ವನ್ಯಜೀವಿಗಳು ಇಲ್ಲದಿದ್ದರೆ ಮನುಕುಲದ ಬಾಳು ಗೋಳು: ಕೊಟ್ಟೂರ್

Without wildlife, Mankind would be doomed: Kottur

ಮುದ್ದೇಬಿಹಾಳ 18:  ವನ್ಯಜೀವಿಗಳು ಇದ್ದರೆ ಮನುಕುಲದ ಬಾಳು ಇಲ್ಲದಿದ್ದರೆ ಮನುಕುಲದ ಗೋಳು ಎಂಬುದನ್ನು ನಾವೇಲ್ಲ ಅರ್ಥೈಸಿಕೊಳ್ಳಬೇಕು ಜತೆಗೆ ವನ್ಯ ಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದು  ಉಪನ್ಯಾಸಕ ಡಾಕ್ಟರ್ ಅಬ್ದುಲ್ ಸಮದ್ ಕೊಟ್ಟೂರ್ ಹೇಳಿದರು.   

ತಾಲೂಕಿನ ಬಿದರಕುಂದಿಯಲ್ಲಿ  ಪ್ರಾದೇಶಿಕ ಅರಣ್ಯ ವಿಭಾಗ ವಿಜಯಪುರ , ಪ್ರಾದೇಶಿಕ ಅರಣ್ಯ ವಲಯ ಮುದ್ದೇಬಿಹಾಳ, ಮತ್ತು ಸರ್ಕಾರಿ ಆದರ್ಶ ವಿದ್ಯಾಲಯದ ಬಿದರಕುಂದಿ ಅವರ ಸಂಯುಕ್ತ ಆಶಯದಲ್ಲಿ ನಡೆದ ವಿಶ್ವ ಮೊಸಳೆ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 17 ನೇ ಜೂನ್ 1975 ರಲ್ಲಿ ವಿಶ್ವಸಂಸ್ಥೆ, ವಿಶ್ವ ಮೊಸಳೆ ದಿನ ಎಂದು ಘೋಷಣೆ ಮಾಡಿತು, ಅಂದಿನಿಂದ ಈ ದಿನಚರಣೆಯನ್ನು ಪ್ರಪಂಚದಲ್ಲೆಡೆ ಆಚರಿಸಲಾಗುವುದು,  ವನ್ಯ ಜೀವಿಗಳು ಮನುಷ್ಯನಿಗೆ ಅತಿ ಉಪಾಯಕಾರಿ ಯಾಗಿವೆ, ಮೊಸಳೆ ಜೀವಿತಕಾಲ ಅವಳ ಪ್ರಭೇದ, ವಿಧಗಳು, ವಿವಿಧ ರಾಜ್ಯಗಳು ಮತ್ತು ದೇಶಗಳಲ್ಲಿ ಬೇರೆ ಬೇರೆ ಪ್ರಭೇದದ ಮೊಸಳೆಗಳು ಇವೆ, ಅವುಗಳು ಎಂತಹ ಪ್ರದೇಶಗಳಲ್ಲಿ ಜೀವಿಸುತ್ತವೆ ಎನ್ನುವುದರ ಬಗ್ಗೆ ಸಾಕಷ್ಟು ವಿಚಾರಗಳನ್ನ ಪ್ರೊಜೆಕ್ಟರ್ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ ತೋರಿಸಿದರು, ಈವಿಷಯದ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ದ್ವಿತೀಯ ತೃತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.  

 ಶಿವಶರಣಯ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ವಿಭಾಗ ವಿಜಯಪುರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿರುವ  ತಂಗಡಗಿ ಗ್ರಾಮದ ಸ್ನೇಕ್ ಭಾಷಾ ಚಪ್ಪರಬಂದ್, ನಾಗೇಶ್ ವಡ್ಡರ್, ಯಮನಪ್ಪ ಗೊಲ್ಲರ, ಎಸ್ ವೈ ಯರಝರಿ, ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಮೊಸಳೆ , ವಿಷ ಜಂತು ಹಾವುಗಳು , ಯಾವುದೇ ರೀತಿ ಜನರಿಗೆ ಹಾನಿಯಾಗದಂತೆ ಮತ್ತು ಜಲಚರಗಳನ್ನು ಸಂರಕ್ಷಣೆ ಮಾಡಿ ಸುರಕ್ಷಿತವಾಗಿ ನದಿಗಳಿಗೆ ಕಾಡುಗಳಿಗೆ ಬಿಟ್ಟು ಸಂರಕ್ಷಿಸಿದ್ದಕ್ಕಾಗಿ ಅವರನ್ನು 10 ಲಕ್ಷದ ವಿಮಾ ನೊಂದಣಿ ಬಾಂಡನ್ನು ನೀಡಿ  ಸನ್ಮಾನಿಸಲಾಯಿತು,  

ಉದ್ಘಾಟಕರಾಗಿ ಡಾಕ್ಟರ್ ಎಸ್ ಎಲ್ ಪಾಟೀಲ್ ಪ್ರಾಂಶುಪಾಲರು ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಹಡಲಗೇರಿ ಅರಣ್ಯಗಳನ್ನು ಸಂರಕ್ಷಿಸುವದರಿಂದ ಶುದ್ಧ ಗಾಳಿ ಸಿಗುವುದು ಮನಕುಲಕ್ಕೆ ಬೆಲೆ ಕಟ್ಟಲಾಗದಷ್ಟು ಬದುಕಲು ಅವಕಾಶ ಮಾಡಿಕೊಡುತ್ತದೆ , ಭಾಗ್ಯವಂತ ಎನ್ ಮಸೂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ಉಪ ವಿಭಾಗ ವಿಜಯಪುರ, ಅರಣ್ಯ ಮನಕುಲಕ್ಕೆ ಉಪಕಾರಿಯಾಗಿದೆ ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ, ಪ್ರತಿ ತಮ್ಮ ಜನ್ಮದಿನಾಚರಣೆ ರಂದು ಚಾಕ್ಲೇಟ್ ಸಿಹಿ ವಿತರಿಸುವ ಬದಲು ಒಂದು ಗಿಡ ನೆಡುವುದರಿಂದ ಒಳ್ಳೆಯ ಆಮ್ಲಜನಕವನ್ನು ಮತ್ತು ಗ್ಗ್ಲೋಬಲ್ ವಾಮಿಂರ್ಗ್ ನ್ನ ತಡೆಯಲಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಗಿಡಮರಗಳನ್ನು ಬೆಳೆಸಿಸಿದರೆ ಮನುಷ್ಯ ಸದಾ ಆರೋಗ್ಯವಂತನಾಗಿರಲು ಸಾಧ್ಯ ಎಂದರು. 

 ವಲಯ ಅರಣ್ಯ ಅಧಿಕಾರಿಗಳು ಬಸನಗೌಡ ಬಿರಾದಾರ, ಇಚಿಡಿ ವಲಯ ಅರಣ್ಯಾಧಿಕಾರಿ  ಎಸ್ ವೈ. ಸಂಗಲ್ಕರ್, ಆದರ್ಶ ವಿದ್ಯಾಯಲದ ಮುಖ್ಯ ಶಿಕ್ಷಕ ಅನಿಲ್ ಕುಮಾರ್ ರಾಥೋಡ, ಪ್ರೇರಣಾ. ಎಂಎಂಬೆಳಗಲ್ , ಮಧುಶ್ರೀ ನಾಗರಬೆಟ್ಟ , ಇಂಚರ ಸಿದ್ದರಡ್ಡಿ, ಅಮೃತ ಕರೆಕಲ್ ಪ್ರಾರ್ಥಸಿದರು, ರಾಜೇಂದ್ರ ಹೊನ್ನೂರ್ ಸ್ವಾಗತಿಸಿದರು,  ದೈಹಿಕ ಶಿಕ್ಷಕ  ಎ.ಸಿ.ಕೆರೂರ, ಎನ್ .ಎಸ್ ಬಿರಾದಾರ್ ನಿರೂಪಿಸಿದರು.