ಕಂಪ್ಲಿ 11: ಬಿಜೆಪಿಯವರ ರಾಜಕೀಯ ಷಡ್ಯಂತ್ರದಿಂದ ಕಂಪ್ಲಿ ಶಾಸಕರ ಮನೆ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಸಂಸದ, ಶಾಸಕರ ಮನೆ ಮೇಲೆ ದಾಳಿ ಮಾಡಿರುವುದು ತೀವ್ರ ಖಂಡನೀಯ ಎಂದು ಬಳ್ಳಾರಿ ಛಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಿ.ಆರ್.ಹನುಮಂತ ಆರೋಪಿಸಿದರು.
ಪಟ್ಟಣದ ಸಂತೆಮಾರುಕಟ್ಟೆ ಬಳಿಯ ಬೆಳಖಗೋಡ್ ಅಗಸಿಯಲ್ಲಿ ಕಾರಹುಣ್ಣಿಮೆ ಅಂಗವಾಗಿ ಬುಧವಾರ ಎತ್ತುಗಳ ಕರಿ ಹರಿಸಿದ ನಂತರ ಮಾತನಾಡಿ, ಇಡಿಯವರು ಕೇಂದ್ರದ ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯವರಿಗೆ ಅಧಿಕಾರ ಇಲ್ಲದ ಪರಿಣಾಮ ಜನಪರವಾದ ಕಾಂಗ್ರೆಸ್ ಸರ್ಕಾರದ ಶಾಸಕರ ಮೇಲೆ ಇಡಿ ದಾಳಿ ಮಾಡಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ನವರನ್ನು ಕುಗ್ಗಿಸುವ ಹಿನ್ನಲೆಯಲ್ಲಿ ಟಾರ್ಗೆಟ್ ಮಾಡಿ ದಾಳಿ ಮಾಡಿಸುತ್ತಿರುವುದು ಶೋಭೆಯಲ್ಲ, ಎಂದರು. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಕಂಪ್ಲಿಯ ಬೆಳಗೋಡ್ ಅಗಸಿಯಲ್ಲಿ ಎತ್ತುಗಳ ಕರಿ ಹರಿಸುತ್ತಾ ಬರಲಾಗಿದೆ.
ಅದೇ ತರದಲ್ಲಿ ಈ ಬಾರಿಯೂ ಸಹ ಕರಿ ಹರಿಸಲಾಗಿದ್ದು, ಸಮೃದ್ಧ ಮಳೆ, ಬೆಳೆಯೊಂದಿಗೆ ರೈತರ ಬದುಕು ಹಸನಾಗಿರಲಿ ಎಂದರು. ಇಲ್ಲಿ ಹರಿದ ಕರಿಯಲ್ಲಿ ಕೆ.ಮಂಜು ಅವರ ಎತ್ತುಗಳು ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನ, ಶಿಲ್ಡ್, ಯಾಸೀನ್ ಬಾಷಾ ಎಂಬ ರೈತರ ಎತ್ತುಗಳು ದ್ವಿತೀಯ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಶಿಲ್ಡ್ ತನ್ನದಾಗಿಸಿಕೊಂಡರು.
40ಕ್ಕೂ ಎತ್ತುಗಳು ಕರಿಯಲ್ಲಿ ಪಾಳ್ಗೊಂಡಿದ್ದವು. ಕರಿ ಹರಿಯುವ ವೇಳೆ ಜನರ ಶಿಳ್ಯೆ, ಚಪ್ಪಾಳೆ ಮೊಳಗಿದವು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಎಂ.ಸಿ.ಮಾಯಪ್ಪ, ಸಿ.ಎ.ವಿರೂಪಾಕ್ಷಿ, ಸಿ.ಜಗನ್ನಾಥ, ಸಿ.ಎಂ.ರಾಮು, ಹೊನ್ನಾಪುರ ಚನ್ನ, ಕೆ.ಚನ್ನಪ್ಪ, ಸಿ.ಶಿವು, ಎ.ರಾಘು, ನಾಗರಾಜ, ಮಹೇಶ, ರಾಜ, ಬಸುವ, ಶಶಿಕುಮಾರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಯುವಕರು, ಮಕ್ಕಳು ಇದ್ದರು.
ಜೂ.03: ಕಂಪ್ಲಿಯಲ್ಲಿ ನಡೆದ ಎತ್ತುಗಳ ಕರಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ಎತ್ತುಗಳ ಮಾಲೀಕರಿಗೆ ನಗದು ಬಹುಮಾನ ಮತ್ತು ಶಿಲ್ಡ್ ವಿತರಿಸಿದರು.