ವಿಜಯನಗರ 18: ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ಇಂದು ಸ್ಥಳಿಯ ಶಾಸಕರಾದ ಹೆಚ್.ಆರ್.ಗವಿಯಪ್ಪ ರವರ ನಿವಾಸಕ್ಕೆ ಆಗಮಿಸಿ ನೂತನ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ದೇವರಾಜ್ಅರಸ್ ಭವನ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕರ ಮೂಲಕ ಛಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಯಾಗಿದ್ದ (1972 ರಿಂದ 1980ರವರೆಗೆ) ಡಿ.ದೇವರಾಜ ಅರಸು ರವರು ಕ್ರಾಂತಿಕಾರಿ ಭೂ ಸುಧಾರಣಾ ಯೋಜನೆ, ಹಿಂದುಳಿದ ಜಾತಿಗಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ, ಹಿಂದಿನ ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣ ಎಂದು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೇವರಾಜ್ ಅರಸ್ ಭವನ ನಿರ್ಮಿಸಲಾಗಿದ್ದು, ಅದರಂತೆ ಹೊಸಪೇಟೆಯಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದೇವರಾಜ ಅರಸು ಭವನ ನಿರ್ಮಾಣದ ಉದ್ದೇಶಸೌಲಭ್ಯ ವಂಚಿತ ಹಿಂದುಳಿದ ಸಮುದಾಯಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲು ಅರಸು ಭವನದಲ್ಲಿ ತರಬೇತಿ ಶಿಬಿರಗಳು, ವಿಚಾರ ಸಂಕೀರ್ಣ ಏರಿ್ಡಸಲು ಅನುಕೂಲವಾಗುತ್ತದೆ.
ಓ.ಬಿ.ಸಿ. ಸಮುದಾಯಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಉದ್ಯೋಗ ಸೇರೆ್ಡಗೆ ಕಾರ್ಯಗಾರ ಸಂಘಟಿಸಲು ಅವರಿಗೆ ಮಾರ್ಗದರ್ಶನ ಮಾಡಲು ಅರಸು ಭವನ ಅತ್ಯಂತ ಅವಶ್ಯಕವಾಗಿದೆ.
ಹಿಂದುಳಿದ ಜಾತಿಗಳು ತಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಯ ಬಗ್ಗೆ ಚರ್ಚಿಸಲು ಸಭೆ ಸಮಾರಂಭ ನಡೆಸಲು ಅರಸು ಭವನ ಅಗತ್ಯವಾಗಿದೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಆಂಜನೇಯಲು ಮಾತನಾಡಿ ಭವನ ನಿರ್ಮಾಣದಿಂದ ಹಿಂದುಳಿದ ವರ್ಗಗಳ ಸಚಿವಾಲಯದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಛೇರಿಗಳು ಒಂದೇ ಕಡೆಗೆ ಸ್ಥಾಪನೆ ಆಗುವುದರಿಂದ ಈ ಸಮುದಾಯಗಳ ನಾಗರೀಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ ಹಿಂದುಳಿದ ಜಾತಿಗಳು ರಿಯಾಯಿತಿ ಧರದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಭವನ ನಿರ್ಮಾಣ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗೋಪಾಲ್ರಾವ್, ರವಿಶಂಕರ್ದೇವರಮನಿ, ಪಂಪಣ್ಣ, ವಿರುಪಾಕ್ಷಿ.ಬಿ., ಐಲಿ ಸಿದ್ದಣ್ಣ, ಶಾಂತಪ್ಪ, ಎಂ.ರಾಜಶೇಖರ್, ಗೌಡಪ್ಪನವರ್, ಶ್ರೀನಿವಾಸ್, ನಾಗೇಂದ್ರ್ಪ, ತಿಪ್ಪೇಸ್ವಾಮಿ, ವೀರೇಶ್ ಜಿನಗಾರ್, ಬಸವರಾಜ, ರಾಮಲಿ, ಶಂಕ್ರ್ಪ, ಶಿವಕುಮಾರ್, ಉಮಾಮಹೇಶ್ವರ್, ರಾಜಕುಮಾರ್, ಮುಂತಾದವರು ಉಪಸ್ಥಿತರಿದ್ದರು.