ಅಧಿಕಾರಿಗಳು ಆಸಕ್ತಿವಹಿಸಿ ಕಾರ್ಯನಿರ್ವಹಿಸಿದರೆ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ : ಶಾಸಕ ಪಠಾಣ

If the officials act with interest, it will be possible to provide justice to the people of the con

ಅಧಿಕಾರಿಗಳು ಆಸಕ್ತಿವಹಿಸಿ ಕಾರ್ಯನಿರ್ವಹಿಸಿದರೆ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ : ಶಾಸಕ ಪಠಾಣ 

ಶಿಗ್ಗಾವಿ 03 : ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಕುಟುಂಬಗಳು ಪಟ್ಟಾರಹಿತ ಮನೆಗಳಲ್ಲಿ ವಾಸವಾಗಿದ್ದಾರೆ. ನವಂಬರ 25ರೊಳಗೆ 5 ಸಾವಿರ ಹಕ್ಕುಪತ್ರ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಅಧಿಕಾರಿಗಳು ಆಸಕ್ತಿವಹಿಸಿ ಕಾರ್ಯನಿರ್ವಹಿ ಸಿದರೆ ಕ್ಷೇತ್ರದ 80 ಸಾವಿರ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಮೂರು ಪಟ್ಟಣಗಳಲ್ಲಿ ಪ್ರಗತಿಯಲ್ಲಿರುವ ಅಮೃತ 2.0 ಕುಡಿಯುವ ನೀರಿನ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಜನರ ಹಿತಾಸಕ್ತಿ ಮರೆತು ಗುತ್ತಿಗೆದಾ ರರ ಹಿತಾಸಕ್ತಿ ಕಾಯುತ್ತಿರುವುದು ಸರಿಯಲ್ಲ ಪಟ್ಟಣಗಳ ರಸ್ತೆಯಲ್ಲಿ ತೆಗೆದಿರುವ ಪೈಪ್‌ಲೈನ್ ಕಾಲುವೆಗಳನ್ನು ತಕ್ಷಣದಲ್ಲೇ ನಿಯಮಾವಳಿಯಂತೆ ಮುಚ್ಚಿಸರಿಪಡಿಸಬೇಕು ಎಂದು ಆದೇಶಿಸಿದರು.   

ವಲಯ ಅರಣ್ಯ, ಅರಣ್ಯ ಇಲಾಖೆಗಳು ತಾಲೂಕಿನಲ್ಲಿ ಟ್ರೇ ಪಾರ್ಕ್‌ ಅಭಿವೃದ್ಧಿಗೊಳಿಸಬೇಕು. ಹಲವಾರು ಯೋಜನೆಗಳ ಮೂಲಕ ನೆಟ್ಟಿರುವ ಮರಗಳು ಇಲಾಖೆಯನಿರ್ಲಕ್ಷ್ಯದಿಂದ ಬೆಳೆಯುತ್ತಿಲ್ಲ ರೈತರ ಹೊಲಗಳು ಮತ್ತು ಕ್ಷೇತ್ರದ ಶಾಲೆ ಮತ್ತು ವಿವಿಧ ಇಲಾಖೆಗಳ ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟರೆ ಯೋಜನೆಯ ಉದ್ದೇಶ ಸಾಧಿಸಲು ಸಾಧ್ಯವಾಗುತ್ತದೆ. ಕ್ಷೇತ್ರದ ನೂರಾರು ಎಕರೆಗಳಲ್ಲಿ ಇರುವ ನೇಲಗಿರಿ ಕಾಡನ್ನು ಪರಿವರ್ತಿಸಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸುವ ಮೂಲಕ ಸಮೃದ್ಧ ಕಾಡನ್ನು ಬೆಳೆಸುವ ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕೆಂದು ಹೇಳಿದರು.ಕ್ಷೇತ್ರದ ಜನತೆಗೆ 24/7 ಕುಡಿಯುವ ನೀರಿನ ಯೋಜನೆ ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ತಾಲೂಕ ನೊಡೆಲ್ ಅಧಿಕಾರಿ ರವಿ ತಿರ್ಲಾಪುರ ಮಾತನಾಡಿ ಯಾವುದೇ ಒಂದು ಇಲಾಖೆ ಜನವಸತಿ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ಇತರೆ ಇಲಾಖೆಗಳ ಸಹಕಾರ ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಇಲಾಖೆಗಳು ಒಂದಕ್ಕೊಂದು ಪೂರಕ ಕೆಲಸ ಮಾಡಬೇಕು ಎಂದು ಸೂಚಿಸಿದರು.  ರವಿ ತಿರ್ಲಾಪುರ ತಾಲೂಕು ನೊಡೆಲ್ ಅಧಿಕಾರಿ ವಿಭಾಗಾಧಿಕಾರಿ ಶುಭಂ ಶುಕ್ಲಾ ತಹಶೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಮಂಜುನಾಥ ಸಾಳುಂಕೆ, ಕೆಡಿಪಿ ಸದಸ್ಯರು, ಗ್ಯಾರಂಟಿ ಸಮಿತಿ ಅಧ್ಯಕ್ಷ, ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು. 

ಭಾಕ್ಸ ಸುದ್ದಿ : ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಇಲಾಖೆ ಬತ್ತ, ಸೋಯಾಬೀನ್ ಬೀಜಗಳನ್ನು ಪೂರೈಸಬೇಕು. ಬೆಳೆವಿಮೆಯಲ್ಲಿ ಏಜಂಟರ್ ಹಾವಳಿ ಮತ್ತು ರೈತರಿಗಾಗುತ್ತಿರುವ ಮೋಸಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ತ್ರೈಮಾಸಿಕ ಸಭೆಗೆ ಮಾಹಿತಿ ನೀಡದ ಮತ್ತು ಗೈರಾದ ಇಲಾಖಾ ಮುಖ್ಯಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಎಸಿ ಆದೇಶ. ಅಮೃತ 2.0 ಕುಡಿಯುವ ನೀರಿನ ಯೋಜನೆಗೆ ರೈತರಿಂದ ವಶಪಡೆಸಿಕೊಂಡ ಭೂಮಿಗೆ ಶೀಘ್ರ ಪರಿಹಾರ ನೀಡಲು ಆದೇಶಿಸಲಾಯಿತು. ನಿರ್ಮಾಣ ಹಂತದ ವಸತಿ ನಿಲಯಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಲಭ್ಯವಾಗುವಂತೆ ವ್ಯವಸ್ತೆ ಮಾಡಲು ಸೂಚನೆ.