ಲೋಕದರ್ಶನ ವರದಿ
ಕೊಪ್ಪಳ 15:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 35ನೇ ಸಮ್ಮೇಳನ ಕೊಪ್ಪಳ ಜಿಲ್ಲೆಯಲ್ಲಿ ನಡೆಸಲು ರಾಜ್ಯ ನಿರ್ಣಯ ಕೈಗೊಂಡಿರುವ ಹಿನ್ನಲೆಯಲ್ಲಿ ಹಾಗೂ ಬರುವ ಜೂನ್ 2ರಂದು ಹಾಸನದಲ್ಲಿ ಜರುಗಲಿರುವ ರಾಜ್ಯ ಕಾರ್ಯಕಾರಣಿ ಪತ್ರಕರ್ತರ ಮಹಾಸಭೆಗೆ ತೆರಳಲು ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಎಂ. ಸಾದಿಕ್ ಅಲಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಜರುಗಿತು.
ಹಾಸನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಸದಸ್ಯ ಪತ್ರಕರ್ತರು ಭಾಗವಹಿಸಬೇಕು ಮತ್ತು ಕೊಪ್ಪಳಕ್ಕೆ 35ನೇ ರಾಜ್ಯ ಸಮ್ಮೇಳನ ಘೋಷಿಸಿರುವ ರಾಜ್ಯ ಪದಾಧಿಕಾರಿಗಳಿಗೆ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸಲು ನಿರ್ಣಯಿಸಲಾಯಿತು. ಹಾಗೂ ಬರುವ ಸಪ್ಟೆಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳಲಾಯಿತು.
ಸಮ್ಮೇಳನದ ಸಂದರ್ಭದಲ್ಲಿ ಸಂಘದ ವತಿಯಿಂದ ಪತ್ರಿಕಾ ಭವನ ನಿಮರ್ಾಣ ಕಾಮಗಾರಿಗೆ ಕೈಗೊಳ್ಳಲು ಅಗತ್ಯ ಎಲ್ಲಾ ವ್ಯವಸ್ಥೆ ಕೈಗೊಳ್ಳಲು ಉಪಸಮಿತಿ ರಚಿಸಿ ಕಾರ್ಯನಿರ್ವಹಣೆ ಜವಬ್ದಾರಿ ನೀಡಲಾಯಿತು. ಸದರಿ ಉಪ ಸಮಿತಿಗೆ ಹಿರಿಯ ಪತ್ರಕರ್ತ ಸಿದ್ಧನಗೌಡ ಪಾಟೀಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಮೌಲಾ ಹುಸೇನ್ ಬುಲ್ಡಿಯಾರ್, ರಾಜು ಬಿ.ಆರ್. ಹೆಚ್.ವಿ.ರಾಜಾಬಕ್ಷಿ ಮತ್ತು ನಾಗರಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಒಟ್ಟು ಐದು ಜನರ ಉಪ ಸಮಿತಿ ತಂಡ ನಿಯೋಜಿಸಲಾಯಿತು.
ಅದರಂತೆ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆ ಕಾರ್ಯನಿರ್ವಹಣೆಯ ಉಪಸಮಿತಿ ರಚಿಸಿ ಪತ್ರಕರ್ತರಾದ ಸಿರಾಜ್ ಬಿಸರಳ್ಳಿ ಅವರನ್ನು ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿ ಪತ್ರಕರ್ತರಾದ ಶಿವರಾಜ್ ನುಗಡೋಣಿ, ಬಸವರಾಜ್ ಕಕರ್ಿಹಳ್ಳಿ, ಖಲೀಲ್ ಹುಡೇವ್ ಮತ್ತು ರವಿಕುಮಾರ್ ಅವರನ್ನು ಉಪ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಐದು ಜನರ ಸದಸ್ಯ ತಂಡ ರಚಿಸಲಾಯಿತು.
ಈ ಎರಡು ಸಮಿತಿಗಳಲ್ಲಿ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದಶರ್ಿ, ರಾಜ್ಯ ಕಾರ್ಯಕಾರಣಿ ಸದಸ್ಯ, ನಾಮಕರಣ ಸದಸ್ಯ ಒಳಗೊಂಡಂತೆ ಒಟ್ಟು 9 ಜನರು ಉಪ ಸಮಿತಿಗಳಲ್ಲಿ ಸಮ್ಮೇಳನದ ಸಿದ್ಧತೆ ಕುರಿತು ಕಾರ್ಯನಿರ್ವಹಿಸಲಿದೆ.
ಸಮ್ಮೇಳನದ ಸಿದ್ಧತೆ ಕುರಿತು ಶೀಘ್ರ ಸಂಘದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಯಾಗಿರುವ ಸಂಜೀವ್ರಾವ್ ಕುಲಕರ್ಣಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದು ಅಂದಿನ ಸಂದರ್ಭದಲ್ಲಿ ಅವರ ಅಧ್ಯಕ್ಷತೆಯಲ್ಲಿ ಪುನಃ ಪೂರ್ವಭಾವಿ ಸಿದ್ಧತೆ ಸಭೆ ಜರುಗಿಸಿ ಸಮ್ಮೇಳನಕ್ಕೆ ಗುರುತಿಸಿದ ಕೊಪ್ಪಳ ನಗರದಲ್ಲಿರುವ ವಿವಿಧ ಕಲ್ಯಾಣ ಮಂಟಪದ ಪರಿವೀಕ್ಷಣೆ ಕಾರ್ಯ ನಡೆಸಿ ನಿರ್ಧರಿಸಲಾಗುವುದು ಹಾಗೂ ಜಿಲ್ಲೆಯ 7 ತಾಲೂಕುಗಳಿಗೆ ಜಿಲ್ಲಾ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಸಮಾಲೋಚನೆ ಸಭೆ ನಡೆಸಿ ಸಮ್ಮೇಳನದ ಸಿದ್ಧತೆ ನಡೆಸಲಾಗುವುದು ಎಂದು ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ತಿಳಿಸಿದರು.
ಸಭೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಜಿ.ಎಸ್.ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ್ ಹೆಚ್.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.