ಸಂಶೋಧನೆ ಕಾಯರ್ಾಗಾರಗಳು ನಿರಂತರ ನಡೆಯಬೇಕು : ಡಾ. ದೊಡ್ಡಣ್ಣವರ

ಲೋಕದರ್ಶನ ವರದಿ

ಬೆಳಗಾವಿ.ಜ.22: ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರ ನಡೆಯುತ್ತಿರುತ್ತವೆ. ಆದರೆ ಈ ಬಗ್ಗೆ ಕಾಯರ್ಾಗಾರಗಳು ನಡೆಯುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ  ಕಾಯರ್ಾಗಾರಗಳನ್ನು ನಿರಂತರವಾಗಿ ನಡೆಸಬೇಕು. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಹೆಚ್ಚಿನ ಜ್ಞಾನಾರ್ಜನೆ ಮಾಡಿದಂತಾಗುತ್ತದೆ ಡೆಕ್ಕನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯ ವ್ಯವಸ್ಥಾಪಕ ನಿದರ್ೇಶಕ ಡಾ.ರಮೇಶ ದೊಡ್ಡಣ್ಣವರ ಅವರು ಅಭಿಪ್ರಾಯಪಟ್ಟರು. 

ಬೆಳಗಾವಿ  ಹಲಗಾ ಗ್ರಾಮದಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ ಪಿ.ಡಿ.ಭರತೇಶ ನಸರ್ಿಂಗ ಮಹಾವಿದ್ಯಾಲಯದಲ್ಲಿ ಕಮ್ಯುನಿಟಿ ಹೆಲ್ತ ನಸರ್ಿಂಗ ವಿಭಾಗದ ವತಿಯಿಂದ  ಇಂದಿನಿಂದ ಹಮ್ಮಿಕೊಳ್ಳಲಾದ "ರಿಸರ್ಚ ಮೆಥಡಾಲಜಿ ಆಂಡ ಬಯೋಸ್ಟಾಟಿಸ್ಟಿಕ್ಸ ಎಂಬ ವಿಷಾಯಾಧಾರಿತ ಎರಡು ದಿನಗಳ  ಕಾಯರ್ಾಗಾರದ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. 

ದಾದಿಯರ ವೃತಿಯ ಜೀವನದಲ್ಲಿ ಇಂತಹ ಕಾಯರ್ಾಗಾರಗಳು ಅತೀ ಮಹತ್ವದಾಗಿರುತ್ತವೆ. ಇದರಿಂದ ಹೊಸ ಅವಿಷ್ಕಾರ ಮತ್ತು ಸಂಶೋಧನೆಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆಯಬಹುದಾಗಿದೆ.ಹಾಗಾಗಿ ದಾದಿಯರು ಪ್ರತಿಯೊಂದು ಕಾಯರ್ಾಗಾರದಲ್ಲಿ ಭಾಗವಹಿಸಿ ಹೆಚ್ಚಿನ ತಿಳುವಳಿಕೆ ಪಡೆದುಕೊಂಡು ತಮ್ಮ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ  ವೇಣುಗ್ರಾಮ ಆಸ್ಪತ್ರೆಯ ಕಾರ್ಯದಶರ್ಿ ಹಾಗೂ  ಖ್ಯಾತ ವೈದ್ಯ ಡಾ.ಅಭಿನಂದನ ಹಂಜಿ ಅವರು, ಕಾಯರ್ಾಗಾರದ ಮೂಲಕ ವೃತ್ತಪರ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಇದರ  ಜೊತೆಗೆ ವೃತ್ತಿ ಬದ್ದತೆ ಮತ್ತು ಜವಾಬ್ದಾರಿಗಳನ್ನು ಸಹ ಕಲಿಯಬಹುದು. ಆರೋಗ್ಯ ಕಾಳಜಿಯ ಬಗ್ಗೆಯೂ ತಿಳುವಳಿಕೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು. 

ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಐದಶರ್ಿ ರಾಜೀವ ದೊಡ್ಡಣ್ಣವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂಗೀತಾ ಮೋರೇಶ್ವರ ಅತಿಥಿಗಳನ್ನು ಸ್ವಾಗತಿಸಿದರು. ಪ್ರೋ.ಪದ್ಮಾವತಿ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಕಾಯರ್ಾಗಾರದ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮಾಜಿ ಮೇಯರ ವಿಜಯ ಮೋರೆ ಉಪಸ್ಥಿತರಿದ್ದರು. ಪ್ರೊ.ಮಹೇಶ ರೆಬಿನಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.