ಬಾಲ ಭಾರತಿ ವಿದ್ಯಾ ಮಂದಿರ:ಪ್ರಥಮ ಅಕ್ಷರಭ್ಯಾಸ ಕಾರ್ಯಕ್ರಮ

Bal Bharati Vidya Mandir: First Literacy Program

ತಾಳಿಕೋಟೆ: ಪಟ್ಣಣದ ಬಾಲಭಾರತಿ ವಿದ್ಯಾಮಂದಿರದಲ್ಲಿ ಪ್ರಥಮ ಪಾಠ ಮತ್ತು ಪ್ರಥಮ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಟ್ಟಣದ ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷ ಎಸ್‌.ಎಂ.ಬೆಕಿನಾಳಮಠ ಆಗಮಿಸಿದ್ದರು.  ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಚಿದಂಬರ ಕರಮರಕರ ವಹಿಸಿದ್ದರು. ಕಾರ್ಯದರ್ಶಿ ಬಾಬು ಹಜೇರಿ, ಖಜಾಂಚಿ ಶ್ಯಾಮ ಹಂಚಾಟೆ, ಹಣಮಂತ ಗುಳೇದ, ಶ್ರೀನಿವಾಸ ಸೋನಾರ, ಕಸ್ತೂರಿ ಪ್ರಥಮಶೆಟ್ಟಿ, ಪ್ರಕಾಶ ಉಬಾಳೆ, ಸಿ.ಎಂ.ಹಿರೇಮಠ ಇತರರಿದ್ದರು.  ಗುರುರಾಜ ಚಟ್ಟೇರ ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ಕುಲಕರ್ಣಿ ವಂದಿಸಿದರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.