ಮಾಜಿ ಶಾಸಕ ಸೋಮನಗೌಡ, ಮಾಜಿ ಎಂಎಲ್ಸಿ ಶಹಾಪೂರ ಗೆ ಸನ್ಮಾನ

Felicitation to former MLA Soman Gowda, former MLC Shahapur

ದೇವರಹಿಪ್ಪರಗಿ 11: ನೂತನ ಬಸ್ ನಿಲ್ದಾಣದ ನಿರ್ಮಾಣ ಹಾಗೂ ವೀರಶರಣ ಮಡಿವಾಳ ಮಾಚಿದೇವ ನಾಮಕರಣಕ್ಕೆ ಸಹಕಾರಣರಾದ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅವರ ಕಾರ್ಯ ಶ್ಲಾಘನೀಯ ಎಂದು ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ ಹೇಳಿದರು. 

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಾರ್ವಜನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್ತಿನ ಮಾಜಿಸದಸ್ಯ ಅರುಣ ಶಹಾಪೂರ ಇಬ್ಬರು ನಾಯಕರು ತಾವು ನುಡಿದಂತೆ ನಡೆಯುವುದರ ಮೂಲಕ ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ನಿಲ್ದಾಣಕ್ಕೆ ನಾಮಕರಣ ಪ್ರಕ್ರಿಯೆಯಲ್ಲಿ ಜನತೆಯ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಿ ಬಹುದಿನದ ಪ್ರಯತ್ನಗಳಿಗೆ ಸಹಕಾರ ನೀಡಿ ತಮ್ಮ ಕರ್ತವ್ಯಪ್ರಜ್ಞೆ ತೋರಿದ್ದಾರೆ. ಪಟ್ಟಣದ ಜನತೆ ಅವರಿಗೆ ಚಿರರುಣಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರುಗಳಾದ ಸಂಗಪ್ಪ ತಡವಲ್, ಗೋಲ್ಲಾಳ ಬಿರಾದಾರ, ರಾವುತ ಅಗಸರ, ಮಡುಗೌಡ ಬಿರಾದಾರ, ಸೋಮು ದೇವೂರ, ರಮೇಶ ಹಡಪದ, ವಿನೋದ ಚವ್ಹಾಣ, ಮಹಾಂತೇಶ ಬಿರಾದಾರ, ಮಲ್ಲಪ್ಪ ಭತಗುಣಕಿ, ಸುರೇಶ ಬಿರಾದಾರ, ಹುಸೇನ್ ಗೌಂಡಿ ಸೇರಿದಂತೆ ವಿಜಯಪುರದ ಗೆಳೆಯರ ಬಳಗದ ಸದಸ್ಯರು ಇದ್ದರು. 

ವೀರಶರಣ ಮಡಿವಾಳ ಮಾಚಿದೇವರ ಹೆಸರನ್ನು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಅನೇಕ ಮಹನೀಯರು ಕೈಜೋಡಿಸಿದ್ದಾರೆ ಎಲ್ಲರಿಗೂ ಧನ್ಯವಾದಗಳು. ನೂತನ ಬಸ್ ನಿಲ್ದಾಣಕ್ಕೆ ಶರಣರ ಹೆಸರು ನಾಮಕರಣ ಮಾಡಲಾಗಿದೆ. ಶರಣರ ಹೆಸರಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಪ್ರಯಾಣಿಕರು ಇನ್ಮುಂದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಅವರಿಗೆ ಗೌರವ ನೀಡುವಂತಾಗಬೇಕು.  

ರಮೇಶ ಮಸಬಿನಾಳ.ಪ.ಪಂ ಉಪಾಧ್ಯಕ್ಷರು ದೇವರಹಿಪ್ಪರಗಿ.