ಜೀವಿಯ ಜೀವನದ ಅಸ್ತಿತ್ವಕ್ಕೆ ಪರಿಸರ ಕಾರಣ : ಶಾಸಕ ಪಠಾಣ

Environment is the reason for the existence of living beings: MLA Pathan

ಶಿಗ್ಗಾವಿ 11 : ಭೂಮಿ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಪರಿಸರ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅರಣ್ಯ ಬೆಳೆಸಲು ವಿಶೇಷ ಕ್ರಮಕೈಗೊಳ್ಳುವುದಾಗಿ ಶಾಸಕ ಯಾಸೀರಖಾನ್ ಪಠಾಣ ಹೇಳಿದರು. 

ತಾಲೂಕಿನ ರಾಜೀವ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ದುಂಡಶಿ ವಲಯ ಅರಣ್ಯ ಇಲಾಖೆ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರಿ​‍್ಡಸಿದ್ದ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಪ್ರತಿ ವರ್ಷ ಬೇರೆ, ಬೇರೆ ಧೈಯ ವಾಕ್ಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತದೆ.ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲಿ ಜಾಗೃತಿ ಮೂಡಿಸುವುದು ಮತ್ತು ಪರಿಸರ ಹಾಳು ಮಾಡದಂತೆ ತಡೆಯುವುದಾಗಿದೆ ತಿಳಿಸಿದರು. 

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ಅರಣ್ಯ ಅಧಿಕಾರಿ ರವಿಕುಮಾರ ಪುರಾಣಿಕಮಠ, ಯುವ ಮುಖಂಡರಾದ ಶಿವಾನಂದ ಗುಡ್ಡಣ್ಣವರ, ಫಕ್ಕೀರ​‍್ಪ ಜೋಗತಿ, ಬಿ.ವೈ.ದೊಡ್ಡನಿ, ರಾಜು ಲಮಾಣಿ, ಅಣ್ಣಪ್ಪ ಲಮಾಣಿ, ಶಿವಪ್ಪ ಜಟ್ಟೆಪ್ಪನವರ, ಗುಡ್ಡಪ್ಪ ಗುಡ್ಡಣ್ಣವರ, ಮಾರುತಿ ಕಲಾಲ, ಪಕ್ಕೀರೇಶ ಬೀರವಳಿ, ಡಾ.ಮಂಜುನಾಥ, ಷಣ್ಮುಖ ಉಳ್ಳಾಗಡ್ಡಿ, ಚಂದ್ರು ಓಲೇಕಾರ, ಪ್ರೌಢಶಾಲೆ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.