ಬಾಪೂಜಿ ಸಹಕಾರಿ ಸಂಘ ನೂತನ ಶಾಖೆ ಉದ್ಘಾಟನೆ

Bapuji Cooperative Society new branch inaugurated

ಬಾಪೂಜಿ ಸಹಕಾರಿ ಸಂಘ ನೂತನ ಶಾಖೆ ಉದ್ಘಾಟನೆ 

ಹಾನಗಲ್  06: ಇಲ್ಲಿ ಹೊಸದಾಗಿ ಆರಂಭಿಸಲಾಗಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಶಾಖೆ ಉದ್ಘಾಟಿಸಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. ಗ್ರಾಮೀಣ ಭಾಗದ ಬಡವರು, ಮಧ್ಯಮ ಹಾಗೂ ರೈತಾಪಿ ವರ್ಗಕ್ಕೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರಕಬೇಕಿದೆ. 

ಬ್ಯಾಂಕುಗಳು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೇ ಬೇರೆ ಬೇರೆ ನಾಗರೀಕ ಸೇವೆಗಳನ್ನೂ ಸಹ ನೀಡಲು ಮುಂದೆ ಬರಬೇಕೆಂದರು. 

ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಎ. ಪೀರಜಾದೆ, ಮುಖಂಡರಾದ ಮುಜೀಬ್ ಬಾಳೂರ, ದುದ್ದು ಅಕ್ಕಿವಳ್ಳಿ, ನಾಸೀರ್ ಖಾಜಿ, ನಿಸಾರ ಪಾನವಾಲೆ, ಮುಸ್ತಾಕ್ ಸುತಾರ, ಇರ್ಫಾನ್ ಮಿಠಾಯಿಗಾರ, ಚಮನಸಾಬ ಕಿತ್ತೂರ, ಎಂ.ಎಂ.ಮುಲ್ಲಾ, ಇಲಿಯಾಸ್ ಶಿರಸಿ, ಬಾಬಾಜಾನ್ ಕೊಂಡವಾಡಿ, ಹನೀಫ್ ಜಾಲೆಗಾರ, ತನ್ವೀರ್ ಮಾಸೂರ, ನವೀದ್ ಯಾವಗಲ್ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.