ಹುಕ್ಕೇರಿ 11: ಕರ್ನಾಟಕದ ಪತ್ರಕರ್ತರ ಹಿತರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುರಿಯೊಂದಿಗೆ, ರಾಜ್ಯದ ಏಳು ಪತ್ರಕರ್ತರ ಸಂಘಟನೆಗಳ ರಾಜ್ಯಾಧ್ಯಕ್ಷರು ಒಗ್ಗೂಡಿ "ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾ ಒಕ್ಕೂಟ"ವನ್ನು ರಚಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಸಹಕಾರ ಇಲಾಖೆಯಲ್ಲಿ ಸಂಘವನ್ನು ನೊಂದಾಯಿಸಿ, ಅಧಿಕೃತ ಪರವಾನಗೆ ಪಡೆಯಲಾಗಿದೆ.
ಈ ಐತಿಹಾಸಿಕ ಕ್ಷಣದಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ವಿನಯ್ ಮದ (ನ್ಯೂಸ್ ಪೇಪರ್, ಎಂಪ್ಲಾಯೀಸ್ ವಕಿಂರ್ಗ್ ಜರ್ನಲಿಸ್ಟ್ ಯೂನಿಯನ್), ಎಂ. ಕುಮಾರ್ (ಕರ್ನಾಟಕ ರಾಜ್ಯ ಮಾಧ್ಯಮ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘ), ಶಿವಪ್ರಸಾದ್ ಜಿ. (ರಾಜ್ಯ ಸಂಘಟನ ಕಾರ್ಯದರ್ಶಿ), ಶಾಂತಕುಮಾರ್ (ಕರುನಾಡ ಕಾರ್ಯನಿರತ ಪತ್ರಕರ್ತರ ಸಂಘ), ಶ್ರೀನಿವಾಸ ರಾವ್ ಟಿ.ಎಲ್. (ರಾಜ್ಯ ಜಂಟಿ ಸಂಘಟನ ಕಾರ್ಯದರ್ಶಿ), ಎನ್. ವೇಣುಗೋಪಾಲ (ಸಮಗ್ರ ಕರ್ನಾಟಕ ಪತ್ರಕರ್ತರ ಸಂಘ), ಮತ್ತು ಮನೀಷ್ ಸೂರ್ಯ ಕೆ. (ಕರ್ನಾಟಕ ದಲಿತ ಪತ್ರಕರ್ತರ ವೇದಿಕೆ) ಆಯ್ಕೆಯಾಗಿದ್ದಾರೆ. ಜುಲೈ ತಿಂಗಳಿನಲ್ಲಿ ಮಹಾ ಒಕ್ಕೂಟದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಐದು ಇತರ ಪತ್ರಕರ್ತರ ಸಂಘಟನೆಗಳ ರಾಜ್ಯಾಧ್ಯಕ್ಷರು ಕೂಡ ಈ ಒಕ್ಕೂಟಕ್ಕೆ ಸೇರಲು ಸಮ್ಮತಿಸಿದ್ದಾರೆ. ಉದ್ಘಾಟನೆಯ ನಂತರ, ಎಲ್ಲರೂ ಒಗ್ಗೂಡಿ ರಾಜ್ಯದ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಲಿದ್ದಾರೆ.
ಕರ್ನಾಟಕ ಪತ್ರಕರ್ತರ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಂಗ್ಲೆ ಮಲ್ಲಿಕಾರ್ಜುನ ಅವರನ್ನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಸುನಿಲ್ ಲಾಳಗೆ. ಉಪಾಧ್ಯಕ್ಷರಾದ ಸಂತೋಷ್ ಪಾಟೀಲ್ ಕಾರ್ಯದರ್ಶಿ ಆದಿತ್ಯ ರೋಕಡೆ ಡಾ ರವಿ ಕಾಂಬಳೆ ಶಿವಾಜಿ ಬಾಳೇಶ್ ಗೋಳ ರಮೇಶ್ ತಳವಾರ್ ಶಿವು ಮಾಳಕರಿ ಮಹಮ್ಮದ್ ಅರಿಪ ಪಠಾನ್ ಅಣ್ಣೇಶ್ ಯರನಾಳ ಸದಾನಂದ್ ಎಂ ಹೆಚ್ ಶಾಂತಿನಾಥ್ ಮಗದುಮ್ ಸಚಿನ್ ಮಿಠೇಕರ್ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.