ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ: ಆನಂದ ಸಿ ನ್ಯಾಮಗೌಡ
ಬಾಗಲಕೋಟೆ 31: ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಸಮಾಜಮುಖಿ ಕೆಲಸ ಮಾಡಬೇಕು ಮತ್ತು ಅವುಗಳು ಯಾವತ್ತೂ ಓದುಗರ ಮತ್ತು ವೀಕ್ಷಕರ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಬಿ ಕೆ ರವಿ ಅವರು ತಿಳಿಸಿದರು. ಅವರು ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಕೇಂದ್ರ ಸ್ಥಾನದಲ್ಲಿ ಏರಿ್ಡಸಿದ್ದ ಮಾಧ್ಯಮಗಳು ಮತ್ತು ಸಮಾಜ ಎಂಬ ಕಾರ್ಯಗಾರದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಮಾಧ್ಯಮಗಳು ಓದುಗರಿಗೆ ವೀಕ್ಷಕರಿಗೆ ಶಿಕ್ಷಣ ನೀಡುವುದು ಮನರಂಜನೆ ನೀಡುವುದು ಸುದ್ದಿ ನೀಡುವುದು ಮುಂತಾದ ಕಾರ್ಯಗಳನ್ನು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಆನಂದ ಸಿ ನ್ಯಾಮಗೌಡ ಅವರು ಮಾತನಾಡುತ್ತಾ ಇಂದಿನ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಭಿಪ್ರಾಯ ಪಟ್ಟರು. ದಿವ್ಯ ಸಾನಿಧ್ಯವನ್ನು ವಹಿಸಿದ್ದ ಓಲೆಮಠದ ಆನಂದದೇವರು ಅವರು ಮಾತನಾಡುತ್ತಾ ಒಬ್ಬ ವ್ಯಕ್ತಿಯನ್ನು ಹೀರೋ ಮಾಡುವುದು ಮತ್ತು ಜೀರೋ ಮಾಡುವುದು ಮಾಧ್ಯಮಗಳಿಂದಲೇ ಸಾಧ್ಯ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ ಆನಂದ ಎಸ್ ದೇಶಪಾಂಡೆಯವರು ಮಾತನಾಡುತ್ತಾ ಇಂದು ನಡೆಯುತ್ತಿರುವ ಮಾಧ್ಯಮ ಮತ್ತು ಸಮಾಜ ಕುರಿತ ಕಾರ್ಯಾಗಾರವು ಪತ್ರಕರ್ತರಿಗಾಗಿ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಏರಿ್ಡಸಿದ್ದು ಮುಂದಿನ ದಿನಗಳಲ್ಲಿ ವಿವಿಧ ವಿಷಯಗಳ ಬಗ್ಗೆ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕುಲ ಸಚಿವರಾದ ಪ್ರೊ ದಯಾನಂದ ಸಾಹುಕಾರ ಅವರು ಸ್ವಾಗತಿಸಿದರು ಕಾರ್ಯಕ್ರಮದ ಸಹ ಸಂಚಾಲಕರಾದ ಡಾ ಆರ್ ನಾಗರಾಜ್ ರವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಗಾರದ ಸಂಚಾಲಕರಾದ ಪ್ರೊ ಮಲ್ಲಿಕಾರ್ಜುನ ಮರಡಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕರು ಭಾಗವಹಿಸಿದ್ದರು.