ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಶ್ವಿನಿಗೆ ಸತ್ಕಾರ

Felicitation to Padma Shri awardee Ashwini

ರಾಯಬಾಗ 10: ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸಂಗೀತಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೂಲತಃ ಜಲಾಲಪೂರ ಗ್ರಾಮದ ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಹೆಮ್ಮೆಯ ಅಶ್ವಿನಿ ರಾಜೇಂದ್ರ ದೇಶಪಾಂಡೆ(ಭೀಡೆ) ದಂಪತಿಗಳನ್ನು ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಶಾಸಕ ಡಿ.ಎಮ್‌.ಐಹೊಳೆಯವರು ಸತ್ಕರಿಸಿದರು.  

ನಮ್ಮ ರಾಯಬಾಗ ವಿಧಾನಸಭಾ ಕ್ಷೇತ್ರದ ಜಲಾಲಪೂರ ಗ್ರಾಮದ ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಹೆಮ್ಮೆಯ ಅಶ್ವಿನಿ ರಾಜೇಂದ್ರ ದೇಶಪಾಂಡೆ(ಭೀಡೆ) ಅವರು ಮೊನ್ನೆ  "ಪದ್ಮಶ್ರೀ ಪ್ರಶಸ್ತಿ" ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ಆಗಮಿಸಿದ ವೇಳೆ ಅವರನ್ನು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸಂಗೀತಕ್ಕೆ ಅದರಲ್ಲೂ ಪ್ರಸಿದ್ಧ "ಜೈಪುರ-ಅತ್ರೌಲಿ" ಖಯಾಲ್ ಸಂಪ್ರದಾಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕಲಾ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.