ವಿ.ಲಕ್ಷ್ಮೀ ಅವರಿಗೆ ಪಿಎಚ್ಡಿ ಪದವಿ
ಬಳ್ಳಾರಿ 17:ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾ ಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ವಿ.ಲಕ್ಷ್ಮೀ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ವಿವಿಯ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಸಿ. ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ “ಕಾಂಪಿಟೆನ್ಸಿ ಮ್ಯಾಪಿಂಗ್ ಆಪ್ ಹೈಯರ್ ಎಜುಕೇಶನ್ ಟೀಚರ್ಸ- ಎ ಸ್ಟಡಿ ಆಫ್ ಟೀಚರ್ಸ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಂಡರ್ ದಿ ಜುರಿಸಿಡಿಕ್ಷನ್ ಆಫ್ ವಿಜಯನಗರ ಕೃಷ್ಣದೇವರಾಯ ಯೂನಿವರ್ಸಿಟಿ ಬಳ್ಳಾರಿ” ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.