ಮೃತ ವ್ಯಕ್ತಿಯ ಕುಟುಂಬಕ್ಕೆ ರೂ.10 ಲಕ್ಷ ಮೊತ್ತದ ಚೆಕ್ ವಿತರಣೆ

A cheque of Rs. 10 lakhs was distributed to the family of the deceased

ಹಾವೇರಿ 13 : ಬ್ಯಾಂಕ್ ಆಫ್ ಬರೋಡಾದಲ್ಲಿ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಖಾತೆ ಹೊಂದಿದ ಅಶೋಕ ಕಟ್ಟಿ ಅವರು ಕರ್ತವ್ಯದ ಸಮಯದಲ್ಲಿ ಮರಣಹೊಂದಿದ ಹಿನ್ನಲೆಯಲ್ಲಿ ಮೃತ ಅಶೋಕ ಕಟ್ಟಿ ಅವರ ಪತ್ನಿ ಶ್ರೀಮತಿ ಜ್ಯೋತಿ ಅಶೋಕ ಕಟ್ಟಿ ಅವರಿಗೆ  ಬ್ಯಾಂಕ್ ಆಫ್ ಬರೋಡಾದ ಕ್ಷೇತ್ರೀಯ ಪ್ರಬಂಧಕ  ಪಂಕಜಕುಮಾರ ಸುಮನ್ ಅವರು ರೂ. 10 ಲಕ್ಷದ ಮೊತ್ತದ ಚೆಕ್ ವಿತರಣೆ ಮಾಡಿದರು.. 

ಗಂಗಿಭಾವಿಯಲ್ಲಿ ಗುರುವಾರ ಚೆಕ್ ವಿತರಣೆ ಸಂದರ್ಭದಲ್ಲಿ ಕರ್ನಾಟಕ ಮೀಸಲು ಪಡೆಯ ಮುಖ್ಯಸ್ಥ ಎನ್‌.ಜೆ.ಮಿತ್ತಲ್ ಅವರು  ಮಾತನಾಡಿ,  ಎಲ್ಲ ಪೊಲೀಸರು  ಬ್ಯಾಂಕಿನ ವೇತನ ಖಾತೆ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಬ್ಯಾಂಕ್ ಆಫ್ ಬರೋಡಾದ ಡಿಫೆನ್ಸ್‌ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥ ತರುಣ್ ಸಿನ್ಹಾ ಹಾಗೂ ಹಾವೇರಿ ಶಾಖೆಯ ಮುಖ್ಯಸ್ಥರಾದ ದೀಪಕ ಉಪಸ್ಥಿತರಿದ್ದರು.