ಹರ್ತಿ ಗ್ರಾಮದಲ್ಲಿ ಜ. 2 ರಿಂದ 13 ವರೆಗೆ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ

J. in Harti village. Verses 2 to 13 are spiritual discourses

ಹರ್ತಿ ಗ್ರಾಮದಲ್ಲಿ ಜ. 2 ರಿಂದ 13 ವರೆಗೆ  ವಚನ ದರ್ಶನ ಆಧ್ಯಾತ್ಮಿಕ ಪ್ರವಚನ

ಗದಗ 31 : ತಾಲ್ಲೂಕಿನ  ಹರ್ತಿ ಗ್ರಾಮದಲ್ಲಿ ಇದೇ ಜ. 2 ರಿಂದ 13 ರ ವರೆಗೆ ಪ್ರತಿದಿನ ಸಂಜೆ 6.30 ರಿಂದ 8 ಗಂಟೆ ವರೆಗೆ ಹಿರೇವಡ್ಡಟ್ಟಿಹಿಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ  ಮಹಾಸ್ವಾಮಿಗಳಿಂದ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಜರುಗುಲಿದೆ.  

 ಜ. 2 ರಂದು  ಬೆಳಿಗ್ಗೆ 7 ಗಂಟೆಗೆ ಹರ್ತಿ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ  ಶ್ರೀ ಬಸವಣ್ಣ ದೇವರಿಗೆ  ರುದ್ರಾಭಿಷೇಕ, ಪೂಜೆ ನಂತರ  ಪ್ರಸಾದ ವಿತರಣೆ ಜರುಗುವದು. ಸಂಜೆ 4 ಗಂಟೆಗೆ “ಬಸವ ಬುತ್ತಿ”  ಬಸವಣ್ಣನವರ  ವಚನ ಗ್ರಂಥಗಳ ಮೆರವಣಿಗೆಯು ತ್ರಿಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭ ಗೊಂಡು  ಗ್ರಾಮದ ಪ್ರಮುಖ ಬೀದಿಗಳಲ್ಲಿ  ಸುಮಂ ಗಲಿಯರ ಆರತಿಗಳೊಂದಿಗೆ ಸಂಚರಿಸಿ ಪ್ರವಚನದ ವೇದಿಕೆಗೆ ಆಗಮಿಸುವದು. ಈ ಮೆರವಣಿಗೆಯಲ್ಲಿ ಭಜನಾ ಮೇಳ,  ವೀರಭದ್ರೇಶ್ವರ ಪುರವಂತರ ಗಗ್ಗರಿ  ಕೋಲು ಮೇಳ, ಕರಡಿ ಮಜಲು  ಮುಂತಾದ  ವಾಧ್ಯ ತಂಡಗಳು ಪಾಲ್ಗೊಳ್ಳಲಿವೆ.   

 ಸಂಜೆ 6.30 ಗಂಟೆಗೆ ಪ್ರವಚನ ಪ್ರಾರಂಭೋತ್ಸವ ಜರುಗುವದು. ಈ ಕಾರ್ಯಕ್ರಮದಲ್ಲಿ  ಅಡ್ನೂರ-ಗದಗ-ರಾಜೂರು ಬ್ರಹನ್ಮಠದ ಪೂಜ್ಯಶ್ರೀ  ಅಭಿನವ ಪಂಚಾಕ್ಷರ  ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸುವರು.  

 ಹಿರೇವಡ್ಡಟ್ಟಿಹಿಮಣಕವಾಡ  ದೇವಮಂದಿರ ಮಹಾಮಠದ  ಪೂಜ್ಯಶ್ರೀ  ಅಭಿನವ ಮೃತ್ಯುಂಜಯ  ಮಹಾಸ್ವಾಮಿಗಳು ಪ್ರವಚನ ಮಾಡುವರು.   

ಮುಖ್ಯ ಅತಿಥಿಗಳಾಗಿ  ಮಾಜಿ ಮುಖ್ಯಮಂತ್ರಿಗಳು  ಹಾಗೂ ಗದಗ-ಹಾವೇರಿ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ, ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ, ಗಣ್ಯ ಉದ್ಯಮಿ  ವಿಜಯಕುಮಾರ ಗಡ್ಡಿ, ಕುರಹಟ್ಟಿಯ  ಕೃಷಿ ಉಪಕರಣಗಳ ತಜ್ಞೆ ಡಿ.ಕೆ.ಲಕ್ಕಣ್ಣವರ ಸೇರಿದಂತೆ ಮುಂತಾದವರು ಆಗಮಿಸುವರು.  

  ಈ ಪ್ರವಚನ ಕಾರ್ಯಕ್ರಮದಲ್ಲಿ ಪ್ರತಿದಿನ  ಕಲಬುರಗಿಯ ಸಂಗಮೇಶ ಪಾಟೀಲ ಅವರಿಂದ  ಸಂಗೀತ ಸೇವೆ ಹಾಗೂ ತೋಟೇಂದ್ರಕುಮಾರ ಕಟ್ಟಿಸಂಗಾವಿ ಅವರು ತಬಲಾ ಸಾಥ್  ನೀಡುವರು.  

 ಇದೇ ಸಂದರ್ಭದಲ್ಲಿ  ಗದುಗಿನ ಶ್ರೀರಾಜರಾಜೇಶ್ವರಿ  ಕಲಾ ಕುಟೀರ ತಂಡದವರಿಂದ ನೃತ್ಯ ಕಾರ್ಯಕ್ರಮ ಹಾಗೂ  ಹರ್ತಿಯ   ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಲಿದೆ. 

  ಜ. 3 ರಿಂದ 13 ವರೆಗೆ  ಹರ್ತಿ, ಕಣವಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 7 ಗಂಟೆ ವರೆಗೆ ಪೂಜ್ಯಶ್ರೀಗಳ ಪಾದಯಾತ್ರೆ ಜರಗುವದು. ಈ ಪಾದಯಾತ್ರೆಯಲ್ಲಿ ತ್ರಿಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶರಣಬಸವೇಶ್ವರ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ ಎಂದು  ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ  ಹಾಗೂ ಹರ್ತಿ  ಗ್ರಾಮದ ಗುರು ಹಿರಿಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.