ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯೇಕ್ಷರಾದ ಬಿ ಬಿ ಅಸೂಟಿ ಯವರಿಗೆ ಸನ್ಮಾನ

Felicitation to B.B. Asuti, District President of Gadag District Guarantee Implementation Authority

ಗದಗ 08:-  ಹಾಲುಮತ ಪರಂಪರೆಯ ಅನಾವರಣದ ದ್ಯೋತಕವಾಗಿ ಕುರುಬರ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ದಿ ಕರ್ನಾಟಕ ಕುರುಬರ ಸಹಕಾರಿ ಪತ್ತಿನ ಸಂಘವು ಅನುಷ್ಠಾನಗೊಂಡು ನೂರು ವರ್ಷ ಪೂರೈಸಿದ ಪ್ರಯುಕ್ತ ಇದೇ ದಿನಾಂಕ 03/06/2025 ರಂದು ಗದಗ ಶಹರದ ವಿವೇಕಾನಂದ ಸಭಾಂಗಣದಲ್ಲಿ ಜರುಗಿದ ಬ್ರಹತ್ ಸಮಾವೇಶದ ಪ್ರಯುಕ್ತ ವಿಶೇಷ ಲಾಂಚನ, ಹಾಗೂ ಕೈಪಿಡಿ ಬಿಡುಗಡೆಗೊಳಿಸುವ ಮೂಲಕ ಆಚರಿಸಲಾಯಿತು. 

ಈ ಸಂಧರ್ಭದಲ್ಲಿ ಗದಗ ಶಹರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯೇಕ್ಷರಾದ ಬಿ ಬಿ ಅಸೂಟಿ ಯವರನ್ನು ಶಾಲು ಹೊದಿಸಿ ವಿಶೇಷ ನೆನಪಿನ ಕಾಣಿಕೆಯನ್ನು ಅರ​‍್ಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಪ್ರವಾಸೋಧ್ಯೇಮ ಸಚಿವರಾದ ಸನ್ಮಾನ್ಯ ಡಾ, ಎಚ್ ಕೆ ಪಾಟೀಲ್ ಸಾಹೇಬರು, ಗಣ್ಯರಾದ ವಾಸಣ್ಣ ಕುರಡಗಿ, ಗುರುರಾಜ್ ಬಳಗಾನೂರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.