ಬೆಳಗಾವಿ 03: ಸಿರಿಗನ್ನಡ ವೇದಿಕೆ ಕಲಬುರಗಿ ಬುದ್ಧ, ಬಸವ, ಅಂಬೇಡ್ಕರ ತ್ರಿರತ್ನ ಪ್ರಶಸ್ತಿಗಳನ್ನು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ನೀಡಿ ಗೌರವಿಸುತ್ತಿದ್ದು, ಶೈಕ್ಷಣಿಕ ಮತ್ತು ಸಮಾಜಿಕ ಸೇವೆ ಪರಿಗಣಿಸಿ ಡಾ. ದುರಗಪ್ಪ ಮುಂಡಗಿ ಇವರಿಗೆ "ರಾಜ್ಯಮಟ್ಟದ ಅಂಬೇಡ್ಕರ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟಿಯವರಾದ ಡಾ. ದುರಗಪ್ಪ ಮುಂಡಗಿ ಅವರು ಶಿವಮೊಗ್ಗದಲ್ಲಿ ಪ್ರಸ್ತುತ ಪ್ರತಿಷ್ಠಿತ ಡಿ. ವಿ. ಎಸ್. ಕಾಲೇಜನಲ್ಲಿ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆ ಹಾಗೂ ಸಾರ್ವಜನಿಕ ಸೇವೆ ಪರಿಗಣಿಸಿ ಸಿರಿಗನ್ನಡ ವೇದಿಕೆ ಕಲಬುರಗಿ ವತಿಯಿಂದ ಡಾ. ದುರಗಪ್ಪ ಮುಂಡಗಿ ಇವರಿಗೆ ರಾಜ್ಯಮಟ್ಟದ ಡಾ. ಬಿ.ಆರ್.ಅಂಬೇಡ್ಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.