ನಾಳೆಯಿಂದ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ

Recitation of Grantharaja Jnaneshwari from tomorrow

ನಾಳೆಯಿಂದ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ  

ಸಂಬರಗಿ 18: ಗ್ರಾಮದ ವಿಠ್ಠಲ ರುಕ್ಮೀಣಿ ಮಂದಿರದ ಆವರಣದಲ್ಲಿ ಗ್ರಂಥರಾಜ ಜ್ಞಾನೇಶ್ವರಿ ಸಾಮೂದಾಯಿಕ ಪಾರಾಯಣ ಸೋಹಳಾ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ 20ಮೇ ದಿಂದ 26ನೇ ಮೇ ವರೆಗೆ ನಡೆಯಲಾಗಿದೆ. 

ದಿನನಿತ್ಯ ವಿಷೇಶ ಪೂಜೆ, ಜ್ಞಾನೇಶ್ವರಿ ವಾಚನ ಸಾಯಂಕಾಲ ಗಾಥಾ ಹಾಗೂ ಭಜನ, ಕೀರ್ತನ, ಮಹಾಪ್ರಸಾಧ ಕಾರ್ಯಕ್ರಮ ಏರಿ​‍್ಡಸಲಾಗಿದೆ.  20ನೇ ಮೇ ಮಂಗಳವಾರ ಹ.ಭ.ಪ. ಸಂತೋಷ ಭೋಸಲೆ ಸಂತೊಷವಾಡಿ ಇವರಿಂದ ಪ್ರವಚನ, ಸಾಯಂಕಾಲ ಹ.ಭ.ಪ ಅನಿಕೇತನ ಸುರೇಶ ಡುಬಲೆ ದೇಸಿಂಗ್ ಇವರಿಂದ ಕೀರ್ತನೆ, 21ನೇ ಮೇ ಬುಧವಾರ ಹ.ಭ.ಪ ಓಂ ಜಮಾಧಾರ ಕೃಷ್ಣಘಾಟ ಇವರಿಂದ ಕೀರ್ತನೆ, ಹ.ಭ.ಪ ಹನಮಂತ ಮಹಾರಾಜ ಯಕೂಂಡಿ ಇವರಿಂದ ಕಿರ್ತನೆ, 22ನೇ ಮೇ ಗುರುವಾರ ಹ.ಭ.ಪ ಏಟಿ ಮಾಳಿ ಶಿವನೂರ ಇವರಿಂದ ಪ್ರವಚನ, ಹ.ಭ.ಪ ಅಪ್ಪಾಸಾಬ ಪಾಟೀಲ ಶಿರೂರ ಇವರಿಂದ ಕೀರ್ತನೆ, 23ನೇ ಮೇ ಶುಕ್ರವಾರ ಏಕಾದಶಿ ಹ.ಭ.ಪ ಸಿದ್ದಾರ್ಥ ಮುಂಗಳೆ ಇವರಿಂದ ಪ್ರವಚ, ಹ.ಭ.ಪ ಕೃಷ್ಣಮೂರ್ತಿ ಬೊಂಗಾಳೆ ಇವರಿಂದ ಕೀರ್ತನೆ, 24ನೇ ಮೇ ಶನಿವಾರ ಹ.ಭ.ಪ ಧನಾಜಿ ಬಾಪು ಘಾಟಗೆ ಚಿಂಚವಾಡ ಇವರಿಂದ ಪ್ರವಚನ, ಹ.ಭ.ಪ ಕೃಷ್ಣ ಮಹಾರಾಜ ಪಂಡರಪೂರ ಇವರಿಂದ ಕೀರ್ತನೆ, 25ನೇ ಮೇ ರವಿವಾರ ಹ.ಭ.ಪ ಪ್ರಕಾಶ ಪಾಟೀಲ ಸಲಗರೆ ಇವರಿಂದ ಪ್ರವಚನ, ಶ್ರೀ ಗುರವರ್ಯ ಹ.ಭ.ಪ ಋಷಿಕೇಶ ವಾಸ್ಕರ ಮಹಾರಾಜ ಪಂಡರಪೂರ ಇವರಿಂದ ಕೀರ್ತನೆ 26ನೇ ಮೇ ಸೋಮವಾರ ಬೆಳ್ಳಿಗ್ಗೆ ಹ.ಭ.ಪ ಸೋಪಾನ ಬಂಡಗರ ಮಹಾರಾಜ ಇವರಿಂದ ಕೀರ್ತನೆ. 

ಕಾರ್ಯಕ್ರಮಕ್ಕೆ ಸಂತ ಸದ್ಭಕ್ತರಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಸದರಿ ಕಾರ್ಯಕ್ರಮಕ್ಕೆ ಸುತ್ತಲಿನ ಎಲ್ಲಾ ಸದ್ಭಕ್ತರು ಗ್ರಾಮಸ್ಥರು ಹಾಜರಿರಬೇಕೆಂದು ಕಾರ್ಯಕ್ರಮದ ಸಂಯೋಜಕರಿಂದ ವಿನಂತಿಸಲಾಗಿದೆ.