ಮೇವಿಗಾಗಿ ಬೇರೆಡೆಗೆ ವಲಸೆ ಹೊಗುತ್ತಿರುವ ಕುರಿಗಾರರು

Shepherds migrating elsewhere for pasture

ಮಾಂಜರಿ 08: ಕುರಿಗಳ ಪಾಲನೆ ಪೊಷನೆಗಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಕುರಿಗಾರರು ಸಂಸಾರ ಸಮೇತರಾಗಿ ಕಳೆದ 2-3 ದಿಗಳಿಂದ ಮೇವಿಗಾಗಿ ಬಾಗಲಕೋಟ-ವಿಜಯಪೂರ ಜಿಲ್ಲೆಗಳತ್ತ ವಲಸೆ ಹೊಗುತ್ತಿದ್ದಾರೆ,  

ಮುಂಗಾರು ಮಳೆ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಕುರಿಗಾರರು ಇದೀಗ ವಿಜಯಪೂರ, ಬಾಗಲಕೋಟ ದತ್ತ ಹೆಜ್ಜೆ ಹಾಕುತ್ತಿದ್ದಾರೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಅಕ್ಕೋಳ, ಬೇನಾಡಿ, ಖಡಕಲಾಟ, ಹಿರೇಕೋಡಿ, ವಾಳಕಿ, ಜೋಡಕುರಳಿ, ಕುರ್ಲಿ, ಜತ್ರಾಟ, ಕಾರದಗಾ, ಗಳತಗಾ, ಬೇಡಿಕಹಾಳ, ನಾಗರಾಳ, ನನದಿ ಮುಂತಾದ ಗ್ರಾಮಗಳ ನೂರಾರು ಕುರಿಗಾರ ಕುಟುಂಬಗಳು ಪ್ರತಿವರ್ಷ ಮಳೆಗಾಲ ಆರಂಭವಗುತ್ತಿದಂತೆಯೇ, ವಿಜಯಪುರ, ಬಾಗಲಕೋಟ ಜಿಲ್ಲೆಗಳತ್ತ ಕುರಿಮಂದಿಯೊಂದಿಗೆ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ವಲಸೆ ಹೊಗುತ್ತಾರೆ.  

ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ, ನೀರಿನ ಕೋರತೆ, ಮೇವಿನ ಕೋರತೆಯಿಂದಾಗಿ ಕುರಿಗಾರರು ಪರದಾಡುವ ಪ್ರಸಂಗ ಬಂದೂದಗಿತ್ತು. ಮಳೆಗಾಲದಲ್ಲಿ ಹುಲ್ಲು ಮತ್ತಿತ್ತರ ಮೇವಿನ ಮೇಲೆ ಮಳೆ ಹನಿಗಳು ಸಂಗ್ರಹವಾಗುದರಿಂದ ಕುರಿಗಳು ಚನ್ನಾಗಿ ಮೆಯಲು ಆಗುವುದಿಲ್ಲಾ. ಗಡಿಭಾಗದ ಮಳೆಗಾಲದಲ್ಲಿ ಸಿಡಿಲು ಗುಡುಗು ಜೋರಾಗಿ ಬಿಸುವ ಮಳೆ ಮತ್ತು ಗಾಳಿಗಳಲ್ಲಿ ಕುರಿಗಳನ್ನು ರಕ್ಷಿಸಿವುದು ಕಷ್ಟಕರವಾಗುತ್ತಿದೆ. ಅದಕ್ಕೆ ಮಳೆಗಾಲದಲ್ಲಿ  ವಿಜಯಪುರ, ಬಾಗಲಕೋಟದತ್ತ ವಲಸೆ ಹೊಗುತ್ತೆವೆ ಎಂದು ಕುರಿಗಾರರು ಹೇಳುತ್ತಾರೆ.  

ಜೂನ ತಿಂಗಳಿಂದ ನಿಂದ ಸಪ್ಟೆಂಬರ ವರೆಗೆ ಈ ಭಾಗದಲ್ಲಿ ಮಳೆ ಸುರಿಯುತ್ತದೆ. ವಿಜಯಪೂರ, ಬಾಗಲಕೋಟೆ ಕಡೆಗಳಲ್ಲಿ ಮಳೆ ಸ್ವಲ್ಪ ಕಡಿಮೆ ಇರುತ್ತದೆ. ಅಲ್ಲದೇ ಆ ಜಿಲ್ಲೆಗಳಲ್ಲಿ ಬೇಸಿಗೆಯ ಬಿಳಿಜೋಳ ರಾಶಿ ಮುಗಿದು ಕುರಿಗಳಿಗೆ ಮೇಯಲು ಮೇವು ಸಿಗುತ್ತದೆ. ಅದಕ್ಕಾಗಿ ಸುಮಾರು 3-4 ತಿಂಗಳು ಕುರಿಗಳನ್ನು ಹೊಡೆದುಕೊಂಡು ಅತ್ತ ಹೋಗುವುದಾಗಿ ಹೇಳುತ್ತಾರೆ. ದೇವರಲ್ಲಿ ಅಪಾರ ನಂಬಿಕೆಹೊಂದಿರುವ ಹಾಲುಮತ ಕುಟುಂಬಗಳು ಕುರಿಗಳೊಂದಿಗೆ ಊರು ಬಿಡುವ ಮುನ್ನ ಆರಾಧ್ಯ ದೇವರಿಗೆ ಕವಲು ಹಚ್ಚಿ ದೇವರ ಅಪ್ಪಣೆ ಪಡೆದುಕೊಂಡೇ ಹೋಗುವ ಸಂಪ್ರದಾಯವಿದೆ.   

ಇತ್ತೀಚಿನ ದಿನಗಳಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ಕುರಿಗಾರರು ತಮ್ಮವರೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ. ಆದರೂ ವಲಸೆ ಹೋಗುವ ಕುರಿಗಾರರು ನಾನಾ ತೊಂದರೆಗಳನ್ನು ಅನುಭವಿಸುತ್ತಾರೆ. ದಿನವೀಡೀ ಕುರಿಗಳೊಂದಿಗೆ ಸುತ್ತಾಡಿ, ರಾತ್ರಿಯೂ ನಿಶ್ಚಿಂತೆಯಿಂದ ಮಲಗದೇ ಕಣ್ಣಲ್ಲಿ ಕಣ್ಣಿಟ್ಟು ಕುರಿಗಳನ್ನು ಸಾಕುತ್ತಾರೆ. ಗುಡ್ಡಗಾಡು, ಹಳ್ಳಕೊಳ್ಳ ಅಡವಿಗಳಲ್ಲಿ ಕುರಿಗಳೊಂದಿಗೆ ಅಲೆದಾಡುವ ಕುರಿಗಾರರು ಮಳೆಗಾಳಿ, ಬಿಸಿಲಿನ ಅರಿವೂ ಇಲ್ಲದೇ ಕುರಿಗಳ ಪಾಲನೆ, ಪೋಷಣೆ ಮಾಡುತ್ತಾರೆ. ಕುರಿಸಾಕಾಣಿಕೆ ತೀರ ಕಷ್ಟದಾಯಕ ಕಸುಬಾಗಿದ್ದು, ಕುರಿಗಾರರು ಆ ವೃತ್ತಿಯೊಂದಿಗೆ ಮೈಯೊಡ್ಡಿಕೊಂಡು ಬದುಕು ನಡೆಸುತ್ತಾರೆ. 

* ಪ್ರತಿವರ್ಷದಂತೆ ಈ ವರ್ಷವು ಕುರಿಗಳಿಗೆ ಮೇವಿನ ಕೋರತೆ ನೀಗಿಸಲು ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಗಳತ್ತ ಸಂಸಾರ ಸಮೇತ ಕುರಿಗಳನ್ನು ತರಳುತ್ತಿದ್ದೆವೆ ಎನ್ನುತ್ತಾರೆ ಕುರಿಗಾರ ಬೀರಾ​‍್ಪ ಪೂಜಾರಿ ಹಾಗೂ ಲಗಮನ್ನಾ ಹಜಾರೆ ಯವರು.