ಪರಿಸರ ರಕ್ಷಣೆ ನಮ್ಮ ಎಲ್ಲರ ಜವಾಬ್ದಾರಿ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ 05: ತಾಲೂಕಿನ ಕೊಳೂರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವಳಸಂಗ್ ಗ್ರಾಮದ ಅರಣ್ಯವಲಯದಲ್ಲಿ ಯಶವಂತರಾಯಗೌಡ ವಿ ಪಾಟೀಲ್ ಫೌಂಡೇಶನ್ ಪಡನೂರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯ (ಅರಣ್ಯ ಇಲಾಖೆ) ಇಂಡಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವ್ರಕ್ಷೋಧ್ಯಾನ ಸಾವಳಸಂಗ್ ಉಸಿರಿಗಾಗಿ-- ಹಸಿರು ಅಭಿಯಾನ ಕಾರ್ಯಕ್ರಮಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಚಾಲನೆ ನೀಡಿದರು.
ಮೊದಲಿಗೆ ಖಿಂಖಿಂ ಋಐ ನಲ್ಲಿ ಗೆದ್ದ ಖಅಃ ಯ ವಿಜಯೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಿಧನ ಹೊಂದಿದ ಕ್ರೀಡಾ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಮಾಡಲಾಯಿತು. ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು ನಮಗೆ ಅನ್ನ ನೀಡುವುದೇ ಪರಿಸರ, ಪರಿಸರ ಬೆಳೆಸುವ ಜಾಗೃತಿ ಮೂಡಿಸಬೇಕಾಗಿದೆ. ಸಾಮಾಜಿಕ ಅರಣ್ಯ ವಲಯ ಹಾಗೂ ಪ್ರಾದೇಶಿಕ ಅರಣ್ಯವಲಯ ಅಧಿಕಾರಿಗಳ ಸೇವೆಗೆ ಅಭಿನಂದನೆ ವ್ಯಕ್ತಪಡಿಸಿದರು. ಭೂ ವಿಜ್ಞಾನ ಅಧಿಕಾರಿಗಳ ಜೊತೆ ಹೊಸ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ ಈ ಸಾವಲಸಂಗ ಗುಡ್ಡಕ್ಕೆ ನೀರು ಆಗಿದೆ. ನಮಗೆ ಬರುತ್ತಿರುವ ನೀರು ನಾವೆಲ್ಲ ಸರಿಯಾದ ರೀತಿ ಸದುಪಯೋಗ ಪಡಿಸಿಕೊಂಡಿದ್ದೆ ಆದ್ದಲಿ, ನಮ್ಮ ಇಡೀ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಸಾಮಾಜಿಕ ಚಿಂತನೆ ಹಾಗೂ ನೈಸರ್ಗಿಕ ಚಿಂತನೆ ಎಲ್ಲರೂ ಇಟ್ಟುಕೊಳ್ಳಿ ಹಾಗೂ ನಾವೆಲ್ಲ ನಿಸರ್ಗವನ್ನು ಪ್ರೀತಿಸೋಣ ಎಂದು ತಿಳಿಸಿದರು. ಸಾಲು ಮರದ ತಿಮ್ಮಕ್ಕ ಜೀವನ ಶೈಲಿಯನ್ನು ಹಾಗೂ ಅವರಿಗೆ ಇರುವ ಪರಿಸರ ಪ್ರೇಮ ನಾವೆಲ್ಲರೂ ಬೆಳಿಸಿಕೊಳ್ಳೋಣ ಅವರ ನಿಟ್ಟಿನಲ್ಲಿ ನಾವು ಸಾಗೋಣೊ ಪರಿಸರ ಬೆಳಿಸೋಣೊ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ಕಾತ್ರಾಳ - ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಸಿದ್ದೇಶ್ವರ ಸ್ವಾಮೀಜಿ ರವರಿಗೆ ಇರುವ ಪರಿಸರ ಪ್ರೇಮದ ಕುರಿತು ಕೆಲವು ಸನ್ನಿವೇಶಗಳನ್ನು ಭೋದಿಸಿದರು. ಅರಣ್ಯ ಬೆಳಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಹಾಗೂ ರಕ್ಷಿಸೋಣ. ಯಥಾ ದೃಷ್ಟಿ, ತಥಾ ಸೃಷ್ಟಿ , ನಮ್ಮ ದೇಹ ಯಾವ ರೀತಿ ಇರುತ್ತೋ/ ನಾವು ನೋಡುವ ನೋಟ ಚೆನ್ನಾಗಿರುತ್ತೋ - ಅದೇ ರೀತಿ ಪರಿಸರ ಇರುತ್ತೆ. ಹಾಗಾಗಿ ನಮ್ಮ ದೇಹ ರಕ್ಷಿಸುವ ಹಾಗೆ ನಾವೆಲ್ಲ ಪರಿಸರವನ್ನು ರಕ್ಷಿಸಬೇಕು ಎಂದು ಸಂದೇಶ ನೀಡಿದರು.
ಮೊದಲು ಗಿಡದ ಕೆಳಗೆ ಸ್ನಾನ ಮಾಡುವುದರ ಮೂಲಕ ಗಿಡಗಳನ್ನು ಬೆಳಿಸುತ್ತಿದ್ದರು. ಇಂತಹ ಅನೇಕ ಪ್ರೇರಣೆ ಮಾತುಗಳನ್ನು ಹೇಳಿ ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಬೋಧಿಸಿದರು. ಸಮಾರಂಭದಲ್ಲಿ ಶಾಲಾ ಮಕ್ಕಳು ಹಾಗೂ ರೈತರಿಂದ 3300 ಸಸಿ ನೆಡುವುದು ಮತ್ತು ಬೀಜದ ಉಂಡೆ ಬಿತ್ತನೆ ಕಾರ್ಯಕ್ರಮ ಹಾಗೂ ಜಾಗೃತಿಗಾಗಿ -ಉಸಿರುಗಾಗಿ- ಹಸಿರು ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡೋಮನಾಳದ ಎನ್.ಡಿ.ಪಾಟೀಲ, ಮುಖ್ಯ ಅತಿಥಿಗಳಾಗಿ ಬಾದಾಮಿಯ ಎಸ್.ಎಚ್.ವಾಸನ್, ಅರಣ್ಯ ಇಲಾಖೆಯ ಡಿಎಫ್ಒ ವನಿತಾ.ಆರ್, ವಿಜಯಪುರದ ಡಿಎಫ್ಒ ಶಿವಶರಣಯ್ಯ ಕೆ. ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಇಂಡಿಯ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ, ಇಂಡಿ ತಹಶೀಲ್ದಾರ್ ಬಿ.ಎಸ್. ಕಡಕಭಾವಿ, ಚಡಚಣ ತಹಶೀಲ್ದಾರ್ ಎಸ್.ಬಿ. ಇಂಗಳೆ, ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಚಡಚಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ವಿಜಯಪುರದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಚಡಚಣ ಕ್ಷೇತ್ರ ಸಮನ್ವಯಾಧಿಕಾರಿ ಸುಜಾತಾ ಹುನ್ನೂರ, ಹಾಗೂ ಎಸ್. ಆರ್.ನಡುಗಡ್ಡಿ, ಇಂಡಿ ಕೃಷಿ ಇಲಾಖೆ ಸಾಹಯಕ ನಿರ್ದೇಶಕ ಮಹಾದೇವಪ್ಪ ಏವೂರ, ಇಂಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ, ಇಂಡಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಂಯೋಜಕ ಸಾಹೀಲ್ ದನಶೆಟ್ಟಿ, ಇಂಡಿ ಮತ್ತು ಚಡಚಣ ತಾಲೂಕಿನ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಇಂಡಿ-ಚಡಚಣ ತಾಲೂಕಿನ ಎಲ್ಲ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು