ಸಮಾನತೆಯ ಸಂದೇಶ ಸಾರಿದ ಕನಕದಾಸರು : ಆಶಾ ಐಹೊಳೆ

ಬೆಳಗಾವಿ: 02 :ಕನಕದಾಸರು ಭಕ್ತಿರಸದಿಂದ ಅವರು ರಚಿಸಿರುವ ಲೇಖನ, ಕಾವ್ಯ, ಕೀರ್ತನೆಗಳಿಂದ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ ಅವರು ಹೇಳಿದರು.

ಇಂದು  ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಆಯೋಜಿಸಿದ ಶ್ರೀ ಭಕ್ತ ಕನಕದಾಸರ ಜಯಂತಿ ಉತ್ಸವವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು. 

  ಕನಕದಾಸರು ಮಹಾನ ದಾರ್ಶನಿಕರು ಹಾಗೂ ಸಂತರಾಗಿದ್ದಾರೆ. ನಾವೆಲ್ಲರೂ ಕನಕದಾಸರ ವಿಚಾರಧಾರೆಗಳನ್ನು ಪಾಲನೆ ಮಾಡಬೇಕು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಕನಕದಾಸರು ತಮ್ಮ ಕೀರ್ತನೆಯ ಮೂಲಕ ಸಮಾಜ ಸುಧಾರಣೆ ಮಾಡಿ ಹೊದವರು. ಅವರು ಕೀರ್ತನೆಯು ಸಮಾಜಕ್ಕೆ ದಾರಿ ದೀಪವಾಗಿದೆ. ಅವರು ಹೇಳಿ ಕೊಟ್ಟ ದಾರಿಯಲ್ಲಿ ನಾವು ನಡೆಯೋಣ. ಸರ್ವಧರ್ಮ ಸಮ ಎಂಬ ಸಂದೇಶ ನೀಡಿದ ರೀತಿಯಲ್ಲಿ ಬಾಳೋಣವೆಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ನೂರು ವರ್ಷಗಳ ಕಾಲ ಬದುಕಿದ ಕನಕದಾಸರು ಸಾವಿರಾರು ವರ್ಷಕ್ಕೆ ಆಗುವಷ್ಟು ಸಂದೇಶವನ್ನು ನೀಡಿ ಹೋಗಿದ್ದಾರೆ. ಅವರು ನೀಡಿದ ಸಂದೇಶಗಳನ್ನು ಈ ವೇಳೆ ಅಷ್ಟೇ ಅಲ್ಲದೆ ಪ್ರತಿಧಿನವು ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದರಿಂದ ಶೌಚಾಲಯ ನಿಮರ್ಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ ಕುರೇರ ಅವರು ಮಾತನಾಡಿ, ಕನಕದಾಸರು ತಿಮ್ಮಪ್ಪ ನಾಯಕರಿಂದ ಕನಕದಾಸರ ಇತಿಹಾಸವನ್ನು ತಿಳಿದುಕೊಂಡಿದ್ದೆವೆ. ಶ್ರೇಷ್ಠ ದಾಸರನ್ನು ಗುರುತಿಸುವ ಕಾರ್ಯವಾಗಬೇಕು ಎಂದು ಸಾರ್ವಜನಿಕರು ಮತ್ತು ಪಾಲಕೆ ಸದಸ್ಯರು ಬೇಡಿಕೆಗಳು ಇಟ್ಟಿದ್ದರು. ಇದರ ಹಿನ್ನಲೆಯಲ್ಲಿ ಕನಕ ವೃತ್ತವನ್ನು ಅಭಿವೃದ್ಧಿ ಪಡಿಸಿ ಪುತ್ಥಳಿ ಅನಾವರ್ಣಗೊಳಿಸಲು ಮಹಾನಗರ ಪಾಲಿಕೆ ಪರಿಷತ್ನಲ್ಲಿ ಒಪ್ಪಿಸಲಾಗಿದ್ದು, 20 ಲಕ್ಷ  ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು. ಕನಕದಾಸರ ಪರಿಕಲ್ಪನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗಳಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಬಸಪ್ಪಾ ಚಿಕ್ಕಲದಿನ್ನಿ, ಉಪಮಹಾಪೌರ ಶ್ರೀಮತಿ.ಮಧುಶ್ರೀ ಪೂಜಾರಿ, ಮಾಜಿ ಮಹಾಪೌರ ಯಲ್ಲಪ್ಪಾ ಕುರುಬರ, ಪಾಲಿಕೆ ನಗರ ಸೇವಕರು, ಡಿಸಿಪಿ ಮಹಾನಿಂಗ ನಂದಗಾವಿ,  ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಶಿಲ್ದಾರ ಮಂಜುಳಾ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ಅವರು ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕರಾದ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು.