ಕೊವಿಡ್‌ನಿಂದ ವೃದ್ಧ ಸಾವು, ಕೇಸ್‌ಗಳ ಮೇಲೆ ನಿಗಾ: ವಿಠ್ಠಲ ಶಿಂಧೆ

Elderly dies from Covid, cases being monitored: Vitthal Shinde

ಬೆಳಗಾವಿ 29: ಕೋವಿಡ್ ಕರಾಳತೆ ಜನಮಾನಸದಿಂದ ಮರೆಯಾಗುತ್ತಿರುವಾಗಲೇ ಕೋರೋನಾ ಮತ್ತೇ ವಕ್ಕರಿಸುತ್ತಿದೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ ಎಂಬಂತೆ ಪೀಡೆ ತೊಲಗಿತು ಅಂದುಕೊಳ್ಳುವಾಗಲೇ ಮತ್ತೆ ಪ್ರತ್ಯಕ್ಷವಾಗುತ್ತಿದೆ. ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ವೃದ್ಧನೋರ್ವ ಕಳೆದ ಎರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಕೊವಿಡ್ ಪಾಸಿಟಿವ್ ನಿಂದ ಮೃತಪಟ್ಟಿದ್ದಾನೆ ಎಂದು ಬಿಮ್ಸ್‌ ಸರ್ಜನ್ ವಿಠ್ಠಲ ಶಿಂಧೆ ತಿಳಿಸಿದರು.  

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ 70ವರ್ಷದ ವ್ಯಕ್ತಿ ನಮ್ಮಲ್ಲಿ ಬಂದು ದಾಖಲಾಗಿದ್ದ. ಆ ವ್ಯಕ್ತಿ ಎರಡು ದಿನದ ಹಿಂದೆ ಕೆಎಲ್‌ಇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆ ಇದ್ದವು. ಈ ಕಾರಣಕ್ಕೆ ಕೊವಿಡ್ ರಾ​‍್ಯಟ್ ಟೆಸ್ಟ್‌ ಮಾಡಿದ್ದ ವೇಳೆ ಕೊವಿಡ್ ಪಾಸಿಟಿವ್ ಕೂಡ ಬಂದಿತ್ತು. ಬಳಿಕ ರೋಗಿಯನ್ನು ನಮ್ಮ ಆಸ್ಪತ್ರೆಗೆ ಶಿಪ್ಟ್‌ ಮಾಡಿದ್ದರು. ಚಿಕಿತ್ಸೆ ನೀಡಿದರೂ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅವರ ಸ್ವ್ಯಾಬ್ ಕೂಡ ತೆಗೆದುಕೊಂಡಿದ್ದು ಹುಬ್ಬಳ್ಳಿಗೆ ಕಳುಹಿಸುತ್ತೇವೆ. ಸಾವಿನ ಬಳಿಕ ಕೊವಿಡ್ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ.  

ಮಾಸ್ಕ್‌ ಹಾಕುವುದು ಸೇರಿದಂತೆ ಕೊವಿಡ್ ಕೇಸ್‌ಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ತಿಳಿಸಿದರು.ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಇದು ಮೊದಲ ಬಲಿಯಾಗಿದ್ದು, ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಚಿಕಿತ್ಸೆಗೆ ಅಂತಾ ಬೀಮ್ಸ್‌ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.