ಕೊಪ್ಪಳ 18: ಇಲ್ಲಿನ ಸಮೂಹ ಸಾವರ್ಥ್ಯ ಕೇಂದ್ರದಲ್ಲಿ ವಾಸಿಸುವ ಬಡ ನಿರ್ಗತಿಕ ವಿಕಲಚೇತನ ಮಕ್ಕಳಲ್ಲಿ ನಗು ಹರಡುವಿಕೆ ಕಾರ್ಯಕ್ರಮ ಮತ್ತು ಅವರಲ್ಲಿ ಚೈತನ್ಯ ಮೂಡಲು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಆಟೋಪಕರಣ ಮತ್ತು ಪಿಟೋಪಕರಣ ಸಾಮಾಗ್ರಿಗಳನ್ನು ವಿತರಣೆ ಮಾಡುವದರ ಮೂಲಕ ಕಿವುಡ ಮೂಗ ವಿಕಲಚೇತನ ಮಕ್ಕಳಿಗೆ ಅವರ ಬೆಳವಣಿಗೆಗಾಗಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿವಿಧ ಸಾಮಗ್ರಿಗಳನ್ನು ದಾನದ ರೂಪದಲ್ಲಿ ವಿತರಣೆ ಮಾಡಲಾಯಿತು.
ಮನೋರಂಜನ ವಸ್ತುಗಳನ್ನು ಒಳಾಂಗಣ ಆಟಗಳು ಮತ್ತು ಸೃಜನಶೀಲ ಸಾಧನಗಳು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಚಟುವಟಿಕೆ ಅವರ ಕಲಿಕೆಯ ವಾತಾವರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಆಟದ ಮೂಲಕ ದೈಹಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮವನ್ನು ಉತ್ತೇಜುಸುತ್ತದೆ ಎಂದು ಸಮಾಗ್ರಿ ವಿತರಣೆ ಮಾಡಿದ ನಂತರ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅಭಿಪ್ರಾಯಪಟ್ಟರುಮುಂದುವರೆದು ಮಾತನಾಡಿ ಮಕ್ಕಳ ಸಂತೋಷ ನಗುವಿಕೆ ಮತ್ತು ಮುಗ್ಧ ಉತ್ಸಾಹವು ಪ್ರತಿಯೊಬ್ಬ ಸದಸ್ಯರನ್ನು ಆಳವಾಗಿ ಸ್ಪರ್ಶಿಸಿದ್ದರಿಂದ ಇದು ನಿಜವಾಗಿಯೂ ಹೃದಯಸ್ಪರ್ಶಿ ಮತ್ತು ಭಾವನಾತ್ಮಕ ಅನುಭವವಾಗಿದೆ.
ಈ ಸರಬರಾಜುಗಳು ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡುವ ನೀರೀಕ್ಷೆ ಇದೆ ಮತ್ತು ಮಕ್ಕಳಿಗೆ ಪೋಷಿಸುವ ವಿಶ್ವಾಸವನ್ನು ಹೆಚ್ಚಿಸುತ್ತದೆ ತಮ್ಮ ಛಲ ಭದ್ಧತೆ ಗಾಗಿ ಸಾಮರ್ಥ್ಯ ಕೇಂದ್ರದ ಶಿಕ್ಷಕರು ಮತ್ತು ಕೇಂದ್ರದ ಉಸ್ತುವಾರಿಗಳ ಪ್ರಯತ್ನಕ್ಕೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಭಿನಂದಿಸುತ್ತದೆ ಎಂದು ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ತಿಳಿಸಿದರು,ಬಡ ಸಮುದಾಯಗಳ ಉನ್ನತಿಗೇರಿಸಲು ನಮ್ಮ ಕ್ಲಬ್ ಬದ್ಧವಾಗಿದೆ ಮತ್ತು ಬೆಂಬಲ ಹಾರೈಕೆ ಪ್ರೋತ್ಸಾಹ ನೀಡಲು ಸದಾ ಸಿದ್ಧವಾಗಿದೆ ಹೆಚ್ಚು ಅಂತರ್ಗತ ಮತ್ತು ಸಹಾನುಭೂತಿಯ ಸಮಾಜವನ್ನು ನಿರ್ಮಿಸಲು ನಮ್ಮ ಸಂಸ್ಥೆ ಕಂಕಣ ಬದ್ಧವಾಗಿ ನಿಂತಿದೆ ಎಂದು ವಿವರಿಸಿ ವಿವಿಧ ಆಟೋಪಕರಣ ಮತ್ತು ಪಿಟೋಪಕರಣ ಗಳ ಸಾಮಗ್ರಿಗಳನ್ನು ಇದೆ ವೇಳೆ ಸಾಮರ್ಥ್ಯ ಕೇಂದ್ರಕ್ಕೆ ಮತ್ತು ಕೇಂದ್ರದ ಆರೈಕೆಯಲ್ಲಿರುವ ಮೂಗ ಕ್ಯೂಡ ವಿಕಲಚೇತನ ಮಕ್ಕಳಿಗೆ ವಿತರಣೆ ಮಾಡಿ ಅವರೆಲ್ಲರನ್ನು ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಪ್ರೋತ್ಸಾಹಿಸಿ ಅಭಿನಂದಿಸಿದರು,ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಧು ಶೆಟ್ಟರ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ,ಖಜಾಂಚಿ ಆಶಾ ಕವಲೂರ್, ಐ ಎಸ್ ಓ ಮಧು ನಿಲೋಗಲ್ ಎಡಿಟರ್ ನಾಗವೇಣಿ ಗರುರ್,ಕಾರ್ಯಕಾರಿ ಸಮಿತಿ ಹಿರಿಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ ನೀತಾ ತಂಬ್ರಳ್ಳಿ, ಸದಸ್ಯರಾದ ಕವಿತಾ ಶೆಟ್ಟರ್, ಹೇಮಾ ಬಳ್ಳಾರಿ ,ಸುಮಂಗಲ ಹಂಚಿನಾಳ ,ಲಕ್ಷ್ಮಿ ಪಾಟೀಲ್, ಶಶಿ ಮಟ್ಟಿ, ಸೇರಿದಂತೆ ಸಾಮರ್ಥ್ಯ ಕೇಂದ್ರದ ಹಂಪಣ್ಣ ಮತ್ತು ಬಸ್ಸಪ್ಪ ಅಲ್ಲದೆ ಅನೇಕರು ಪಾಲ್ಗೊಂಡಿದ್ದರು