಡ್, ಗುನಗಿ ವಾಡ ಕನೆಕ್ಟ ಮಾಡುವ ಏರಿಯಾಗಳು ಜಲಾವೃತವಾಗಿದ್ದವು. ಆದರೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಹೊನ್ನಾವರ ಹೆದ್ದಾರಿ ಕರ್ನಲ್ ಹಿಲ್ ಸನಿಹ ರಸ್ತೆಗೆ ಮಣ್ಣು ಕುಸಿದಿತ್ತು.
ಹೆದ್ದಾರಿ ನಿರ್ವಹಣಾ ಸಿಬ್ಬಂದಿ ಮಣ್ಣು ತೆರವು ಮಾಡಿದರು . ಜಿಲ್ಲೆಯ ಅಲ್ಲಿಲ್ಲಿ 11 ಮನೆಗಳು ಭಾಗಶಃ ಬಿದ್ದಿವೆ. ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.ಘಟ್ಟದ ತಾಲೂಕಿನಲ್ಲಿ ಶಿರಸಿಯಲ್ಲಿ ಮಳೆಯಾಗಿದೆ. ದಾಂಡೇಲಿಯಲ್ಲಿ ಮಳೆ ಸ್ವಲ್ಪ ಬಿದ್ದಿದೆ. ಹಳಿಯಾಳ ,ಜೊಯಿಡಾದಲ್ಲಿ ಮಳೆ ಸಣ್ಣ ಪ್ರಮಾಣದಲ್ಲಿ ಬಿದ್ದಿದೆ . ನಾಳೆ ಸಹ ಮಳೆ ಮುಂದುವರಿಯಲಿದೆ.
ಸಮುದ್ರ ಪ್ರಕ್ಷುಬ್ಧವಾಗಿದ್ದು, ಕಡಲಿಗೆ ದೋಣಿ ಇಳಿಸುವ ಸಾಹಸಕ್ಕೆ ಯಾರು ಮುಂದಾಗಿಲ್ಲ .ಮಳೆ ಮತ್ತು ಹಾನಿಯ ವಿವರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 67.7 ಮಿಮೀ, ಭಟ್ಕಳದಲ್ಲಿ 114.2, ಹಳಿಯಾಳ 2.6 ಹೊನ್ನಾವರ 98.6, ಕಾರವಾರ 58.2, , ಕುಮಟಾ 71.5, ಮುಂಡಗೋಡ 6.2, ಸಿದ್ದಾಪುರ 46.3 , ಶಿರಸಿ 25.5, ಸೂಪಾ 7.2 ಯಲ್ಲಾಪುರ 13.9 ದಾಂಡೇಲಿಯಲ್ಲಿ 2.5 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 11 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ