ಧಾರ್ಮಿಕ ಪೂಜೆ ಮತ್ತು ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ

Religious worship and book distribution to school children

ಧಾರ್ಮಿಕ ಪೂಜೆ ಮತ್ತು ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ

ಶಿಗ್ಗಾವಿ  06 : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ದಿ ಎಸ್ ಆರ್ ಬೊಮ್ಮಾಯಿ 100 ನೇಯ ಜನ್ಮದಿನದ ಅಂಗವಾಗಿ ಸವಣೂರ ತಾಲೂಕಿನ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಪೂಜೆ ಮತ್ತು ಅಭಿಷೇಕ ಅಲ್ಲದೇ ಜನ್ಮದಿನದ ಸವಿನೆನಪಿಗಾಗಿ ಕಾರಡಗಿ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿರವರು ವಿತರಿಸಿದರು.  ಈ ಸಂಧರ್ಭದಲ್ಲಿ ಪತ್ನಿ ಚೆನ್ನಮ್ಮ ಬೊಮ್ಮಾಯಿ, ಪುತ್ರ ಭರತ ಬೊಮ್ಮಾಯಿ ಸೇರಿದಂತೆ ಶಿಗ್ಗಾಂವ ಸವಣೂರು ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.