ತರಬೇತಿ, ಹಣ ಉತ್ತಮ ರೀತಿಯಲ್ಲಿ ಬಳಸಿ, ಯಶಸ್ವಿ ಉದ್ಯಮಿಯಾಗಿ

ಬೆಳಗಾವಿ 26: ದೇಶದ ಪ್ರಗತಿಯಲ್ಲಿ ಸರಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ಸ್ವ-ಉದ್ಯೋಗ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಒಬ್ಬ ವ್ಯಕ್ತಿ ಬಂಡವಾಳವನ್ನು ಹೂಡಿಕೆ ಮಾಡಲು ಸಾಮಥ್ರ್ಯವಿಲ್ಲದಿರುವ ಅರ್ಹ ವ್ಯಕ್ತಿ ತನ್ನ ಯೋಜನೆಯಿಂದ ಹಿಂದೆ ಸರಿಯಬಾರದೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆ  ರೂಪಿಸಲಾಗಿದೆ ಎಂದರು. ಯೋಜನೆಯಲ್ಲಿ ಪಡೆದ ಹಣವನ್ನು ಉತ್ತಮ ರೀತಿಯಲ್ಲಿ ಬಳಸಿ, ಯಶಸ್ವಿ ಉದ್ಯಮಿಯಾಗಿ ಎಂದು ಕೆವಿಆಯ್ಸಿ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಉಪನಿದರ್ೇಶಕ ಎಸ್. ಎಲ್. ಮಾಸೂರ ಹಾರೈಸಿದರು.

ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. 

ಕೆವಿಆಯ್ಸಿ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಸಹಾಯಕ ನಿದರ್ೇಶಕ ಎಫ್.ಎಸ್. ಹೊಂಗಲ್                ಮಾತನಾಡಿ ಸಾಲ ಪಡೆದ ನಂತರ ಸರಿಯಾದ ಸಮಯದಲ್ಲಿ ಕಂತುಗಳನ್ನು ಬ್ಯಾಂಕಿಗೆ ತುಂಬಬೇಕು. ಇಲ್ಲವಾದಲ್ಲಿ ನಿಮ್ಮ ಸಿಬಿಲ್ ರಿಪೋರ್ಟ ಸರಿಯಾಗಿ ಬರುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಾಲವನ್ನು ಪಡೆಯಲು ತೊಂದರೆಯಾಗುತ್ತದೆ. ಆದ್ದರಿಂದ ಸಾಲವನ್ನು ಸರಿಯಾದ ಸಮಯದಲ್ಲಿ ತುಂಬಿ ಬ್ಯಾಂಕಿನ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರಿ ಎಂದು ತಿಳಿಸಿದರು.

                   ಸಂಸ್ಥೆಯ ನಿದರ್ೇಶಕರಾದ ಲಕ್ಷ್ಮೀಕಾಂತ ಪಾಟೀಲ ಅವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೋಗ ನಿವಾರಣೆಗೆ ಸ್ವ-ಉದ್ಯೋಗವೆ ಮದ್ದು. ಅದಕ್ಕಾಗಿ ಸಕರ್ಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಭ್ಯ ಒದಗಿಸುತ್ತಿದೆ. ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೂಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮ ಜೀವನ ನಡೆಸಿರಿ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವೂ ಇನ್ನೊಬ್ಬರಿಗೆ ಉದ್ಯೋಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು. ಇವತ್ತಿನ ದಿನ ಆಥರ್ಿಕ ಕ್ಷೇತ್ರದಲ್ಲಿ ಸ್ವ-ಉದ್ಯೋಗ ವಲಯದ ಕೂಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ. ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ಧಿಗೆ ಕೈ-ಜೋಡಿಸಿರಿ  ಎಂದು ತಿಳಿಹೇಳಿ,  ಶಿಬಿರಾಥರ್ಿಗಳಿಗೆ ಹಾರೈಸಿದರು.

 ಶಿಬಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಮುಖ್ಯ ಅತಿಥಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಸಿಬ್ಬಂದಿ ರಾಜೇಶ್ವರಿ ದೇವಲಾಪೂರ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ ಮತ್ತು ಅಬ್ಬುಲ ರಜಾಕ್ ಉಪಸ್ಥಿತರಿದ್ದರು.