ಸಿಂದಗಿ 11: ಸಿಂದಗಿ ಮತಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ನಿರ್ಮಿಸಿದ ಕಾಲುವೆಗಳು ಇಂದು ದುರಸ್ಥಿ ಹಂತಕ್ಕೆ ಬಂದಿದ್ದು ಅವುಗಳನ್ನು ದುರಸ್ಥಿಕಾರ್ಯ ಕೈಕೊಂಡು ಮರು ನಿರ್ಮಾಣ ಮಾಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ ಪ್ರಯುಕ್ತ ಕಾಲುವೆಗಳ ವಿಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಠಕದೊಂಡ ಹಾಗೂ ನಾನು ಸೇರಿದಂತೆ ಮೂವರು 30 ವರ್ಷಗಳ ಹಿಂದೆ ನಿರ್ಮಾಣವಾದ ಕಾಲುವೆಗಳ ದುರಸ್ಥಿ ಕಾರ್ಯ ಕೈಕೊಳ್ಳ ಬೇಕು ಎಂದು ಕಳೆದ 5-6 ತಿಂಗಳ ಹಿಂದೆ ಸರಕಾರದಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಇದರ ಪ್ರಯುಕ್ತ ಕೆಬಿಜೆಎನ್ಎಲ್ ವ್ಯವಸ್ತಾಪಕ ನಿರ್ದೇಶಕ ಮೋಹನ್ರಾಜ್ ಕೆ.ಪಿ. ಅವರು ಸರಕಾರದ ನಿರ್ದೇಶನದ ಮೇರೆಗೆ ಮೂರು ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ, ಹಿಂದೆ ನಿರ್ಮಾಣ ಮಾಡಿರುವ ಕಾಲವೆಗಳ ಸ್ಥಿತಿಗತಿ ಅವಲೋಕನ ಮಾಡಲು ನಾರಾಯಣಪೂರದಿಂದ ಪ್ರಾರಂಭಮಾಡಿ ಸಿಂದಗಿ ಮತಕ್ಷೇತ್ರದಲ್ಲಿ ಬರುವ 64ನೇ ಕಿ.ಮೀ. ದಿಂದ 91ನೇ ಕಿ.ಮೀ. ವರೆಗೆ ಐಬಿಸಿ ಕಾಲುವೆಗಳನ್ನು ವಿಕ್ಷಣೆ ಮಾಡಲು ಆಗಮಿಸಿದ್ದಾರೆ ಎಂದು ಹೇಳಿದರು.
ಸಿಂದಗಿ ಮತಕ್ಷೇತ್ರದಲ್ಲಿ ಯುಕೆಪಿಯ ನೆನೆಗುದಿಗೆ ಬಿದ್ದ ಕಾಮಗಾರಿಗಳು, ದುರಸ್ಥಿಯ ಕಾಮಗಾರಿಗಳು ಶಿಘ್ರದಲ್ಲಿ ಕೈಗೆತ್ತುಕೊಳ್ಳ ಬೇಕು. ನಮ್ಮ ಮನವಿಗೆ ಸರಕಾರ ಹಾಗೂ ಇಲಾಖೆ ಸ್ಪಂದಿಸಿದ್ದು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ. ಕಾಲುವೆಗೆ ಹರಿಯುವ ನೀರು ರೈತರ ಜಮೀನುಗಳಿಗೆ ತಲಪತ್ತವೆ. ರೈತರಿಗೆ ಅನಕೂಲಕರ ಮಾಡಿಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡರು.
ಮತಕ್ಷೇತ್ರದ ತಾಂಬಾ ಗ್ರಾಮದಲ್ಲಿ 483 ದಿವಸ ಉಪವಾಸ ಕುಳಿತಾಗ ರೈತರೊಂದಿಗೆ ನಿಯೋಗವನ್ನು ಡಿಸಿಎಂ ಅವರ ಬಳಿ ಹೋದೆವು. ನಮ್ಮ ಮನವಿ ಎನೆಂದರೆ ಗುತ್ತಿಬಸವಣ್ಣ ಏತ ನೀರಾವರಿ ಕೇಂದ್ರದಲ್ಲಿ 6 ಮೋಟರ್ ಕೆಲಸ ಮಾಡುತ್ತವೆ. ಇದರಿಂದ 97 ಕಿ.ಮಿ ಮಾತ್ರ ಅಂದರೆ ಚಿಕ್ಕರೂಗಿ ವರೆಗೆ ನೀರು ಹರಿಯುತ್ತವೆ. ಮುಂದೆ ನೀರು ಹರಿಯುವುದಿಲ್ಲ. ನಾವು ಸರಕಾರಕ್ಕೆ ಮತ್ತು ಇಲಾಖೆಗೆ ಮನವಿ ಮಾಡಿಕೊಳ್ಳುವದೆನೆಂದರೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಸ್ಕಾಡಾ ಗೇಟ್ ಅಳವಡಿಸಬೇಕು. ಇದರಿಂದ ಸರಿಯಾಗಿ ನೀರು ನಿರ್ವಹಣೆ ಸಾಧ್ಯವಾಗುತ್ತದೆ. ಸ್ಕಾಡಾ ಗೇಟ್ ನಿರ್ಮಾಣದಿಂದ ನೀರು ಪೋಲಾಗುವುದಿಲ್ಲ. ರೈತರಿಗೆ ಅನಕೂಲಕರವಾಗುತ್ತದೆ. ನಮ್ಮ ಮನವಿಯ ಮೇರೆಗೆ ಈಗಾಗಲೇ ಬೋರ್ಡನಲ್ಲಿ ಸ್ಕಾಡಾ ಗೇಟ್ ನಿರ್ಮಾಣ ಮಾಡಬೇಕು ಎಂದು ತಿರ್ಮಾನವಾಗಿದೆ ಎಂದು ತಿಳಿಸಿದರು. ಡಿಪಿಆರ್ ಮಾಡಲ 1.54 ಕೋಟಿ ಪ್ರವಿಜನ್ ಮಾಡಲಾಗಿದೆ. ಈಗಾಗಲೇ ಟೆಂಡರ್ ಆಗಿದೆ. ಸರ್ವೆಕಾರ್ಯ ಮಾಡಲಾಗುತ್ತಿದೆ. ಒಳ್ಳೆ ಸಂದರ್ಭದಲ್ಲಿಸಮರ್ಕವಾಗಿ ರೈತರಿಗೆ ನೀರು ನೀಡಲಾಗಿದೆ. ಹಿಂಗಾರಿ ಬೆಳೆಗಳಿಗೆ ನೀರು ಸಮರ್ಕವಾಗಿ ನೀಡಲಾಗಿದೆ ಎಂದು ಹೇಳಿದರು.
ಆಲಮೇಲದಲ್ಲಿ 54 ಎಕರೆ ವಿಸ್ತೀರ್ಣದ ಕೆರೆ ನಿರ್ಮಾಣ ಮಾಡಲಾಗಿದೆ. ಆಲಮೇಲ, ಬಬಲೇಶ್ವರ, ಪುರದಾಳ, ಮೋರಟಗಿ ಗ್ರಾಮಗಳ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಈಗಾಗಲೇ ಸರಕಾರ ಅನುಮೋದನೆ ನೀಡಿ, ಅನುದಾನವನ್ನು ಒದಗಿಸಿದ್ದು, ಈಗಾಗಲೇ ಟೆಂಡರ್ ಆಗಿದೆ ಎಂದು ತಿಳಿಸಿದರು.
ಕೆಬಿಜೆಎನ್ಎಲ್ ವ್ಯವಸ್ತಾಪಕ ನಿರ್ದೇಶಕ ಮೋಹನ್ರಾಜ್ ಕೆ.ಪಿ. ಮಾತನಾಡಿ, ಕೆಬಿಜೆಎನ್ಎಲ್ ವತಿಯಿಂದ ಈ ಭಾಗದ ರೈತರಿಗೊಸ್ಕರ ನೀರಾವರಿ ಕೊಡುವ ವಿಚಾರದಲ್ಲಿ ಹಲವಾರು ಕೆಲಸಗಳನ್ನು ಕೈಗೆತ್ತುಕೊಂಡಿದ್ದೇವೆ. ಇಂಡಿಯ ಲಿಪ್ಟ್ ಇರಗೇಶನ್ ನಲ್ಲಿ ಮತ್ತೊಂದು ಟ್ರಾನ್ಸಪರಮರ ಅಳವಡಿಸಿ ರೈತರಿಗೆ ಅನೂಕೂಲ ಮಾಡಿ ಕೊಡುವ ಕಾರ್ಯಕ್ರಮ ನೇರವೇರಿಸಲಾಗಿದೆ. ಇನ್ನುಒಂದು ಹೆಚ್ಚುವರಿಯಾಗಿ ಟ್ರಾನ್ಪರ್ಮರ್ ಅಳವಡಿಸಲಾಗುವುದು. ಈ ಲಿಪ್ಟ್ ಇರಿಗೇಶನದಿಂದ ಐಎನ್ಸಿಇ ಕಾಲುವೆಯಿಂದ ರೈತರಿಗೆ ಪರಿಣಾಮಕಾರಿಯಾಗಿ ನೀರು ಸರಬರಾಜು ಮಾಡುವಂತ ಜನಪ್ರತಿನಿಧಿಗಳ ಒತ್ತಾಯವಿದೆ. ಸ್ಕಾಡಾ ನಿರ್ಮಾಣ ಮಾಡಿಕೊಟ್ಟರೆ ಕೊನೆಯವರೆಗೂ ನೀರು ವಿತರಣೆ ಮಾಡಲು ಸಾಧ್ಯ. ಸರ್ಕಾರ ಮನಗೊಂಡಿ ಸ್ಕಾಡಾ ನಿರ್ಮಾಣ ಮಾಡಲು ಸರ್ಕಾರ ಡಿಪಿಆರ್ ಮಾಡಲು ಅನುಮೋದನೆ ಕೊಟ್ಟಿದೆ. ಡಿಪಿಆರ್ ಅವರು ಕೆಲಸ ಪ್ರಾರಂಭ ಮಾಡಿದ್ದು ಇನ್ನು ಒಂದು-ಒಂದುವರೆ ತಿಂಗಳಲ್ಲಿ ಮಾಡುವುದಾಗಿ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸುಮಾರು ವರ್ಷದ ಹಿಂದೆ ಕಾಲುವೆ ಕೆಲಸ ಮಾಡಿದ್ದರಿಂದ ಕಾಲುವೆಗಳು ದುರಸ್ಥಿಯಲ್ಲಿವೆ. ಶಾಸಕ ಅಶೋಕ ಮನಗೂಳಿ ಅವರ ಒತ್ತಾಯದ ಮೇರೆಗೆ 64 ಕಿ.ಮೀ ವರೆಗೆ ಮಾಡಿದ ರಿಪೇರಿ ಕೆಲಸವನ್ನು 64 ಕಿ.ಮೀ ಯಿಂದ 172 ಕಿ.ಮೀ ವರೆಗೆ ಮನವಿಯ ಮೇರೆಗೆ ಡಿಪಿಆರ್ ಮಾಡಲಾಗಿದೆ. ಪೈನಲ್ ಮಾಡಲು ವಿಕ್ಷಣೆ ಮಾಡಲಾಗುತ್ತಿದೆ. ಬಳಗಾನೂರ ಕೆರೆಗೆ ಕಾಲುವೆ ನೀರು ಹರಿದು ಬರುತ್ತದೆ. ಕೆರೆಯಿಂದ ಮುಂದೆ ಕಾಲುಗೆಹೆ ಹರಿಯುವೆಕೆ ವೇಗ ಕಡಿಮೆಯಾಗುತ್ತದೆ. ಶಾಸಕರ ಕೊರಿಕೆ ಮೇರೆಗೆ ಕಾಲುವೆಯಿಂದ ಟೆಲ್ ಎಂಡ್ ವರೆಗೆ ಅದೇ ವೇಗದಲ್ಲಿ ನೀರು ಹರಿಸುವ ಕಾರ್ಯ ಮಾಡಲಾಗುವುದು. ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವದು. ಅಂದಾಜು 2 ಸಾವಿರ ಕೋಟಿ ವೆಚ್ಚ ಬರಬಹುದು ಇನ್ನೂ ತಿರ್ಮಾನ ಮಾಡಿಲ್ಲ. ಸರ್ಕಾರಕ್ಕೆ ಶಿರ್ಘದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸರಕಾರಿ ಸಂಸ್ಥೆಗಳಿಗೆ ಹಲವು ಕೆಬಿಜೆಎನ್ಎಲ್ ಗೆ ಸೇರಿದ ಸ್ಥಳ ನೀಡಲಾಗಿದೆ. ಆಲಮೇಲ ಅಗ್ನಿ ಶಾಮಕ ಕಛೇರಿಗೆ ಒಂದು ಎಕರೆ, ನ್ಯಾಯಾಲಯ ನಿರ್ಮಾಣಕ್ಕೆ 3 ಎಕರೆ, ಕ್ರಿಡಾಂಗಣ ನಿರ್ಮಾಣಕ್ಕೆ 6 ಎಕರೆ 3 ಗುಂಟೆ, ಪ್ರಜಾ ಸೌಧಕ್ಕೆ 3 ಎಕರೆ 3 ಗುಂಟೆ, ಓಒರ್ ಟ್ಯಾಂಕ್ ನಿರ್ಮಾಣಕ್ಕೆ 1 ಎಕರೆ ಹಾಗೂ ಸುಂಗಠಾಣ ಗ್ರಾಮದಲ್ಲಿ ವಸತಿ ನಿಲಯಕ್ಕಾಗಿ ಅರ್ಧ ಎಕರೆ ಹಾಗೂ ಹೋನ್ನಳ್ಳಿ ಯಲ್ಲಿ ಸ್ಮಶಾನಕ್ಕಾಗಿ ಎರಡು ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿಯೂ ಸಿಂದಗಿ ಮತಕ್ಷೇತ್ರದಲ್ಲಿ ನೀರು ನಿರ್ವಹಣೆ ಮಾಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.
ರಾಂಪುರ ಪಿಎ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ರವಿಶಂಕರ, ಮೇಲ್ವಿಚಾರಕ ಅಭಿಯಂತರ ಮನೋಜಕುಮಾರ ಸೇರಿದಂತೆ ಇಲಾಖೆ ಅಧಿಕಾರಿಗಳು ಪತ್ರಿಖಾಗೋಷ್ಠಿಯಲ್ಲಿ ಇದ್ದರು.